Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್

Public TV
Last updated: June 15, 2021 3:03 pm
Public TV
Share
2 Min Read
Sanchari Vijay Tumakuru
SHARE

ತುಮಕೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ಅಗಲಿಕೆ ಕಲ್ಪತರು ನಾಡು ತಿಪಟೂರಿಗೂ ತೀವ್ರ ನೋವು ತಂದಿದೆ. ಶೈಕ್ಷಣಿಕ ದಿನಗಳಲ್ಲಿ ವಿಜಯ್ ಕಳೆದಿರುವ ನೆನಪುಗಳನ್ನು ಸ್ನೇಹಿತರು ಮೆಲುಕು ಹಾಕಿದ್ದಾರೆ.

Sanchari Vijay2 medium

ತುಮಕೂರು ಗಡಿಗೆ ಅಂಟಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿರುವ ಪಂಚನಹಳ್ಳಿಯ ಸಂಚಾರಿ ವಿಜಯ್ ಅವರು ಪಿಯು ಶಿಕ್ಷಣವನ್ನು ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಪಡೆದುಕೊಂಡಿದ್ದರು. ಅವರ ಕಾಲೇಜು ದಿನಗಳಲ್ಲಿ ಅತ್ಯಂತ ಕ್ರೀಯಾ ಶೀಲರಾಗಿದ್ದರು.  ಇದನ್ನೂ ಓದಿ:  ಹೋಟೆಲ್‍ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್

Sanchari Vijay Tumakuru3 medium

1999-2002ರವರೆಗೂ ತಿಪಟೂರಿನಲ್ಲಿದ್ದ ವಿಜಯ್ ಇಲ್ಲಿನ ಗೆಳೆಯರಾದ ವಿಜಯ್, ಗಿರೀಶ್, ವಿಜಯ್, ಮನೋಹರ್ ಮತ್ತಿತರ ಸ್ನೇಹಿತರ ಜೊತೆಗೆ ತಮ್ಮ ಹಳೆಯ ಬೈಸಿಕಲ್‍ನಲ್ಲಿ ಮಾಡಿದ್ದ ಪ್ರವಾಸ ಲೆಕ್ಕಕ್ಕಿಲ್ಲ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆಲ್ಲ ಸೈಕಲ್ ತುಳಿದ ನೆನಪುಗಳನ್ನು ಅವರೇ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ನೆನಪಿಗೋಸ್ಕರ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚಿದ ಯುವಕ

Sanchari Vijay Tumakuru5 medium

ಸೈಕಲ್ ಟೂರ್‍ನಲ್ಲಿ ತಿಪಟೂರು ಬಿಟ್ಟ ಸೈಕಲ್ ನಿಲ್ಲುತ್ತಿದ್ದದ್ದು ಹಾಸನದಲ್ಲಿಯೆ. ಅಂದಿನ ಮಳೆಯ ನಡುವೆಯೇ ಸಾಕಷ್ಟು ಸಲ ಪ್ರವಾಸದ ಪ್ರಯಾಣವನ್ನು ನೆನೆದು ಭಾವುಕರಾಗುತ್ತಾರೆ ಅವರ ಸ್ನೇಹಿತರು. ಗೆಳೆಯರು ಬೈಕ್ ಖರೀದಿಸಿದಾಗಲೂ ವಿಜಯ್ ಚಿಕ್ಕಮಗಳೂರು, ಮುಳ್ಳಯ್ಯನಗಿರಿ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಗೆ ಸಾಕಷ್ಟು ಸಲ ಹೋಗಿ ಬಂದಿರುವ ನೆನಪುಗಳಿವೆ.

Sanchari Vijay Tumakuru8 medium

ವಿಜಯ್ ಪಿಯು ಓದುವಾಗಲೇ ಅವರ ಗೆಳೆಯ ತಿಪಟೂರಿನ ಸಚಿನ್ ಮಾರುತಿ 800 ಕಾರು ಇಟ್ಟುಕೊಂಡಿದ್ದರು. ಅದೇ ಕಾರಿನಲ್ಲಿ ವಿಜಯ್ ಆರಂಭದಲ್ಲಿ ಕಾರು ಕಲಿತದ್ದು. ಸದಾ ಪ್ರವಾಸಕ್ಕೆ ಹಾತೊರೆಯುತ್ತಿದ್ದು ಇವರ ಸ್ನೇಹ ಬಳಗ ಇದೇ ಕಾರಿನಲ್ಲಿ ಅದೆಷ್ಟೊ ಸಲ ಹಲವು ಜಾಗಗಳನ್ನು ಸುತ್ತಾಡಿದೆ.

Sanchari Vijay Tumakuru6 medium

ಪಿಯುಸಿ ನಂತರ ಬಡತನದ ಕಾರಣಕ್ಕೆ ಎರಡು ವರ್ಷ ಓದಿಗೆ ಗುಡ್‍ಬೈ ಹೇಳಿದ್ದ ಸಂಚಾರಿ ವಿಜಯ್ ನಂತರ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿಎಸ್ಸಿಗೆ ಪ್ರವೇಶ ಪಡೆದರು. ಬಳಿಕ ಸಿಇಟಿ ಬರೆದು ಎಂಜಿನಿಯರಿಂಗ್‍ಗೆ ಸೀಟು ಗಿಟ್ಟಿಸಿಕೊಂಡ ಕಾರಣಕ್ಕೆ ತಿಪಟೂರು ಬಿಟ್ಟು ಬೆಂಗಳೂರು ಸೇರಿದರು. ನಂತರ ಅವಕಾಶಗಳು ಸಿಕ್ಕವು, ಪ್ರತಿಭೆಗೆ ಮನ್ನಣೆ ಸಿಕ್ಕಿ ಕೀರ್ತಿ ಪಡೆದರೂ ತಿಪಟೂರು ಜತೆಗೆ ಒಡನಾಟ ಮುಂದುವರಿದಿತ್ತು.

Sanchari Vijay Tumakuru11 medium

ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಸ್ನೇಹಿತರು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುತ್ತಿದ್ದರು. ಊರಿಗೆ ತೆರಳುವಾಗಲೆಲ್ಲಾ ತಿಪಟೂರು ಗೆಳೆಯರನ್ನು ಮಾತನಾಡಿಸಿಕೊಂಡೇ ಹೋಗುತ್ತಿದ್ದರು. ದೊಡ್ಡ ನಟನಾದರೂ ಹಳೆಯದನ್ನು ಮರೆತಿರಲಿಲ್ಲ. ಅವನ ಸಾವು ನಮಗೆ ನಂಬಲಾಗುತ್ತಿಲ್ಲ ಎಂದು ಸ್ನೇಹಿತರು ಕಣ್ಣೀರು ಹಾಕಿದ್ದಾರೆ.

WhatsApp Image 2021 06 15 at 1.50.48 PM 1 medium

TAGGED:cycleSanchari Vijaytumakuruತುಮಕೂರುಪಬ್ಲಿಕ್ ಟಿವಿಪ್ರವಾಸಸಂಚಾರಿ ವಿಜಯ್ಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
10 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
11 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
14 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
24 hours ago

You Might Also Like

Ahmedabad Air India Plane Crash 1
Latest

ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

Public TV
By Public TV
2 minutes ago
Ahmedabad Plane Crash 1 1
Latest

ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

Public TV
By Public TV
29 minutes ago
Jagannath Rath Yatra
Latest

ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

Public TV
By Public TV
53 minutes ago
Temba Bavuma Aiden Markram
Cricket

ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಆಗಲು ಆಫ್ರಿಕಾಗೆ ಬೇಕಿದೆ ಕೇವಲ 69 ರನ್‌!

Public TV
By Public TV
9 hours ago
Vijayapura Rain
Districts

ವಿಜಯಪುರ | ಭಾರಿ ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

Public TV
By Public TV
9 hours ago
ಸಾಂದರ್ಭಿಕ ಚಿತ್ರ
Belgaum

ಬೆಳಗಾವಿ | ಧಾರಾಕಾರ ಮಳೆಗೆ ಕೊಚ್ಚಿಹೋದ ಆಟೋ – ಚಾಲಕ ದುರ್ಮರಣ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?