ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

Public TV
1 Min Read
BDR

ಬೀದರ್: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ನಗರದ ಜನವಾಡ ವಾಟರ್ ಟ್ಯಾಂಕ್ ಬಳಿ ನಡೆದಿದೆ.

ವಿಲ್ಸನ್(30) ಕೊಲೆಯಾದ ದುರ್ದೈವಿ. ಇವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಂತಾಕಿ ಗ್ರಾಮದ ನಿವಾಸಿ. ಹೈದರಾಬಾದ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವಿಲ್ಸನ್ ಹಲವು ದಿನಗಳ ಹಿಂದೆ ಬೀದರ್ ಗೆ ಬಂದಿದ್ದರು. ಇದೀಗ ಅವರ ಕೊಲೆ ನಡೆದಿದ್ದು, ಹತ್ಯೆ ಸಂಬಂಧ ನಿಖರ ಕಾರಣ ತಿಳಿದು ಬಂದಿಲ್ಲ.

vlcsnap 2020 12 01 11h42m58s191

ಸ್ಥಳಕ್ಕೆ ಎಸ್‍ಪಿ ಹಾಗೂ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಕೊಲೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ.

vlcsnap 2020 12 01 11h43m04s254

Share This Article
Leave a Comment

Leave a Reply

Your email address will not be published. Required fields are marked *