– ರಕ್ಷಿಸಲು ಹೋದ ಬಾವನೂ ನೀರುಪಾಲು
ಮೈಸೂರು: ಬಾಮೈದುನನ್ನ ರಕ್ಷಿಸಲು ಹೋದ ಬಾವ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಅಣ್ಣೂರು ಹೊಸಳ್ಳಿ ಕೆರೆಯಲ್ಲಿ ನಡೆದಿದೆ.
ಪ್ರಸನ್ನ (25) ಮತ್ತು ನಿಂಗರಾಜು (35) ಮೃತ ದುರ್ದೈವಿಗಳು. ತಂದೆ ಜೊತೆ ಜಗಳ ಮಾಡಿಕೊಂಡು ಕುಪಿತನಾದ ಪ್ರಸನ್ನ ಕೆರೆಗೆ ಹಾರಿದ್ದಾನೆ. ಬಾಮೈದ ಪ್ರಸನ್ನ ಆತ್ಮಹತ್ಯೆಗೆ ಯತ್ನಸಿದಾಗ ಬಾವ ನಿಂಗರಾಜು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನುರಿತ ಈಜುಪಟುಗಳು ಇಬ್ಬರ ಮೃತದೇಹಗಳನ್ನು ಕೂಡ ಕೆರೆಯಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಹೆಚ್.ಡಿ ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.