ತಂಟೆಗೆ ಬಂದವರಿಗೆ ಬುದ್ದಿ ಕಲಿಸಿ ದೊಡ್ಡ ಸಂದೇಶ ರವಾನಿಸಿದ್ದೀರಿ: ಮೋದಿ ಘರ್ಜನೆ

Public TV
2 Min Read
narendra modi InLeh indian army

– ಶಾಂತಿ ನಮ್ಮ ಬಲಹೀನತೆ ಅಲ್ಲ
– ರಾಷ್ಟ್ರ ರಕ್ಷಣೆಯ ವಿಚಾರ ಬಂದಾಗ ಇಬ್ಬರು ತಾಯಂದಿರನ್ನು ನೆನೆಯುತ್ತೇನೆ
– ಇಡೀ ಭಾರತವೇ ನಿಮ್ಮ ಜೊತೆಗಿದೆ

ಲಡಾಖ್‌: ಭಾರತದ ತಂಟೆಗೆ ಬಂದವರಿಗೆ ಸೈನಿಕರು ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ. ತಂಟೆಕಾರರಿಗೆ ಸೂಕ್ತ ಪ್ರತ್ಯುತ್ತರ ನೀಡಿದ್ದೀರಿ. ಈಗ ಭಾರತದ ಶಕ್ತಿ ಇಡೀ ವಿಶ್ವಕ್ಕೆ ಅರ್ಥವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಲ್ವಾನ್‌ ಘರ್ಷಣೆಯ ಬಳಿಕ ನಿಮು ಸೇನಾ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಗಲ್ವಾನ್ ಕಣಿಯಲ್ಲಿ ಹುತಾತ್ಮರಾದ ಸೈನಿಕರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇದು ದೇಶಕ್ಕೆ ಸರ್ವಸ್ವ ತ್ಯಾಗ ಮಾಡುವ ರಾಷ್ಟ್ರ ಭಕ್ತರ ಭೂಮಿ. ವೀರತ್ವ ನಮ್ಮ‌ ಭೂಮಿಯಲ್ಲಿದೆ. ಆ ವೀರತನ ನಿಮ್ಮ ಮುಖಗಳಲ್ಲಿ ಕಾಣಿಸುತ್ತಿದೆ. ದೇಶದ ಪ್ರತಿ ಮೂಲೆಯಿಂದ ಬಂದ ಸೈನಿಕರು ತಮ್ಮ ಪರಾಕ್ರಮ ತೋರಿಸಿದ್ದಾರೆ. ಅವರ ಪರಾಕ್ರಮಕ್ಕೆ ಇಡೀ ದೇಶ ಗೌರವಿಸುತ್ತಿದೆ. ನಿಮ್ಮ ವೀರತ್ವ ಮತ್ತು ಪರಾಕ್ರಮದಿಂದ ನಾವು ಎದೆಯುಬ್ಬಿಸಿ ನಿಲ್ಲುವಂತಾಗಿದೆ ಎಂದು ಸೈನಿಕರ ಪರಾಕ್ರಮವನ್ನು ಕೊಂಡಾಡಿದರು.

modi 1

ಸೈನಿಕರ ಸೇವೆ ಯಾವುದಕ್ಕೂ ಕಡಿಮೆ ಇಲ್ಲ. ಸಂಕಷ್ಟದ ಸಮಯದಲ್ಲಿ ಎಷ್ಟು ಎತ್ತರದ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ. ಸವಾಲಿನ ಕಾರ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮ ತ್ಯಾಗ ಬಲಿದಾನಕ್ಕೆ ಸಮನಾದದ್ದು ಯಾವುದು ಇಲ್ಲ ಎಂದು ಹೇಳಿದರು.

ಭಾರತ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ. ಶಾಂತಿ ಎನ್ನುವುದು ಬಲಹೀನತೆ ಅಲ್ಲ. ಶಾಂತವಾಗಿರುವುದು ಒಂದು ಶಕ್ತಿ. ಭಾರತೀಯ ಸೇನೆಗೆ ನಾವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ವೇಗವಾಗಿ ಸೇನೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಶಾಂತಿ ಹಾಳು ಮಾಡುವ ಪ್ರಯತ್ನವನ್ನು ಯಾರೇ ಮಾಡಿದರೂ ಸೂಕ್ತ ಉತ್ತರ ನೀಡಲು ಸಿದ್ದ ಎನ್ನುವುದೇ ಇದರ ಅರ್ಥ ಎಂದು ಚೀನಾದ ಹೆಸರನ್ನು ಉಲ್ಲೇಖಿಸದೇ ಮಾತಿನಲ್ಲೇ ಮೋದಿ ತಿರುಗೇಟು ನೀಡಿದರು.

narendra modi InLeh indian army 2

ವಿಸ್ತರಿಸುವ ಯುಗ ಮುಗಿದಿದೆ. ಈಗ ವಿಕಾಸವಾದ ಯುಗ ಆರಂಭವಾಗಿದೆ. ವಿಕಾಸವಾದ ಈಗ ಅವಶ್ಯಕತೆ ಇದೆ. ಕಷ್ಟದ ಕಾಲದಲ್ಲಿ ನಾವು ಜಯಗಳಿಸುತ್ತಲೇ ಇರೋಣ. ಭಾರತದ ಹೊಸ ಕನಸುಗಳೊಂದಿಗೆ ಗಡಿಯಲ್ಲಿ ನೀವೂ ರಕ್ಷಣೆ ನಿಂತಿದ್ದೀರಿ. ಆ ಕನಸುಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಆತ್ಮ ನಿರ್ಭರ ಭಾರತ್ ನಿರ್ಮಾಣ ಮಾಡಿದ ಬಳಿಕ ಭಾರತ ಮತ್ತಷ್ಟು ಶಕ್ತಿಶಾಲಿಯಾಗಲಿದೆ. ದೇಶದ ಜನರು ನಿಮ್ಮೊಂದಿಗೆ ಇರಲಿದ್ದಾರೆ. ವಿಕಾಸವಾದದ ಸ್ಪರ್ಧೆ ನಡೆಯುತ್ತಿದ್ದು ಎಲ್ಲ ದೇಶಗಳು ಇದನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಇಬ್ಬರು ತಾಯಂದಿರನ್ನು ನೆನೆಯುತ್ತೇನೆ. ಭಾರತ ಮಾತೆಯ ಜೊತೆಗೆ ವೀರ ಸೈನಿಕರಿಗೆ ಜನ್ಮ ನೀಡಿದ ಸೈನಿಕರ ತಾಯಂದಿರ ಬಗ್ಗೆ ನೆನೆಯುತ್ತೇನೆ. ಹೆಗಲಿಗೆ ಹೆಗಲು ಕೊಟ್ಟು ಭಾರತ ಮಾತೆ ರಕ್ಷಣೆ ಮಾಡುತ್ತಿದ್ದೀರಿ ಎಂದು ಹೇಳುವ ಮೂಲಕ ಮೋದಿ ಸೈನಿಕರ ಗುಣಗಾನ ಮಾಡಿದರು.

ಸೈನಿಕರ ನೆರವಿಗಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು ಗಡಿ ಭಾಗದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಸೇವಾ ವಸ್ತುಗಳನ್ನು ರವಾನಿಸುವ ವ್ಯವಸ್ಥೆ ಮಾಡಿದ್ದೇವೆ. ತುಂಬಾ ವಿಳಂಬವಾಗಿದ್ದ ಸಿಡಿಎಸ್ ನೇಮಕ ಮಾಡಲಾಗಿದ್ದು ಮೂರು ಸೇನೆಗಳ ನಡುವೆ ಸಮನ್ವಯ ಸಾಧಿಸುತ್ತಿದ್ದೇವೆ. ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡಿದ್ದೇವೆ. ಒನ್ ರ‍್ಯಾಂಕ್ ಒನ್ ಪೆನ್ಷನ್ ಜಾರಿ ತಂದಿದ್ದೇವೆ ಎಂದು ಹೇಳಿದರು.

Share This Article