– ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ
– ಬೈಕ್ಗೆ ಗುದ್ದಿ ಮಗುಚಿ ಬಿದ್ದ ಟ್ರಕ್
ಜೈಪುರ: ಕುಡಿದ ಮತ್ತಿನಲ್ಲಿದ್ದ ಟ್ರಕ್ ಚಾಲಕನೊಬ್ಬ ಬೈಕ್ಗೆ ಗುದ್ದಿ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಮೃತರನ್ನು ರಾಜ್ ಕುಮಾರ್, ಲಾಲ್ ಚಂದ್ ಮತ್ತು ಮೊಹಮ್ಮದ್ ಸಲಾಂ ಎಂದು ಗುರುತಿಸಲಾಗಿದೆ. ಟ್ರಕ್ ಚಾಲಕ ಹರ್ಯಾಣ ಮೂಲದವನು ಎಂದು ತಿಳಿದು ಬಂದಿದೆ. ಟ್ರಕ್ ಚಾಲಕನ ಅಚಾತುರ್ಯದಿಂದ ಈ ಅಪಘಾತ ಸಂಭವಿಸಿದೆ.
ಟ್ರಕ್ ಬಂದು ಬೈಕ್ಗೆ ಗುದ್ದಿದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಟ್ರಕ್ ಚಾಲಕ ಕುಡಿದ ಮತ್ತಿನಲ್ಲಿದ್ದನು, ಹೀಗಾಗಿ ವೇಗವಾಗಿ ಟ್ರಕ್ ಚಲಾಯಿಸಿಕೊಂಡು ಬಂದಿದ್ದಾನೆ. ಬೈಕ್ ಸವಾರರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಇತ್ತ ಅಕ್ಕಿ ಚೀಲಗಳನ್ನು ಹೊತ್ತಿದ್ದ ಟ್ರಕ್ ವೇಗವಾಗಿ ಬಂದು ಬೈಕ್ ಸವಾರರ ಮೇಲೆ ಹರಿದಿದೆ. ಈ ವೇಳೆ ಜೈಪುರ್ ಬ್ರಾಂಪುರಿ ಫ್ಲೈ ಓವರ್ ಬಳಿ ಬೈಕ್ಗೆ ಗುದ್ದಿದ್ದಾನೆ. ಈ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತವಾದ ಕೂಡಲೇ ಟ್ರಕ್ ಮಗುಚಿ ಬಿದ್ದಿದೆ. ಇಲ್ಲವಾದರೆ ಭಾರಿ ಪ್ರಮಾಣದ ಅನಾಹುತವಾಗುತ್ತಿತ್ತು ಎಂದು ಅಲ್ಲೇ ಸ್ಥಳದಲ್ಲಿದ್ದವರು ಹೇಳಿದ್ದಾರೆ.