ಟಿಕ್ರಿ ಗಡಿಯಲ್ಲಿ ರೈತರಿಗಾಗಿ ಮನೆಗಳ ನಿರ್ಮಾಣ – ವೃದ್ಧರಿಗೆ ಎಸಿ, ಕೂಲರ್ ವ್ಯವಸ್ಥೆ

Public TV
1 Min Read
Farmers House Tikri 1

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನ ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಬೇಸಿಗೆ ಆರಂಭವಾದ ಹಿನ್ನೆಲೆ ರೈತರಿಗಾಗಿ ತಾತ್ಕಲಿಕ ಮನೆಗಳನ್ನ ನಿರ್ಮಿಸಲಾಗುತ್ತಿದೆ.

ಈಗಾಗಲೇ ಟಿಕ್ರಿ ಬಾರ್ಡರ್ ನಲ್ಲಿ 25 ಮನೆಗಳನ್ನ ನಿರ್ಮಿಸಲಾಗಿದೆ. ಬಿಸಿಲು ಹೆಚ್ಚಾಗುತ್ತಿರೋದರಿಂದ ರೈತರು ಒಂದು ಸಾವಿರದಿಂದ ಎರಡು ಸಾವಿರದವರೆಗೆ ಮನೆ ನಿರ್ಮಿಸಲು ಚಿಂತನೆ ನಡೆಸಿದ್ದಾರೆ. ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಹೆಚ್ಚಿನ ಮನೆಗಳು ನಿರ್ಮಾಣವಾಗಲಿವೆ ಎಂದು ವರದಿಯಾಗಿದೆ.

Farmers House Tikri

ಪ್ರತಿಭಟನಾ ನಿರತ ರೈತರ ಇಚ್ಛಾಶಕ್ತಿಗೆ ಸಮಾನವಾದ ಭದ್ರವಾದ ಮನೆಗಳನ್ನ ನಿರ್ಮಿಸಲಾಗುತ್ತಿದೆ. ಸರ್ಕಾರ ಮುಂದೊಂದು ದಿನ ತನ್ನ ವಿವಾದಾತ್ಮಕ ಕಾನೂನುಗಳನ್ನು ಹಿಂಪಡೆದುಕೊಳ್ಳುವ ಭರವಸೆ ನಮಗಿದೆ. ಈ ಹೋರಾಟ ದೀರ್ಘವಾಗಿದ್ದು, ರೈತರಿಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಬೇಕಿದೆ. ಬಿಸಿಲು ಹೆಚ್ಚಾಗುತ್ತಿದ್ದು, ಎಸಿ ಮತ್ತು ಕೂಲರ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದು ಕಿಸಾನ್ ಸೋಶಿಯಲ್ ಆರ್ಮಿ ನಾಯಕ ಅನಿಲ್ ಮಲೀಕ್ ಹೇಳುತ್ತಾರೆ.

farmers mahapanchayat

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಭದ್ರವಾದ ಮನೆಗಳು ಅವಶ್ಯಕತೆ ಇದೆ. ಈ ಹೋರಾಟದಲ್ಲಿ ವೃದ್ಧರು, ಮಹಿಳೆಯರು ಸಹ ಪಾಲ್ಗೊಂಡಿದ್ದಾರೆ. ಆದ್ದರಿಂದ ಈ ಎಲ್ಲ ಸೌಕರ್ಯಗಳು ಅನಿವಾರ್ಯ. ಆದ್ರೆ ಸರ್ಕಾರ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದೆ. ಸರ್ಕಾರ ಪೊಲೀಸರು ಮತ್ತು ಅಧಿಕಾರಿಗಳ ಮೂಲಕ ನಮಗೆ ಮನೆಗಳನ್ನ ನಿರ್ಮಿಸದಂತೆ ಒತ್ತಡ ಹಾಕುತ್ತಿದೆ. ಆದ್ರೆ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಮನ್‍ಜಿತ್ ಸಿಂಗ್ ರಾಯ್ ಗುಡುಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *