ಜ. 9ರಂದು ರಾಜ್ಯಾದ್ಯಂತ ರೈಲು ತಡೆ: ವಾಟಾಳ್ ನಾಗರಾಜ್

Public TV
1 Min Read
VATAL

– ಮರಾಠಿ ಅಭಿವೃದ್ಧಿ ನಿಗಮ ವಿರೋಧಿಸಿ ತಡೆ

ಚಾಮರಾಜನಗರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿ ಜನವರಿ 9ರಂದು ರಾಜ್ಯಾದ್ಯಂತ ರೈಲು ತಡೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

vatal 1

ಗಡಿ ಜಿಲ್ಲೆ ಚಾಮರಾಜನಗರದ ಡಿಸಿ ಕಚೇರಿ ಮುಂಭಾಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಮರಾಠ ಅಭಿವೃದ್ಧಿ ನಿಗಮ ರದ್ದಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ಜ.9 ರಂದು ರಾಜ್ಯಾದ್ಯಂತ ರೈಲು ತಡೆ ನಡೆಸುವ ಎಚ್ಚರಿಕೆ ನೀಡಿದರು.

vatal

ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರೈಲು ಹಳಿಗಳ ಮೇಲೆ ಸತ್ಯಾಗ್ರಹ ಕೂರಿಸ್ತಿವಿ. ಜನಗಳ ಮೇಲೆ ರೈಲು ಬಿಡಬೇಕು ಹೊರತು, ರೈಲು ಹೋಗಲೂ ಸಾಧ್ಯವಿಲ್ಲ. ಬೀದರ್ ನಿಂದ ಚಾಮರಾಜನಗರದವರೆಗೆ, ಮಂಗಳೂರಿನಿಂದ ಕೋಲಾರದವರೆಗೆ ರೈಲು ನಿಲ್ದಾಣ ಸೇರಿದಂತೆ ಹಳಿಗಳ ಮೇಲೆ ಕುಳಿತು ಹೋರಾಟ ಮಾಡ್ತೀವಿ. ಎರಡು ಸಾವಿರ ಸಂಘಟನೆಯಿಂದ ರೈಲು ತಡೆಗೆ ಬೆಂಬಲ ಸಿಕ್ಕಿದ್ದು, ಅಂದು ಯಾರೂ ಕೂಡ ಸಾರ್ವಜನಿಕರು ರೈಲಿನಲ್ಲಿ ಪ್ರಯಾಣಿಸಬೇಡಿ. ನಿಲ್ದಾಣಕ್ಕೆ ಬರಬೇಡಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.

Share This Article