ಮುಂಬೈ: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಏಳು ದಿನಗಳ ನಂತರ ಹಾಸ್ಯ ಕಲಾವಿದೆ ಭಾರತಿ ಸಿಂಗ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾರನ್ನ ನವೆಂಬರ್ 21ರಂದು ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಬಂಧಿಸಿತ್ತು. ನವೆಂಬರ್ 23ರಂದು ದಂಪತಿಗೆ ಜಾಮೀನು ಸಿಕ್ಕಿತ್ತು.
ಇನ್ಸ್ಟಾಗ್ರಾಂನಲ್ಲಿ ಪತಿ ಹರ್ಷ್ ಜೊತೆಗಿನ ಸುಂದರ ಫೋಟೋಗಳನ್ನ ಹಂಚಿಕೊಂಡಿರುವ ಭಾರತಿ ಸಿಂಗ್ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕೆಲವೊಮ್ಮೆ ನಮ್ಮಲ್ಲಿರುವ ಆತ್ಮಸ್ಥೈರ್ಯವನ್ನ ಪ್ರದರ್ಶಿಸಲು ಕೆಲ ಪರೀಕ್ಷೆಗಳು ಎದುರಾಗುತ್ತವೆ. ಈ ಪರೀಕ್ಷೆಗಳಲ್ಲಿ ನಮ್ಮ ನ್ಯೂನ್ಯತೆಗಳನ್ನ ಪಕ್ಕಕ್ಕಿರಿಸಿ ಹೋರಾಡಬೇಕಾಗುತ್ತದೆ. ನನ್ನ ಶಕ್ತಿ, ಆತ್ಮಸ್ಥೈರ್ಯ, ಬೆನ್ನಲುಬು, ಬೆಸ್ಟ್ ಫ್ರೆಂಡ್ ಎಲ್ಲವೂ ಒನ್ ಆ್ಯಂಡ್ ಓನ್ಲಿ ಪತಿ ಹರ್ಷ್ ಲಿಂಬಾಚಿಯಾ. ಐ ಲವ್ ಯು ಎಂದು ಬರೆದು ಪತಿಯ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ಬಳಿಕ ಭಾರತಿಯನ್ನ ಕಪಿಲ್ ಶರ್ಮಾ ಶೋನಿಂದ ಕೈ ಬಿಡಲಾಗುವುದು ಎಂದು ವರದಿಯಾಗುತ್ತಿದ್ದು, ಆದ್ರೆ ಈ ಕುರಿತು ವಾಹಿನಿ ಸ್ಪಷ್ಟನೆ ನೀಡಿಲ್ಲ. ಈ ವದಂತಿಗಳ ಬೆನ್ನಲ್ಲೇ ಭಾರತಿ ಸಿಂಗ್ ಬೆಂಬಲಕ್ಕೆ ನಿಂತಿರುವ ಕೃಷ್ಣ ಅಭಿಷೇಕ್ ಆಕೆಗೆ ಎರಡನೇ ಅವಕಾಶ ನೀಡಬೇಕು. ಕಪಿಲ್ ಮತ್ತು ನಾನು ಸದಾ ಭಾರತಿ ಸಿಂಗ್ ಜೊತೆಯಲ್ಲಿರುತ್ತೇವೆ. ವಾಹಿನಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾರದು ಎಂಬ ನಮಗಿದೆ ಎಂದು ಹೇಳಿದ್ದಾರೆ.
View this post on Instagram