ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಮಾನ್ಸೂನ್ ಮಾರುತಗಳು

Public TV
1 Min Read
kerala

ನವದೆಹಲಿ: ನೈಋತ್ಯ ಮಾನ್ಸೂನ್ ಮಾರುತಗಳು ಜೂನ್ 1ಕ್ಕೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Monsoon

ಕೇಂದ್ರ ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವ್ ಅವರು ಈ ಕುರಿತು ಮಾತನಾಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ನೈಋತ್ಯ ಮಾನ್ಸೂನ್ ಮಾರುತಗಳು ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಎಂದು ಮುನ್ಸೂಚನೆ ನೀಡಿದ್ದಾರೆ. ಮೇ 15ರಂದು ಭಾರತ ಹವಾಮಾನ ಇಲಾಖೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದು, ಯಾವ ದಿನಾಂಕದಂದು ಯಾವ ರಾಜ್ಯ ಪ್ರವೇಶಿಸಲಿವೆ, ಅಂದಾಜು ಎಷ್ಟು ಪ್ರಮಾಣದಲ್ಲಿ ಮಳೆ ಸುರಿಸಲಿವೆ ಎಂಬ ಮಾಹಿತಿ ನೀಡಲಿದೆ ಎಂದರು.

monsoon rain

ಮಾನ್ಸೂನ್ ಪ್ರವೇಶದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ, ಎಂದಿನಂತೆ ಜೂನ್ 1ರಂದು ಕೇರಳ ಪ್ರವೇಶಿಸಲಿವೆ. ಇದು ಆರಂಭಿಕ ಸೂಚನೆಯಾಗಿದ್ದು, ಮೇ 15ರಂದು ಹವಾಮಾನ ಇಲಾಖೆ ಅಧಿಕೃತ ಮಾನ್ಸೂನ್ ಮುನ್ಸೂಚನೆ ಹಾಗೂ ಸರಾಸರಿ ಮಳೆಯ ಕುರಿತು ಮಾಹಿತಿ ನೀಡಲಿದೆ ಎಂದು ರಾಜೀವ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

Bengaluru 1 1

ಇತ್ತೀಚೆಗೆ ಭಾರತ ಹವಾಮಾನ ಇಲಾಖೆ ಮಾಹಿತಿ ನಿಡಿದ್ದು, ದೇಶದಲ್ಲಿ ವಾರ್ಷಿಕ ಶೇ.75ರಷ್ಟು ಮಳೆಗೆ ಕಾರಣವಾಗಿರುವ ನೈಋತ್ಯ ಮಾನ್ಸೂನ್ ಮಾರುತಗಳು ಈ ವರ್ಷ ಸಾಮಾನ್ಯ ಮಳೆ ಸುರಿಸುತ್ತವೆ ಎಂದು ತಿಳಿಸಿದೆ. ಈ ವರ್ಷ ಸಾಮಾನ್ಯ ಮಳೆ ಸುರಿಯಲಿದ್ದು, ಇದು ನಮ್ಮ ದೇಶ ಹಾಗೂ ದೇಶದ ಕೃಷಿಕರಿಗೆ ಸಂತಸದ ವಿಚಾರವಾಗಿದೆ ಎಂದು ರಾಜೀವ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *