ಜೂನ್ 21ರಂದು ಚೂಡಾಮಣಿ ಸೂರ್ಯಗ್ರಹಣ

Public TV
1 Min Read
GRAHANA 1

– ಗ್ರಹಣದ ನಂತರ ದೇವರ ದರ್ಶನ

ಬೆಂಗಳೂರು: ಸೌರಮಂಡಲದಲ್ಲಿ ಇದೇ ಭಾನುವಾರ ಆಗಸದಲ್ಲಿ ಮತ್ತೊಂದು ಗ್ರಹಣ ನಡೆಯಲಿದೆ. ಕೊರೊನಾ ಸಮಯದಲ್ಲಿ ನಡೆಯುತ್ತಿರುವ ಗ್ರಹಣದಿಂದಾಗಿ ಸಾಕಷ್ಟು ರಾಶಿಗಳ ಮೇಲೆ ಕೆಟ್ಟ ಫಲಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಮುಂದಿನ ಭಾನುವಾರ ಅಂದರೆ ಜೂನ್ 21ರಂದು ಸೂರ್ಯಗ್ರಹಣ ನಡೆಯಲಿದೆ. ಬೆಳಗ್ಗೆ 10.13ರಿಂದ ಮಧ್ಯಾಹ್ನ 1.32ರವರೆಗೆ ಸೂರ್ಯಗ್ರಹಣ ಸಂಭವಿಸಲಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಚೂಡಾಮಣಿ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಈ ಚೂಡಾಮಣಿ ಸೂರ್ಯಗ್ರಹಣದ ವೇಳೆ ಮನೆಯಿಂದ ಹೊರಬರಬಾರದು. ಮನೆಯಲ್ಲೇ ಇದ್ದು, ದೇವರ ಜಪ-ತಪ ಮಾಡಿ ಗ್ರಹಣ ಮೋಕ್ಷಕಾಲದ ಬಳಿಕ ಶುಚಿರ್ಭೂತರಾಗಿ ದೇವಾಲಯದಲ್ಲಿ ದೇವರ ದರ್ಶನ ಮಾಡೋದು ಪದ್ಧತಿ ಆಗಿದೆ.

GRAHANA 1 1

ಕೊರೊನಾ ವೈರಸ್ ಸಂದರ್ಭದಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಜನದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲೂ ಗ್ರಹಣದ ಸಮಯ ಮುಗಿದ ಮೇಲೆ ದೇವಾಲಯಕ್ಕೆ ಬರುವ ಭಕ್ತರು ಹಚ್ಚಾಗುವ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೇವಾಲಯದಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸಲು ಮುಂದಾಗಿರುವ ದೇವಾಲಯದ ಆಡಳಿತ ಮಂಡಳಿಗಳು ಅಭಿಷೇಕಕ್ಕೆ ಅವಕಾಶ ನೀಡಿಲ್ಲ. ಆದರೆ ಗ್ರಹಣದ ದಿನ ನವಗ್ರಹ ಪ್ರದಕ್ಷಿಣೆಗೆ ಅವಕಾಶವಿದ್ದು, 1 ಬಾರಿಗೆ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕಾಡುಮಲ್ಲೇಶ್ವರ ದೇವಾಲಯದ ಅರ್ಚಕರಾದ ಗಂಗಾಧರ್ ದೀಕ್ಷಿತ್ ಹೇಳಿದ್ದಾರೆ.

GRAHANA 2

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣ ಮಿಥುನ, ಸಿಂಹ ರಾಶಿ ಹಾಗೂ ಮೃಗಶಿರ ನಕ್ಷತ್ರದವರ ಮೇಲೆ ಕೆಟ್ಟ ಪರಿಣಾಮ ಆಗಲಿದೆ. ದೇವಸ್ಥಾನಗಳಿಗೆ ಬರುವ ಭಕ್ತರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಬಾರದು. ಹಿರಿಯರು, ಮಕ್ಕಳು ದೇವಾಲಯಕ್ಕೆ ಬರುವ ಬದಲು ಮನೆಯಲ್ಲೇ ದೇವರ ಪೂಜೆ ಮಾಡಿದರೆ ಉತ್ತಮ ಎಂದು ಗಾಳಿ ಆಂಜನೇಯ ದೇವಸ್ಥಾನದ ಅರ್ಚಕರಾದ ಡಾ.ಶ್ರೀನಿವಾಸ್ ಭಟ್ಟಾಚಾರ್ಯ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *