ಶ್ರೀನಗರ: ಬಿಜೆಪಿ ಮುಖಂಡ ಹಾಗೂ ವಾಟರ್ಗಮ್ ಮುನ್ಸಿಪಲ್ ಕಮಿಟಿ ಉಪಾಧ್ಯಕ್ಷ ಮೆಹ್ರಾಜ್-ಉದ್-ದಿನ್ ಮಲ್ಲನ್ನು ಜಮ್ಮು-ಕಾಶ್ಮೀರದಲ್ಲಿ ಇಂದು ಉಗ್ರರು ಅಪಹರಿಸಿದ್ದಾರೆ.
ವರದಿಗಳ ಪ್ರಕಾರ, ಬಿಜೆಪಿ ಮುಖಂಡ ತನ್ನ ಗೆಳೆಯನನ್ನು ಭೇಟಿಯಾಗಲೆಂದು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸ್ಯಾಂಟ್ರೋ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಧಿಕಾರಿಗಳ ಪ್ರಕಾರ, ಬರಾಮುಲ್ಲಾದ ರಫೀಯಾಬಾದ್ ಪ್ರದೇಶದಿಂದ ಸೊಪೊರೆ ಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಮುಖಂಡನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಕಾಣೆಯಾಗಿರುವ ಬಿಜೆಪಿ ಮುಖಂಡನ ಹುಡುಕಾಟದಲ್ಲಿ ತೊಡಗಿದ್ದಾರೆ.
ಕೆಲ ದಿನಗಳ ಹಿಂದೆ ಉಗ್ರರು, ಕಾಶ್ಮೀರದ ಕೆಲ ಪ್ರದೇಶಗಳಲ್ಲಿ ಬಿಜೆಪಿ ಸೇರಬಾರದೆಂದು ಎಚ್ಚರಿಕೆ ನೀಡುವ ಪೋಸ್ಟರ್ ಗಳನ್ನು ಅಂಟಿಸಿದ್ದರು. ಇದಾದ ನಂತರ ಅಂದರೆ ಜುಲೈ 8 ರಂದು ಬಂಡಿಪೊರೆ ಜಿಲ್ಲೆಯಲ್ಲಿ ಬಿಜೆಪಿ ನಾಯಕ ವಾಸಿಮ್ ಬ್ಯಾರಿ, ತಂದೆ ಹಾಗೂ ಸಹೋದರನನ್ನು ಉಗ್ರರು ಶೂಟೌಟ್ ಮಾಡಿದ್ದರು. ಈ ಘಟನೆಯನ್ನು ಎಲ್ಲಾ ರಾಜಕೀಯ ನಾಯಕರು ಖಂಡಿಸಿದ್ದರು. ಅಲ್ಲದೆ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದರು.
Mehraj Din Malla, BJP leader & vice-president of Watergam Municipal Committee in Baramulla has been kidnapped today. I appeal Home Minister to intervene & provide security to grassroots level leaders of the party: Manzoor Ahmad Bhat, BJP, #JammuandKashmir pic.twitter.com/Smt3Yz3Pka
— ANI (@ANI) July 15, 2020