ಜಮೀರ್ ಅಹ್ಮದ್‍ಗೆ ಸಿಹಿಮುತ್ತು ನೀಡಿ ಸಂಭ್ರಮಿಸಿದ ಅಭಿಮಾನಿ

Public TV
1 Min Read
ZAMEER AHAMAD 1

ಚಿಕ್ಕಬಳ್ಳಾಪುರ: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್‍ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಅಭಿಮಾನಿಯೋರ್ವ ಸಿಹಿಮುತ್ತು ಕೊಟ್ಟು ಸಂಭ್ರಮ ಪಟ್ಟಿದ್ದಾನೆ.

ZAMEER AHMAD 1 medium

ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ ವೆಂಕಟರಮಣಯ್ಯ ಕೊರೊನಾ ಸಂಕಷ್ಟ, ಲಾಕ್‍ಡೌನ್ ಸಮಯದಲ್ಲಿ ಬಡವರ ಹಸಿವು ನೀಗಿಸುವ ಸಲುವಾಗಿ ಅನ್ನ ದಾಸೋಹ ಮಾಡುತ್ತಿದ್ದಾರೆ. ಈ ಅನ್ನ ದಾಸೋಹ ವೀಕ್ಷಣೆ ಮಾಡಲು ಜಮೀರ್ ಅಹ್ಮದ್ ದೊಡ್ಡಬಳ್ಳಾಪುರಕ್ಕೆ ಆಗಮಿಸಿದರು. ಈ ಸಮಯದಲ್ಲಿ ಜಮೀರ್ ಅಹ್ಮದ್ ಅವರನ್ನು ನೋಡಿದ ಖುಷಿಗೆ ಅಭಿಮಾನಿಯೋರ್ವ ಸಿಹಿ ಮುತ್ತು ನೀಡಿದ್ದಾನೆ. ಇದನ್ನೂ ಓದಿ:ಜಮೀರ್ ಅಹ್ಮದ್ ವಿರುದ್ಧ ಸವಿತಾ ಸಮಾಜ ಆಕ್ರೋಶ

ZAMEER AHMAD medium

ಅನ್ನದಾಸೋಹ ವೀಕ್ಷಣೆಯ ಸಮಯದಲ್ಲಿ ಕಾರಿನ ಮೇಲೆ ಜಮೀರ್ ಅಹ್ಮದ್ ಅವರ ಭಾವಚಿತ್ರ ಅಳವಡಿಸಿರುವುದು ಜಮೀರ್ ರವರ ಕಣ್ಣಿಗೆ ಬಿದ್ದಿದೆ, ತಮ್ಮ ಭಾವಚಿತ್ರ ನೋಡಿ ಕಾರಿನಿಂದ ಕೆಳಗಿಳಿದು ಬಂದು ಕಾರಿನ ಚಾಲಕನನ್ನು ಮಾತನಾಡಿದ್ದಾರೆ. ಈ ವೇಳೆ ಜಮೀರ್ ಅವರ ಕೆನ್ನೆಗೆ ಮುತ್ತು ಕೊಟ್ಟು ತನ್ನ ಅಭಿಮಾನ ತೋರಿಸಿದ್ದಾನೆ, ಜಮೀರ್ ಅವರು ಬಂದ ಕಡೆಯಲ್ಲೆಲ್ಲಾ ಅಭಿಮಾನಿಗಳು ಸುತ್ತುವರೆದು ಸೆಲ್ಫಿ, ಫೋಟೋ ತೆಗೆಸಿಕೊಂಡು ಸಂಭ್ರಮಪಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *