ಜನರ ನಿರ್ಲಕ್ಷ್ಯ, ಬೆಂಗ್ಳೂರಿಗೆ ಮತ್ತೆ ಲಾಕ್‍ಡೌನ್ ಫಿಕ್ಸ್ – ಆಗಸ್ಟ್ 15ರ ನಂತರ ಟಫ್ ರೂಲ್ಸ್?

Public TV
2 Min Read
TEST 4

– ಉಸ್ತುವಾರಿ ಸಚಿವ ಅಶೋಕ್ ಸುಳಿವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಫಿಕ್ಸ್ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಆಗಸ್ಟ್ 15ರ ಬಳಿಕ ಹಂತ ಹಂತವಾಗಿ ಬೆಂಗಳೂರು ಲಾಕ್ ಆಗುವ ಸಾಧ್ಯತೆಗಳಿವೆ. 3ನೇ ಅಲೆ ಪ್ರವೇಶ ಹತೋಟಿಗೆ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಂಭವವಿದೆ.

TEST

ಇನ್ನೈದು ದಿನಗಳ ಬಳಿಕ ಬೆಂಗಳೂರು ಲಾಕ್ ಆಗಲಿದೆ. ಮುಂದಿನ ಸೋಮವಾರದಿಂದ ಕಠಿಣ ಕ್ರಮ ಜಾರಿಯಾಗುವ ಸಾಧ್ಯೆಗಳಿದ್ದು, ಆಗಸ್ಟ್ 15ರ ಬಳಿಕ ಏನೆಲ್ಲಾ ನಿಯಮ ಬರಬಹುದು. ಶ್ರಾವಣ ಮಾಸದ ಆರಂಭವಾಗಿದ್ದು, ಇದರ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಕೂಡ ಬರುತ್ತವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ದಂಡೇ ಹರುಬರುವ ಸಾಧ್ಯೆಗಳಿದ್ದು, ಇದಕ್ಕೆ ಬ್ರೇಕ್ ಹಾಕಲು ಧಾರ್ಮಿಕ ದತ್ತಿ ಇಲಾಖೆಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಭಕ್ತರು ಮುಗಿಬೀಳುವುದಕ್ಕೆ ಬ್ರೇಕ್ ಹಾಕುವ ಸಲುವಾಗಿ ದೇವಾಲಯಗಳನ್ನೇ ಬಂದ್ ಮಾಡುವ ಮೂಲಕ ನಿಯಂತ್ರಣ ಅಸ್ತ್ರ ತರಬಹುದು.

TEST 3

ನಗರದ ಪ್ರಮುಖ ದೇಗುಲಗಳು ಬಂದ್ ಮಾಡಬಹುದು. ದರ್ಶನ, ತೀರ್ಥ, ಪ್ರಸಾದ, ಎಲ್ಲಕ್ಕೂ ನಿಷೇಧ ಹೇರಬಹುದು. ಒಂದೊಮ್ಮೆ ದೇವಾಲಯ ತೆರೆಯಲು ಒತ್ತಾಯ ಬಂದರೆ ಮಾರ್ಷಲ್ಸ್, ಪೊಲೀಸ್ ನಿಗಾ ವಹಿಸಬಹುದು. ಅರ್ಚಕರು, ದೇವಾಲಯ ಸಿಬ್ಬಂದಿಗೆ ಪ್ರತಿ ಹಬ್ಬಕ್ಕೆ ಮುನ್ನ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಬಹುದು. ಒಂದು ವೇಳೆ, ದೇಗುಲದ ಓರ್ವ ಸಿಬ್ಬಂದಿಗೆ ಪಾಸಿಟಿವ್ ಬಂದರೆ ದೇಗುಲಕ್ಕೆ ಬೀಗ ಹಾಕುವ ಸಾಧ್ಯತೆಗಳು ಕೂಡ ದಟ್ಟವಾಗಿವೆ.

TEST 2

ಮಾರುಕಟ್ಟೆಗಳು ಹಾಟ್‍ಸ್ಪಾಟ್‍ಗಳಾಗೋ ಆತಂಕವಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಸುವ್ಯವಸ್ಥಿತವಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಬಹುದು. ಸೂಪರ್ ಮಾರುಕಟ್ಟೆ ಐಡಿಯಾಗಳೇ ಬಳಸುವ ಆಲೋಚನೆ ಇದ್ದು, ನಿಗದಿತ ಸಂಖ್ಯೆಯಲ್ಲಿ ಮಾತ್ರ ಜನರು ಓಡಾಟಕ್ಕೆ ಅವಕಾಶ ಮಾಡಿಕೊಡಬಹುದು. ಒಂದು ಬಾರಿಗೆ 100 ಜನರಿಗೆ ಖರೀದಿಗೆ ಅವಕಾಶ ಕೊಡಬಹುದು. ಆ ಗ್ರಾಹಕರು ವಾಪಸ್ ಆದ್ಮೇಲೆ ಉಳಿದವರಿಗೆ ಅವಕಾಶಕ್ಕೆ ಚಿಂತನೆ ನಡೆಸಲಾಗುತ್ತಿದೆ.

TEMPLE

ಮಾರ್ಷಲ್‍ಗಳು, ಪೊಲೀಸರ ಮೂಲಕ ತೀವ್ರ ನಿಗಾ ಇಡಬಹುದು. ಪ್ರತಿ ಹಬ್ಬಗಳ 2 ದಿನ ಮುಂಚಿತವಾಗಿ ಈ ವ್ಯವಸ್ಥೆ ಜಾರಿ ಸಾಧ್ಯತೆ ಇದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿದರೆ ಮಾರ್ಕೆಟ್‍ಗಳಿಗೆ ಬೀಗ ಸಾಧ್ಯತೆ ಇದೆ. ಆದರೆ ಮಾರುಕಟ್ಟೆಗಳ ನಿಯಂತ್ರಣ ಕಷ್ಟ ಕಷ್ಟ. ರೈತರು,ಬಡ ವ್ಯಾಪಾರಿಗಳ ಊಟದ ಲೆಕ್ಕ ನೋಡಿಕೊಂಡೇ ಬಂದ್ ಮಾಡಬೇಕಾಗುತ್ತದೆ. ಹೀಗಾಗಿ ಹೊಸ ಚಿಂತನೆ ಸಹ ಒಳ್ಳೆದಿದೆ. ಆದರೆ ಅಂತಿಮ ತೀರ್ಮಾನ ಪೊಲೀಸ್ ಕಮೀಷನರ್ ಜೊತೆ ಚರ್ಚೆ ಆದ ಮೇಲೆ ಆಗಲಿದೆ.

MARKET

ಇಷ್ಟು ಮಾತ್ರವಲ್ಲದೆ ಆಗಸ್ಟ್ 15ರ ಬಳಿಕ ಜನ ಸೇರೋ ಎಲ್ಲಾ ಕಾರ್ಯಕ್ರಮಗಳು ಬ್ಯಾನ್, ಹುಟ್ಟುಹಬ್ಬ, ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಕೊಡಲ್ಲ ಹಾಗೂ ಫ್ರೆಂಡ್ಸ್, ಫ್ಯಾಮಿಲಿ ಪಾರ್ಟಿ ಯಾವುದಕ್ಕೂ ಪರ್ಮಿಷನ್ ಸಿಗದೇ ಇರುವ ಸಾಧ್ಯತೆಗಳು ಕೂಡ ದಟ್ಟವಾಗಿದೆ. ಸೋಂಕು 500ರ ಗಡಿ ತಲುಪಿದರೆ ವೀಕೆಂಡ್ ಲಾಕ್‍ಡೌನ್ ಫಿಕ್ಸ್ ಆಗಲಿದ್ದು, ಹಂತ ಹಂತವಾಗಿ ದೇವಾಲಯ, ಜಿಮ್, ಮಾರುಕಟ್ಟೆ ಮೇಲೆ ಕಂಟ್ರೋಲ್ ತರಬಹುದು. ಆಗಲೂ ಸೋಂಕು ಇಳಿಮುಖ ಆಗದಿದ್ದರೆ ವೀಕೆಂಡ್ ಲಾಕ್‍ಡೌನ್ ಸಾಧ್ಯತೆ ಇದೆ. ಇವೆಲ್ಲವೂ ಆಗಸ್ಟ್ 15ರ ಬಳಿಕ ಏನೆಲ್ಲಾ ಕ್ರಮ ಆಗಬಹುದು ಅಂತ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರೋ ಕಂದಾಯ ಸಚಿವ ಅಶೋಕ್ ಅವರು ಸುಳಿವು ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *