ಬೆಂಗಳೂರು: ಜನರ ಜೀವ ಉಳಿಸೋದು ಸರ್ಕಾರಕ್ಕೆ ದೊಡ್ಡ ಕೆಲಸ ಅಲ್ಲ. ದಯವಿಟ್ಟು ಜನರ ಜೀವ ಉಳಿಸಿ ಎಂದು ಕಿರುತೆರೆ ಕಲಾವಿದ ರಕ್ಷಿತ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಾನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದು ಬಹಳ ಕಡಿಮೆ. ಆದರೆ ಇಂದು ನಾನು ಕೆಲವು ಮಾಹಿತಿಗಳನ್ನು ನೀಡಲು ಇಷ್ಟ ಪಡುತ್ತೇನೆ. ರಾಜ್ಯದಲ್ಲಿ 14 ಆಕ್ಸಿಜನ್ ಪ್ಲಾಂಟ್ಗಳ ಅವಶ್ಯಕತೆ ಇದೆ. ಒಂದು ಆಕ್ಸಿಜನ್ ಪ್ಲಾಂಟ್ಗೆ 25 ರಿಂದ 30 ಕೋಟಿ ಖರ್ಚಾಗುತ್ತದೆ. ಸರ್ಕಾರಕ್ಕೆ ಇದು ದೊಡ್ಡ ಮೊತ್ತವಲ್ಲ. ನಿಮ್ಮ ರಾಜಕೀಯದ ಜಗಳವನ್ನು ನಿಲ್ಲಿಸಿ ಜನರ ಜೀವ ಉಳಿಸಿ ರಕ್ಷಿತ್ ಹೇಳಿದ್ದಾರೆ.
ಹಲವು ವರ್ಷಗಳ ಬಳಿಕ ರಕ್ಷಿತ್ ಸೋಶಿಯಲ್ ಮೀಡಿಯಾದ ಮೂಲಕ ಬಡವರು ಆಕ್ಸಿಜನ್ ಪಡೆಯುವುದು ಎಷ್ಟು ಕಷ್ಟ ಎಂಬುವುದನ್ನು ವೀಡಿಯೋ ಮಾಡಿ ವಿವರಿಸಿದ್ದಾರೆ. ಅಮೃತ ವರ್ಷಿಣಿ ಧಾರವಾಹಿಯಲ್ಲಿ ನಾಯಕನಾಗಿ ಹಾಗೂ ಯಜಮಾನಿ ಧಾರವಾಹಿಯ ಪ್ರಮುಖ ಪಾತ್ರದಲ್ಲಿ ರಕ್ಷಿತ್ ಅಭಿನಯಿಸಿದ್ದರು.