ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ- ಸುಮಲತಾ

Public TV
1 Min Read
sumalatha

– ಮೈಶುಗರ್ ಕಾರ್ಖಾನೆ ಈ ವರ್ಷ ಆರಂಭ

ಮಂಡ್ಯ: ರಾಜಕೀಯ ವಿರೋಧ ಎಷ್ಟೇ ಇದ್ದರು ಸಹ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ, ನಾನು ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

mys sumalatha

 

ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯ ಕಾಮಗಾರಿಗಳನ್ನು ಸುಮಲತಾ ಅಂಬರೀಶ್ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಶುಗರ್ ಕಾರ್ಖಾನೆ ಈ ವರ್ಷ ಆರಂಭವಾಗುತ್ತದೆ. ಪ್ರತಿಯೊಂದು ವಿಷಕ್ಕೂ ವಿರೋಧಗಳು ಇರುತ್ತವೆ. ಇದರ ಬಗ್ಗೆ ತಲೆಕೆಡಿಸಿಕೊಂಡರೇ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SUMALATHA

ನಾನು ಜನರಿಗೆ ಮಾತು ಕೊಟ್ಟಿರುವ ಪ್ರಕಾರ ಮೈಶುಗರ್ ಕಾರ್ಖಾನೆ ಪುನಾರಂಭವಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರದ ಮೇಲು ಒತ್ತಡ ತರುತ್ತಿದ್ದೇನೆ. ಟೆಂಡರ್‍ನಲ್ಲಿ ಸ್ಪಲ್ಪ ವ್ಯತ್ಯಾಸ ಆಗಿದೆ. ಇದು ಸರಿ ಪಡಿಸಿಕೊಂಡು ಕಾರ್ಖಾನೆಯ ಆರಂಭ ಮಾಡಲಾಗುತ್ತದೆ. ಈ ವರ್ಷದಲ್ಲಿ ಮೈಶುಗರ್ ಆರಂಭವಾಗುತ್ತದೆ. ಇದರಿಂದ ರೈತರಿಗೆ ಒಳ್ಳೆಯದು ಆಗಲಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *