Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜಡೇಜಾ ಬದಲು ಚಹಲ್‌ ಆಟ – ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾ ನಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಜಡೇಜಾ ಬದಲು ಚಹಲ್‌ ಆಟ – ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾ ನಡೆ

Latest

ಜಡೇಜಾ ಬದಲು ಚಹಲ್‌ ಆಟ – ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾ ನಡೆ

Public TV
Last updated: December 4, 2020 9:57 pm
Public TV
Share
3 Min Read
Yuzvendra Chahal
SHARE

– ವಿರೋಧ ವ್ಯಕ್ತಪಡಿಸಿದ ಆಸೀಸ್‌ ಕೋಚ್‌
– ಗಾಯಗೊಂಡಿದ್ದರೂ 9 ರನ್‌ ಸೇರಿಸಿದ್ದ ಜಡೇಜಾ

ಕ್ಯಾನ್ಪೆರಾ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಜಡೇಜಾ ಅವರ ಬದಲಿಗೆ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಮಿಚೆಲ್‌ ಸ್ಟಾರ್ಕ್‌ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರಿನ ಎರಡನೇ ಎಸೆತ ಬೌನ್ಸರ್‌ ಆಗಿತ್ತು. ಈ ಎಸೆತ ಜಡೇಜಾ ಹೆಲ್ಮೆಟ್‌ಗೆ ಬಡಿದು ಬ್ಯಾಕ್‌ವರ್ಡ್‌ ಪಾಯಿಂಟ್‌ಗೆ ಹೋಯಿತು. ಜಡೇಜಾ ಈ ಎಸೆತದಲ್ಲಿ ಒಂದು ರನ್‌ ಓಡಿದರೂ ಅಂಗಣಕ್ಕೆ ವೈದ್ಯಾಧಿಕಾರಿ ಬಂದು ಕನ್ಕಷನ್‌ ಪರೀಕ್ಷೆ ನಡೆಸಿರಲಿಲ್ಲ.

ನಂತರದ ಎಸೆತದಲ್ಲಿ ವಾಷಿಂಗ್ಟನ್‌ ಸುಂದರ್‌ ಔಟಾದ ಕಾರಣ ಮತ್ತೆ ಜಡೇಜಾ ಸ್ಟ್ರೈಕ್‌ಗೆ ಬಂದರು. 4 ಮತ್ತು 5ನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಜಡೇಜಾ ಕೊನೆಯ ಎಸೆತದಲ್ಲಿ 1 ರನ್‌ ತೆಗೆಯುವ ಮೂಲಕ ತಂಡದ ಮೊತ್ತವನ್ನು 160ಕ್ಕೆ ತಂದು ನಿಲ್ಲಿಸಿದರು.

ravindra jadeja 1

ಇನ್ನಿಂಗ್ಸ್‌ ಬ್ರೇಕ್‌ ಸಂದರ್ಭದಲ್ಲಿ ಭಾರತ ತಂಡ ಜಡೇಜಾ ಅವರಿಗೆ ಗಂಭೀರವಾದ ಗಾಯವಾದ ಕಾರಣ ಅವರ ಬದಲು ಯಜುವೇಂದ್ರ ಚಹಲ್‌ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

ಟೀಮ್‌ ಇಂಡಿಯಾ ಕನ್ಕಷನ್‌ ಸಬ್‌ ತೆಗೆದುಕೊಳ್ಳುತ್ತಿರುವುದಾಗಿ ಮ್ಯಾಚ್‌ ರೆಫ್ರಿ ಡೇವಿಡ್‌ ಬೂನ್‌ ಗಮನಕ್ಕೆ ತಂದಿದೆ. ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್ ಮತ್ತು ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ಗೆ ತಿಳಿಸಿದಾಗ ಲ್ಯಾಂಗರ್‌ ಅಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಡೇವಿಡ್‌ ಬೂನ್‌ ಎದುರು ವಾದಕ್ಕಿಳಿದ ಲ್ಯಾಂಗರ್‌ ಇದು ಸರಿಯಾದ ನಿರ್ಧಾರ ಅಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಐಸಿಸಿ ನಿಯಮಗಳನ್ನು ಪಾಲನೆ ಮಾಡಬೇಕಾದ ಕಾರಣ ರೆಫ್ರಿ ಡೇವಿನ್‌ ಬೂನ್‌ ಬದಲಿ ಆಟಗಾರನನ್ನು ಆಡಿಸಲು ಒಪ್ಪಿಗೆ ನೀಡಿದರು.  ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

jadeja

ಚರ್ಚೆ ಏನು?
ರವೀಂದ್ರ ಜಡೇಜಾ ಆಲ್‌ರೌಂಡರ್‌ ಆಟಗಾರನಾಗಿದ್ದು ಗಾಯಗೊಂಡ ಅವರ ಬದಲು ಚಹಲ್‌ ಅವರನ್ನು ಆಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಅಷ್ಟೇ ಅಲ್ಲದೇ ಜಡೇಜಾ ಗಂಭೀರವಾಗಿ ಗಾಯಗೊಂಡಿದ್ದರೆ ಅರ್ಧದಲ್ಲೇ ಕ್ರೀಡಾಂಗಣವನ್ನು ತೊರೆಯಬೇಕಿತ್ತು. ಆದರೆ ನಂತರ 9 ರನ್‌ ಹೊಡೆದಿದ್ದಾರೆ. ಹೀಗಿರುವಾಗ ಗಾಯದ ಬಗ್ಗೆಯೇ ಅನುಮಾನ ಎದ್ದಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಈ ಹಿಂದೆ ಜಡೇಜಾ ಅವರನ್ನು ಟೀಕೆ ಮಾಡಿ ಸುದ್ದಿಯಾಗಿದ್ದ ವೀಕ್ಷಕ ವಿವರಣೆಗಾರ ಸಂಜಯ್‌ ಮಾಂಜ್ರೇಕರ್‌, ಈ ಪಂದ್ಯದ ವೇಳೆ ಭಾರತ ತಂಡ ಕನ್ಕಷನ್‌ ಸಬ್‌ಸ್ಟಿಟ್ಯೂಟ್‌ ನಿಯಮದ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎಂದು ಹೇಳಿ ಬಿಸಿ  ಚರ್ಚೆಗೆ ತುಪ್ಪ ಸುರಿದರು. ಅಷ್ಟೇ ಅಲ್ಲದೇ ಐಸಿಸಿ ಈ ನಿಯಮದ ದುರ್ಬಳಕೆ ಆಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

ind 3

ಈ ಸಂದರ್ಭದಲ್ಲಿ ಕಾಮೆಂಟೇಟರ್‌ ಹರ್ಷ ಭೋಗ್ಲೆ, ಕೆಲ ಪ್ರಕರಣಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತಡವಾಗಿ ಕನ್ಕಷನ್‌ ಗುಣಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಳೆದ ವರ್ಷ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾ ತಂಡ ಇದೇ ರೀತಿ ತಡವಾಗಿ ಕನ್ಕಷನ್‌ ಸಬ್‌ ತೆಗೆದುಕೊಂಡ ಉದಾಹರಣೆ ಇದೆ ಎಂದು ಹೇಳಿ ಟೀಂ ಇಂಡಿಯಾ ನಡೆಯನ್ನು ಸಮರ್ಥಿಸಿಕೊಂಡರು.

ಐಸಿಸಿ ನಿಯಮ ಏನು?
ಬ್ಯಾಟಿಂಗ್‌ ವೇಳೆ ಚೆಂಡು ಬ್ಯಾಟ್ಸ್‌ಮನ್‌ನ ಹೆಲ್ಮೆಟ್‌ಗೆ ಬಡಿದರೆ ಆವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಬದಲಿ ಆಟಗಾರನನ್ನು ಆಡಿಸಬಹದು ಎಂದು ಐಸಿಸಿ 2019ರ ಜುಲೈನಲ್ಲಿ ನಿಯಮವನ್ನು ತಂದಿತ್ತು. ಈ ರೀತಿ ಆಡುವ 11ರ ಬಳಗಕ್ಕೆ ಬದಲಿ ಆಟಗಾರನಾಗಿ ಸೇರುವ ಆಟಗಾರನಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮಾಡುವ ಅವಕಾಶವನ್ನು ನೀಡಲಾಗುತ್ತದೆ.

ಈ ಪಂದ್ಯದಲ್ಲಿ ಜಡೇಜಾ ಔಟಾಗದೇ 44 ರನ್‌(23 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಚಹಲ್‌ 4 ಓವರ್‌ ಎಸೆದು 25 ರನ್‌ ನೀಡಿ 3 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

ind

 

TAGGED:cricketkannada newsRavindra JadejaYuzvendra Chahalಜಡೇಜಾಟೀಂ ಇಂಡಿಯಾಯಜುವೇಂದ್ರ ಚಹಲ್
Share This Article
Facebook Whatsapp Whatsapp Telegram

Cinema news

Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood

You Might Also Like

s 400 2
Latest

ರಷ್ಯಾದ ಸುದರ್ಶನ ಚಕ್ರಕ್ಕೆ ಬಲ – 288 ಎಸ್‌-400 ಕ್ಷಿಪಣಿ ಖರೀದಿಗೆ ಮುಂದಾದ ಭಾರತ

Public TV
By Public TV
6 minutes ago
Byrati Basavaraj 1
Bengaluru City

ರೌಡಿಶೀಟರ್ ಕೊಲೆ ಕೇಸ್; ಬೈರತಿ ಬಸವರಾಜ್‌ಗೆ ಒಂದು ದಿನದ ರಿಲೀಫ್

Public TV
By Public TV
15 minutes ago
urus and shivaratri pooja performed Ladle Mashak Dargah aland Kalaburagi 1
Kalaburagi

ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆ; ಮತ್ತೆ 13 ಮಂದಿಗೆ ಪೂಜೆಗೆ ಕೋರ್ಟ್ ಅವಕಾಶ

Public TV
By Public TV
1 hour ago
Yadagiri Stone Mining
Districts

ಯಾದಗಿರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ – ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ

Public TV
By Public TV
2 hours ago
VIJAYENDRA YATNAL
Latest

ಅಬಕಾರಿ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಏನೂ ಮಾತನಾಡಿಲ್ಲ: ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ

Public TV
By Public TV
2 hours ago
TVK Vijay
Latest

ವಿಜಯ್‌ ರ‍್ಯಾಲಿಯಲ್ಲಿ ದುರಂತ – ಸ್ಥಳದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?