ಚಿನ್ನೀ, ಡಿಕೆ ಶಿವಕುಮಾರ್‌ ರೊಕ್ಕ ಕೊಟ್ಟಿದ್ದಾರೆ, ಗೋವಾಗೆ ಹೋಗ್ತಿದ್ದೀವಿ – ಸಹೋದರನ ಜೊತೆ ಸಿಡಿ ಲೇಡಿ ಟಾಕ್‌

Public TV
2 Min Read
cd lady brother phone talk

ಬೆಂಗಳೂರು: ಪೋಷಕರ ಮೇಲೆ ಒತ್ತಡ ಹಾಕಿ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಯುವತಿ ವಿಡಿಯೋ ರಿಲೀಸ್‌ ಮಾಡಿದ ಬೆನ್ನಲ್ಲೇ ಸಿಡಿ ಲೇಡಿ ತನ್ನ ಸಹೋದರನ ಜೊತೆ ಮಾತನಾಡುತ್ತಿರುವ ಫೋನ್‌ ಕರೆಯ ಆಡಿಯೋ ರಿಲೀಸ್‌ ಆಗಿದೆ.

ಈ ಫೋನ್‌ ಕರೆಯಲ್ಲಿ ಯುವತಿ ಸಹೋದರನ ಜೊತೆ ಮಾತನಾಡುತ್ತಾ, ಊರಿಗೆ ಹೋಗಬೇಡ. ಊರಿಗೆ ಹೋದರೆ ಸಮಸ್ಯೆ ಆಗುತ್ತದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ನೀನಾದ್ರೂ ನಂಗೆ ಸಪೋರ್ಟ್‌ ಮಾಡು ಎಂದು ಹೇಳಿದ್ದಾಳೆ.

ಇದಕ್ಕೆ ಸಹೋದರ ಮುಂದೆ ಏನು ಮಾಡ್ತೀಯಾ ಎಂದು ಕೇಳಿದ್ದಕ್ಕೆ ನಾನು ಮತ್ತು ಆಕಾಶ್‌ ಗೋವಾಗೆ ಹೋಗುತ್ತೇವೆ. ಡಿಕೆ ಶಿವಕುಮಾರ್‌ ನಮಗೆ ರೊಕ್ಕ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾಳೆ. ಈ ಉತ್ತರಕ್ಕೆ ಸಹೋದರ, ಇದೆಲ್ಲ ನಿಂಗೆ ಯಾಕೆ ಬೇಕು ಎಂದು ಕೇಳಿದಾಗ, ಏನು ಆಗಲ್ಲ. ಡಿಕೆ ಶಿವಕುಮಾರ್‌ ಅವರು ನಮಗೆ ಸಹಾಯ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ನಾನು ಗೋವಾಗೆ ಹೋಗುವ ವಿಚಾರ ಅಪ್ಪ, ಅಮ್ಮನಿಗೆ ಯಾವುದೇ ಕಾರಣಕ್ಕೂ ತಿಳಿಸಬೇಡ ಎಂದಿದ್ದಾಳೆ.

ಈ ಸಂದರ್ಭದಲ್ಲಿ ಸಹೋದರ ಈ ಸಿಮ್‌ ಚೇಂಜ್‌ ಮಾಡು ಎಂದಾಗ, ಸಿಮ್‌ ಎಲ್ಲ ಚೇಂಜ್‌ ಮಾಡಿದ್ದೀನಿ, ಬೇಸಿಕ್‌ ಸೆಟ್‌ ಕೊಟ್ಟಿದ್ದಾರೆ. ಅದನ್ನು ಬಳಕೆ ಮಾಡುತ್ತೇನೆ. ಆಕಾಶ್‌ ಫೋನ್‌ ಅನ್ನು ಅವರಿಗೆ ಟ್ರ್ಯಾಕ್‌ ಮಾಡಲು ಆಗಲ್ಲ. ನಿನ್ನನ್ನು ಸಂಪರ್ಕಿಸಿದ್ದರೆ ಸಂಜಯ್‌ ನಗರ, ವಿಜಯನಗರದಲ್ಲಿ ಇರಬಹುದು ಅಂತ ಹೇಳು. ಆರ್‌ಟಿ ನಗರ ಅಂತ ಹೇಳಬೇಡ. ನಾವೆಲ್ಲ ಒಟ್ಟಾಗಿದ್ದೇವೆ. ಬಸ್ಸಿನಲ್ಲಿ ಕುಳಿತ ಬಳಿಕ ಫೋನ್‌ ಮಾಡ್ತೀನಿ ಎಂದು ಹೇಳಿ ಕರೆ ಕಟ್‌ ಮಾಡಿದ್ದಾಳೆ.

ಆಡಿಯೋದಲ್ಲಿ ಏನಿದೆ?
ಸಹೋದರ – ಪಿಜಿಗೆ ಬಂದ್ಯಾ..?
ಯುವತಿ – ಹ ಬಂದೆ..ಹೇಳಪ್ಪಿ. ಯಾಕೆ

ಸಹೋದರ – ಊಟಾ
ಯುವತಿ – ಆಯ್ತು ನಿಂದು
ಸಹೋದರ – ಯಾವಾಗ ಬರ್ತಿಯಾ..? ಉರಿಗೆ?
ಯುವತಿ – ಬರ್ತಿನಿ ಮೂರು ನಾಲ್ಕೈದು ದಿನ. ನನಗೆ ಈಗ ಎಲ್ಲಿಗೂ ಹೋಗಬೇಡ ಅಂತಾ ಹೇಳಿದ್ದಾರೆ.. ಅವರು ಹೇಳಿದಂತೆ ಮಾಡಬೇಕು ಅಂದಿದ್ದಾರೆ.

ಸಹೋದರ – ಯಾರು ಹೇಳಿದ್ದು…?
ಯುವತಿ – ಡಿಕೆ ಶಿವಕುಮಾರ್‌
ಸಹೋದರ – ಬಹಳ ಕೆಟ್ಟದ್ದಾಗುತ್ತೆ ಇದೆಲ್ಲೆ
ಯುವತಿ – ಏನು ಆಗಲ್ಲ ಹೆದರಬೇಡ.. ಪ್ಲೀಸ್ ನನ್ನ ನಂಬು. ಕಾಲಿಗೆ ಬೀಳುತ್ತೇನೆ ನೀನ್ ಒಬ್ಬನಾದ್ರು ಸಪೋರ್ಟ್ ಮಾಡು

ಸಹೋದರ – ನಿನ್ನ ಅಮೇಲೆ ಕೈಬಿಟ್ಟುಬಿಡುತ್ತಾರೆ ಅಮೇಲೆ ಅವರು
ಯುವತಿ – ಬಿಡಲ್ಲ ಅವರು ಬಿಡೋ ಆಗಿದ್ರೆ ಇಲ್ಲಿ ತನಕ ಅವರು ರೊಕ್ಕೊ ನಮಗೆ ಬೇರೆ ಊರಿಗೆ ಹೋಗೋಕೆ ಹೇಳ್ತಿರಲಿಲ್ಲ.. ನಾವ್ ಗೋವಾ ಗೆ ಹೋಗ್ತಿದ್ದೇವೆ.. ಯಾರಿಗೂ ಹೇಳಬೇಡ.. ನಾನು ಆಕಾಶ್ ಇಬ್ಬರೇ, ಬೇರೆ ಯಾರಿಗೂ ಹೇಳಬೇಡ.. ಕಾಲಿಗೆ ಬೀಳುತ್ತೇನೆ ಮಮ್ಮಿಗೂ ಹೇಳಬೇಡ, ಅವ್ವನಿಗೂ ಹೇಳಬೇಡ.
ಯುವತಿ – ನಾನು ಆರ್ ಟಿನಗರದಲ್ಲಿ ಇರಲ್ಲ ಯಾರಾದ್ರು ಕೇಳಿದ್ರೆ ಸಂಜಯನಗರ ಅಥವಾ ವಿಜಯನಗರದಲ್ಲಿ ಇರ್ತಾಳೆ ಅಂತೇಳು

ಸಹೋದರ – ನಿನ್ ಫೋನ್ ಸಿಮ್ ತೆಗಿ ಫೋನ್ ಸಿಮ್ ತೆಗಿ
ಯುವತಿ – ಇಲ್ಲ ನನ್ ಫೋನ್ ಎಲ್ಲಾ ಕಸ್ಕೊಂಡವ್ರೆ ಅವ್ರು, ಸಿಮ್ ಕಾರ್ಡ್ ಎಲ್ಲಾ ತೆಗೆದಿದ್ದೀನಿ , ನಂಗೊಂದು ಆಕಾಶ್ ಮೊಬೈಲ್ ಟ್ರ್ಯಾಪ್ ಮಾಡೋಕೆ ಆಗಲ್ಲ ತಲೆ ಕೆಡಿಸ್ಕೊಬೇಡ
ಯುವತಿ – ನಾನು ಆಕಾಶ್ ಒಂದು ಏಳೆಂಟು ಜನ ಡಿಕೆಶಿ ಮನೆ ಹತ್ರ ಬಂದಿದ್ದೀವಿ, ಡಿಕೆ ಶಿವಕುಮಾರ್ ಹತ್ರ ಅವರೆಲ್ಲಾ ಮಾತಾಡವ್ರೆ, ಚಿನ್ನಿ ಬಸ್ಸಿನಲ್ಲಿ ಕುಳಿತ ಬಳಿಕ ಕಾಲ್‌ ಮಾಡ್ತೀನಿ.

Share This Article
Leave a Comment

Leave a Reply

Your email address will not be published. Required fields are marked *