ಚಕ್ರವರ್ತಿ ನನಗೆ ಒಂದು ಪಂಜರ ಕಟ್ಟಿಕೊಟ್ಟಿದ್ದಾರೆ ಎಂದಿದ್ಯಾಕೆ ಪ್ರಿಯಾಂಕಾ?

Public TV
1 Min Read
chakravrthi and priyanka

ದೊಡ್ಮನೆಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳ ಆಟದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಮನಸ್ತಾಪಗಳ ಬಗ್ಗೆ ಮಾತನಾಡುವಂತಾಗಿದೆ. ನನ್ನನ್ನು ಬಿಗ್‍ಮನೆಯ ಹೊರಗೆ ನಾನು ಹೀಗೆ ಎಂದು ಒಂದು ಪಂಜರವನ್ನು ಚಕ್ರವರ್ತಿ ಚಂದ್ರಚೂಡ್ ಅವರು ಕಟ್ಟಿಕೊಟ್ಟಿದ್ದಾರೆ ಎಂದು ಪ್ರಿಯಾಂಕಾ ತಿಮ್ಮೆಶ್ ಸುದೀಪ್ ಮುಂದೆ ದೂರಿಕೊಂಡಿದ್ದಾರೆ.

SUDEEP 1 medium
ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ ಕಿಚ್ಚ, ಪ್ರಿಯಾಂಕಾ ಮತ್ತು ಚಕ್ರವರ್ತಿಯವರೆ ನಿಮ್ಮಿಬ್ಬರ ಸಮಸ್ಯೆ ಏನು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ, ಪ್ರಿಯಾಂಕಾ ಅವರು ಲಾಸ್ಟ್ ಇನ್ನಿಂಗ್ಸ್ ನಲ್ಲಿ ನನ್ನೊಂದಿಗೆ ತುಂಬಾ ಜಗಳವಾಡಿದ್ದಾರೆ. ಈ ಇನ್ನಿಂಗ್ಸ್ ನಲ್ಲಿ ಆ ತರಹ ಏನು ಆಗಿಲ್ಲ. ಆದರೆ ನಾನು ಅವರ ಬಗ್ಗೆ ಹೇಳಿದ ಮಾತುಗಳನ್ನು ಅವರು ಮನಸ್ಸಿನಲ್ಲಿಟ್ಟುಕೊಂಡು ನೊಂದಿದ್ದಾರೆ ಅನಿಸುತ್ತೀದೆ ಎಂದರು.

priyanka medium

ನಾನು ಮತ್ತು ಶಮಂತ್ ಈ ಹಿಂದೆ ಊಟಮಾಡಿಸಬೇಕೆಂಬ ಒಂದು ಚಾಲೆಂಜ್ ಹಾಕಿಕೊಂಡಾಗ ಮತ್ತು ನಾನು ದಿವ್ಯಾ ಸುರೇಶ್ ಜೊತೆಗಿದ್ದಾಗ ಚಕ್ರವರ್ತಿಯವರು ನನ್ನೊಂದಿಗೆ ನಡೆದುಕೊಂಡ ವರ್ತನೆ ನನಗೆ ಇಷ್ಟ ಆಗಿಲ್ಲ. ಅವರ ಮಾತುಗಳು ನನಗೆ ತುಂಬಾ ಚುಚ್ಚಿದಂತೆ ಆಗುತ್ತದೆ. ಹಾಗಾಗಿ ನಾನು ನನ್ನ ಪಾಡಿಗೆ ಇದ್ದೇನೆ ಎಂದು ಪ್ರಿಯಾಂಕಾ ಬೇಸರತೊಡಿಕೊಂಡರು. ಇದನ್ನೂ ಓದಿ: ಅರವಿಂದ್‍ಗೆ ಕಥೆ ಹೇಳಿದ ಸುದೀಪ್

chakravrthi medium

ಇದನ್ನು ಕೇಳಿಸಿಕೊಂಡ ಚಕ್ರವರ್ತಿ ಇಲ್ಲ ನಾನು ಪ್ರಿಯಾಂಕಾ ಅವರಿಗೆ ಹೇಳಿದ ಸಾಂತ್ವನದ ಮಾತು ಅವರಿಗೆ ಇಷ್ಟ ಆಗಿಲ್ಲ. ನನಗೆ ಅವರ ನಾಟಕದ ಮಾತು ಹಿಡಿಸಿಲ್ಲ. ಅವರ ಸ್ವಭಾವದಿಂದಾಗಿ ಅವರು ನನಗೆ ಕಾಣಿಸದಂತೆ ಆಗಿದ್ದಾರೆ ಎಂದರು.

ಸರ್ ನನ್ನ ಸ್ವಭಾವ ಮತ್ತು ಇತರ ವಿಷಗಳನ್ನು ತೆಗೆದುಕೊಂಡು ನನ್ನನ್ನು ಹೊರ ಪ್ರಪಂಚದಲ್ಲಿ ಅವರು ಬೇರೆ ರೀತಿ ಅರ್ಥ ಮಾಡಿಸಿದ್ದಾರೆ ಇದು ನನಗೆ ಇಷ್ಟ ಇಲ್ಲ. ಅವರು ಹೊರ ಪ್ರಪಂಚಕ್ಕೆ ನಾನು ಹೀಗೆ ಎಂದು ಪಂಜರವೊಂದನ್ನು ಹಾಕಿದ್ದಾರೆ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *