ರಾಯಚೂರು: ಗ್ರಾಮ ಪಂಚಾಯತಿ ಸ್ಥಾನಗಳನ್ನ ಹರಾಜು ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡುವಂತ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಇ.ಜೆ.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಆದ್ರೆ ಗ್ರಾಮದ ಯುವಕರು ಹರಾಜಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಹಾರಾಜಿನ ಆಯ್ಕೆಯನ್ನ ರದ್ದುಮಾಡಿ ಗ್ರಾಮದಲ್ಲಿ ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆಯಾಗಿದೆ.
ಗ್ರಾಮದಲ್ಲಿ ಸಭೆ ಸೇರಿ ಇಜೆ ಹೊಸಳ್ಳಿಯ 4 ಸ್ಥಾನಗಳನ್ನ ಪ್ರತಿ ಸದಸ್ಯತ್ವಕ್ಕೆ 3 ಲಕ್ಷ 10 ಸಾವಿರ ರೂಪಾಯಿಯಂತೆ ಹರಾಜು ಹಾಕಲಾಗಿತ್ತು. ಹೊಸಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 30 ಸ್ಥಾನಗಳಿದ್ದು ಇಜೆ ಹೊಸಳ್ಳಿ ಗ್ರಾಮದ 4 ಸ್ಥಾನಗಳಿಗೆ ಹರಾಜು ನಡೆದಿತ್ತು. ಗ್ರಾಮದ ದುರ್ಗಾದೇವಿ ಗುಡಿಯ ಕಲ್ಯಾಣ ಮಂಟಪಕ್ಕಾಗಿ ಹರಾಜಿಗೆ ಗ್ರಾಮಸ್ಥರು ಮುಂದಾಗಿದ್ದರು.
ಎರಡನೇ ಹಂತದಲ್ಲಿ ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ ಮತದಾನ ನಡೆಯದೆ ಸದಸ್ಯರನ್ನ ಆಯ್ಕೆ ಮಾಡಲು ಗ್ರಾಮಸ್ಥರು ಮುಂದಾಗಿದ್ದರು. ಸದಸ್ಯ ಸ್ಥಾನಕ್ಕೆ ಹರಾಜು ಕೂಗಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.