ಗೋವಿಗೆ ಗುಂಡಿಕ್ಕಿ ಸಾಯಿಸಿದ ಆರೋಪಿಗಳ ಬಂಧನ

Public TV
1 Min Read
Madikeri police3

ಮಡಿಕೇರಿ: ಗೋವಿಗೆ ಗುಂಡಿಕ್ಕಿ ಸಾಯಿಸಿ, ತಡೆಯಲು ಹೋದವರಿಗೆ ಕೋವಿ ತೋರಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Madikeri police medium

ಕುಂಜಿಲ ಗ್ರಾಮದ ಮಹಮ್ಮದ್ ಜಾಬೀರ್(27), ಅಬ್ದುಲ್ ಸಲಾಂ(45), ಸಿಯಾಬ್ ಪಿ.ಎ. (29), ಮಹಮ್ಮದ್ ಪಿ.ಎ (26), ಬಂಧಿತ ಆರೋಪಿಗಳಾಗಿದ್ದಾರೆ. ಮನೆಯಲ್ಲಿ ಸಾಕಿದ ಗೋವುಗಳಿಗೆ ಗುಂಡಿಕ್ಕಿ ಹತ್ಯೆಮಾಡುವುದಕ್ಕೆ ಸಂಬಂಧಿಸಿಂತೆ ಜಿಲ್ಲೆಯಾದ್ಯಂತ ವ್ಯಾಪಕ ವಿರೋಧವ್ಯಕ್ತವಾಗಿತ್ತು. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಯಾವ ಪ್ರವಾಸಿಗರು ನಮ್ಮ ಜಿಲ್ಲೆಗೆ ಬರುವುದು ಬೇಡ: ಕೆ.ಜಿ ಬೋಪಯ್ಯ

Madikeri police9 medium

ಇದೇ ರೀತಿ ಪ್ರಕರಣಗಳು ಮುಂದುವರೆದಲ್ಲಿ ಬೀದಿಗಿಳಿದು ಹೋರಾಟನಡೆಸುವುದಾಗಿ ವಿವಿಧ ಸಂಘಟನೆಗಳು ಹೇಳಿಕೆ ನೀಡಿದ್ದವು. ಈ ಬೆನ್ನಲ್ಲೇ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಗ್ಗೋಡ್ಲುಗ್ರಾಮದ ದೇವಜನ ರಂಜನ್ ಎಂಬುವರ ಹಸುವನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಜಿಲ ಗ್ರಾಮದ ಮಹಮ್ಮದ್ ರಿಯಾಜ್ ಎಂಬ ಆರೋಪಿಯನ್ನು ಪೊಲೀಸರು ಎರಡುದಿನದ ಹಿಂದೆ ಬಂಧಿಸಿದ್ದರು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Police Jeep

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾವೃತ್ತ ನಿರೀಕ್ಷಕ ರವಿಕಿರಣ್, ಸಿಬ್ಬಂದಿ ಸದಾಶಿವ, ದಿನೇಶ್, ಶಜನ್, ಕೃಷ್ಣಮೂರ್ತಿ, ಮಂಜು, ಚಾಲಕ ಪ್ರವೀಣ್ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *