Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಗೋಕರ್ಣ: ಗ್ರಹಣಕಾಲದಲ್ಲಿ ಸಮುದ್ರದಲ್ಲಿ ಮಿಂದೆದ್ದ ಮಹಾಬಲೇಶ್ವರ ಭಕ್ತರು

Public TV
Last updated: June 21, 2020 3:44 pm
Public TV
Share
2 Min Read
Gokarna Sea Bathing 1
SHARE

ಕಾರವಾರ: ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸ್ಥಳೀಯ ಜನರು ಹಾಗೂ ಯಾತ್ರಿಕರು ಸಮುದ್ರ ಸ್ನಾನ ಮಾಡಿ ಗ್ರಹಣ ದೋಷ ನಿವಾರಣೆಗಾಗಿ ಜಪತಪ ಕೈಗೊಂಡರು.

ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಗೋಕರ್ಣದ ಕಡಲತೀರಕ್ಕೆ ಆಗಮಿಸಿದ ಜನರು ಮೊದಲು ಪವಿತ್ರ ಸಮುದ್ರ ಸ್ನಾನ ನೆರವೇರಿಸಿದರು. ನಂತರ ಕಡಲತೀರದ ಮರಳಿನಲ್ಲಿ ಲಿಂಗವನ್ನು ಸೃಷ್ಟಿಸಿ ಪೂಜೆ ನೆರವೇರಿಸಿ ಗ್ರಹಣ ಮುಗಿಯುವವರೆಗೂ ಮಹಾಬಲೇಶ್ವರನ ಧ್ಯಾನದಲ್ಲಿ ನಿರತರಾಗಿ ನಂತರ ಗೋಕರ್ಣದ ಮಹಾಬಲೇಶ್ವರನ ದರ್ಶನ ನೆರವೇರಿಸಿದರು.

Gokarna Sea Bathing 3

ಸಮುದ್ರ ಸ್ನಾನ-ಆರೋಗ್ಯಕ್ಕೂ ಹಿತ: ಹಲವು ನದಿಗಳು ಸೇರುವ ಅರಬ್ಬಿ ಸಮುದ್ರದ ಗೋಕರ್ಣ ಕಡಲತೀರವು ಮಹೇಶ್ವರನ ಆತ್ಮಲಿಂಗ ನೆಲೆಯೂರಿದ ಸ್ಥಳವಾಗಿದೆ. ಧಾರ್ಮಿಕ ಕಾರಣದಿಂದ ಗೋಕರ್ಣ ವಿಶೇಷ ಸ್ಥಾನ ಪಡೆದಿದ್ದು, ಇಲ್ಲಿನ ಸಮುದ್ರವೂ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಸಮುದ್ರಕ್ಕೆ ಹಲವು ನದಿಗಳು ಸೇರುವುದರಿಂದ ಸಮುದ್ರಕ್ಕೆ ಮಹಾ ಗಂಗಾ ಎಂದು ಹೇಳಲಾಗುತ್ತದೆ. ಹಲವು ರೋಗ ರುಜನೆಗಳನ್ನು ಪರಿಹರಿಸುವ ಶಕ್ತಿ ಈ ಸಮುದ್ರಕ್ಕಿದೆ ಎಂಬ ನಂಬಿಕೆಯಾಗಿದ್ದು, ನಮ್ಮ ದೇಹದ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕುತ್ತದೆ ಎಂಬ ನಂಬಿಕೆ.

ಗ್ರಹಣ ಸಮಯದಲ್ಲಿ ಸಮುದ್ರ ಹಾಗೂ ನದಿ ಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರದ ನೀರು ಉಪ್ಪಾಗಿರುವ ಕಾರಣದಿಂದ ಅದು ಚರ್ಮ ರೋಗಗಳನ್ನು ನಿವಾರಣೆ ಮಾಡಿ ದೇಹಕ್ಕೆ ಒಳ್ಳೆಯದನ್ನು ಮಾಡಲಿದೆ ಎನ್ನುತ್ತೆ ವಿಜ್ಞಾನ. ನಮ್ಮ ಪೂರ್ವಜರು ಹಿಂದಿನಿಂದಲೂ ಈ ರೀತಿಯ ಸ್ನಾನದ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಸಮುದ್ರ ಸ್ನಾನ ಮಾಡುವುದರಿಂದ ನೀರಿನ ತೇಜದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವೂ ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತದೆ.

Gokarna Sea Bathing 4

ಸಮುದ್ರದಲ್ಲಿ ಸ್ನಾನ ಮಾಡುವುದಕ್ಕಿಂತ ಮೊದಲು ಜನರು ಜಲದೇವತೆಯನ್ನು ಪ್ರಾರ್ಥಿಸಿ ಸೂರ್ಯನಮಸ್ಕಾರ ಹಾಗೂ ಅರ್ಗೆಯನ್ನು ಕೊಟ್ಟು ಪೂಜಿಸುತ್ತಾರೆ. ನಂತರ ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸೂರ್ಯನಿಗೆ ಮುಖ ಮಾಡಿ ಗ್ರಹಣ ಕಳೆಯುವವರೆಗೂ ಇಷ್ಟ ದೇವರ ಜಪ ಮಾಡಲಾಗುತ್ತದೆ. ಹೀಗೆ ಮಾಡುವ ಮೂಲಕ ದೇಹದ ನೆಗಟಿವ್ ಎನರ್ಜಿಯನ್ನು ಹೊರಹಾಕಿ ಮನಸ್ಸು ಶುಭ್ರತೆಯಡೆ ತಿರುಗುತ್ತದೆ ಎಂಬುದು ನಂಬಿಕೆ ಇದ್ದು, ಇಂದು ನೂರಾರು ಜನರು ಸಮುದ್ರ ಸ್ನಾನ ಮಾಡಿ ಗೋಕರ್ಣದ ಮಹಾಬಲೇಶ್ವರನ ಪೂಜೆ ಗೈದು ಗ್ರಹಣ ದೋಷ ಪರಿಹಾರಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

Gokarna Sea Bathing 2

TAGGED:GokarnakarwarMahabaleshwarNegative EnergyPublic TVSea BathingSolar Eclipse 2020ಕಾರವಾರಗೋಕರ್ಣನೆಗೆಟಿವ್ ಎನರ್ಜಿಪಬ್ಲಿಕ್ ಟಿವಿಮಹಾಬಲೇಶ್ವರಸಮುದ್ರ ಸ್ನಾನಸೂರ್ಯ ಗ್ರಹಣ
Share This Article
Facebook Whatsapp Whatsapp Telegram

Cinema Updates

Mangli 2
ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ
19 minutes ago
Singer Mangli
ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!
16 hours ago
Katrina Kaif
ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ
1 day ago
ZEE Kannada 2
ಹೊಸ ಅಧ್ಯಾಯಕ್ಕೆ ʻಜೀ ಕನ್ನಡʼ ಮುನ್ನುಡಿ…
2 days ago

You Might Also Like

Bellary ED Raid
Bellary

ಗಣಿ ನಾಡಲ್ಲಿ ‘ಕೈ’ ನಾಯಕರ ಬೆವರಿಳಿಸಿದ ಇಡಿ – ಮಹತ್ವದ ದಾಖಲೆಗಳು ವಶಕ್ಕೆ

Public TV
By Public TV
20 minutes ago
KRS Toll Price Hike
Districts

ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೇಬಿಗೆ ಕತ್ತರಿ – 500 ಮೀ. ಸೇತುವೆ ದಾಟಲು 200 ರೂ.

Public TV
By Public TV
59 minutes ago
weather
Chikkamagaluru

ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ

Public TV
By Public TV
1 hour ago
Electronic City Flyover Accident copy
Bengaluru City

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ – ಬೈಕ್ ಸವಾರನಿಗೆ ಗಾಯ

Public TV
By Public TV
1 hour ago
Raichuru
Districts

ಧಾರಾಕಾರ ಮಳೆಗೆ 101 ಬಾಗಿಲುಗಳುಳ್ಳ 160 ವರ್ಷಗಳ ಕಟ್ಟಡ ಕುಸಿತ

Public TV
By Public TV
9 hours ago
Rain Landslide Udupi
Districts

ಉಡುಪಿ | ಭಾರೀ ಮಳೆಗೆ ರೈಲ್ವೇ ಸೇತುವೆ ಬಳಿಯೇ ಭೂಕುಸಿತ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?