ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ- ರೈಫಲ್ ದೋಚಿ ಉಗ್ರರು ಪರಾರಿ

Public TV
1 Min Read
jammu

ಶ್ರೀನಗರ: ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಪಾಂಡಚ್ ಪ್ರದೇಶದ ಬಳಿ ಬುಧವಾರ ಮಧ್ಯಾಹ್ನ ಅರೆಸೇನಾ ಪಡೆ 37ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಬಿಎಸ್‍ಎಫ್ ಯೋಧರು ಹುತಾತ್ಮರಾಗಿದ್ದಾರೆ. ದಾಳಿ ವೇಳೆ ಉಗ್ರರು ಯೋಧರ ರೈಫಲ್ ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಪಾಂಡಚ್ ಬಳಿಯ ಬಿಎಸ್‍ಎಫ್ ಪಡೆ ಮೇಲೆ ಉಗ್ರರು ನಿರಂತರವಾಗಿ ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಯೋಧರನ್ನು ಸಮೀಪದ ಸ್ಕಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಯೋಧರು ಸಾವನ್ನಪ್ಪಿದ್ದರು ಎಂದು ವೈದ್ಯರು ಪ್ರಕಟಿಸಿದರು.

ಘಟನೆಯ ಬೆನ್ನಲ್ಲೇ ಶ್ರೀನಗರ, ಪಾಂಡಚ್ ಜಿಲ್ಲೆಯ ಗಡಿ ಪ್ರದೇಶವನ್ನು ಬಿಎಸ್‍ಎಫ್ ಯೋಧರು ವಶಕ್ಕೆ ಪಡೆದಿದ್ದು, ಉಗ್ರರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *