ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು

Public TV
1 Min Read
BIHAR NARAYAN SING

ಬಿಹಾರ: ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವಾಗಲೇ ಪಕ್ಷೇತರ ಅಭ್ಯರ್ಥಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಶಿಯೋಹರ್ ನ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದ ಜನತಾದಳ ರಾಷ್ಟ್ರವಾದಿ ಪಕ್ಷದ ಅಭ್ಯರ್ಥಿ ನಾರಾಯಣ್ ಸಿಂಗ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

ನಾರಾಯಣ್ ಅವರು ಅಕ್ಟೋಬರ್ 28 ರಂದು ನಿಗದಿಯಾಗಿದ್ದ ಮತದಾನದ ಮೊದಲ ಹಂತದ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಆಗಮಿಸಿದ್ದ ಇಬ್ಬರು ಹಂತಕರು ನಾರಾಯಣ್ ಸಿಂಗ್ ಅವರ ಮೇಲೆ ಗುಂಡುಹಾರಿಸಿ ಹತ್ಯೆಗೈದಿದ್ದಾರೆ.

ಶನಿವಾರ ಪೂರ್ಣಿಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹತ್ಸರ್ ಗ್ರಾಮದಲ್ಲಿ ಮತ ಚಲಾಯಿಸಲು ನಾರಾಯಣ್ ಬಂದಿದ್ದರು. ಈ ವೇಳೆ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

Police Jeep 1 2 medium

ಎದೆಗೆ ಗುಂಡು ಬಡಿದ ಕಾರಣ ಬೆಂಬಲಿಗರು ನಾರಾಯಣ್ ಸಿಂಗ್ ಅವರನ್ನು ಶಿಯೋಹರ್ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾರಾಯಣ್ ಅವರ ಸ್ಥಿತಿ ಗಂಭಿರವಾದ ಕಾರಣ ನಂತರ ಅವರನ್ನು ಸೀತಾಮರ್ಹಿಯಲ್ಲಿರುವ ನಂದಿತ್ ಮೆಮೋರಿಯಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು ಆದರೆ ದಾರಿಯ ಮಧ್ಯದಲ್ಲೆ ನಾರಾಯಣ್ ಕೊನೆ ಉಸಿರು ಎಳೆದಿದ್ದಾರೆ. ವೈದ್ಯರು ನಾರಾಯಣ್ ಸಾವನ್ನು ಖಚಿತ ಪಡಿಸಿದ್ದಾರೆ.

police 1 e1585506284178 4 medium

ಈ ವೇಳೆ ನಾರಾಯಣ್ ಸಿಂಗ್‍ನ ಇಬ್ಬರು ಸಹಚರರಿಗೆ ಬುಲೆಟ್ ಬಿದ್ದು ಗಾಯಗಳಾಗಿವೆ. ಇವರನ್ನು ಶಿಯೋಹರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ನಾರಾಯಣ್ ಸಿಂಗ್ ಮೆಲೆ ಗುಂಡಿನ ಸುರಿಮಳೆ ಗೈದಿರುವ ದುಷ್ಕರ್ಮಿಗಳಲ್ಲಿ ಓರ್ವನನ್ನು ಬೆಂಬಲಿಗರು ಹೊಡೆದು ಕೊಂದಿದ್ದಾರೆ. ಕೊಲೆಯಾದ ನಾರಾಯಣ್ ಸಿಂಗ್ ಮೇಲೆ 24 ಕ್ರಿಮಿನಲ್ ಕೇಸ್ ದಾಖಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *