ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಗಡಿಗೋಪುರ ಟಾಸ್ಕ್ ಬಹಳ ರೋಚಕವಾಗಿ ಸಾಗಿತ್ತು. ಈ ನಡುವೆ ಬಿಗ್ಬಾಸ್ ಕಡೆಯಾದಾಗಿ ನೀಡಿದ ಅವಕಾಶದಲ್ಲಿ ಜಾತ್ರೆ ತಂಡದ ಸದಸ್ಯರು ಮತ್ತು ಅನುಬಂಧ ತಂಡದ ಸದಸ್ಯರ ನಡುವೆ ಆಟದ ನಡುವೆ ಮಾತಿನ ಚಕಮಕಿಯು ಜೋರಾಗಿತ್ತು. ಈ ವೇಳೆ ಪ್ರಶಾಂತ್ ಸಂಬರಗಿ ಹೇಳಿದ ಆ ಒಂದು ಮಾತಿನಿಂದ ಸಿಟ್ಟಿಗೆದ್ದ ದಿವ್ಯ ಉರುಡುಗ ಪ್ರಶಾಂತ್ಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಗಡಿಗೋಪುರ ಟಾಸ್ಕ್ ಅಂಗವಾಗಿ ಇಟ್ಟಿಗೆ ಹೊಡೆಯುವ ಸ್ಪರ್ಧೆಯಲ್ಲಿ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತು. ಈ ಸಂದರ್ಭ ದಿವ್ಯ ಉರುಡುಗ ಕೈಯಲ್ಲಿದ್ದ ಒಂದು ಇಟ್ಟಿಗೆಯನ್ನು ಪ್ರಶಾಂತ್ ಎಳೆದುಕೊಂಡು ಹೊಡೆದು ಹಾಕಿದರು. ಇದನ್ನು ಗಮನಿಸಿದ ಅರವಿಂದ್ ಇದು ಫೌಲ್ ಎಂದು ಪ್ರಶಾಂತ್ ವಿರುದ್ಧ ಸಿಟ್ಟಿಗೆದ್ದರು. ಇದರಿಂದ ಕೆರಳಿದ ಪ್ರಶಾಂತ್ ನಿನಗೆ ನಿನ್ನ ಗರ್ಲ್ಫ್ರೆಂಡ್ ಕೈ ಹಿಡಿದಿದಕ್ಕೆ ಬೇಜಾರಾಗಿದಲ್ವ ಎಂದು ಪ್ರಶ್ನಿಸಿದರು. ಇದನ್ನು ಕೇಳಿಸಿಕೊಂಡ ದಿವ್ಯ ಉರುಡುಗ, ನೆಟ್ಟಗೆ ಮಾತನಾಡಿ ಎಂದು ಪ್ರಶಾಂತ್ಗೆ ವಾರ್ನಿಂಗ್ ಕೊಟ್ಟರು.
ನಂತರ ಪ್ರಶಾಂತ್ ಬಳಿ ಬಂದ ರಾಜೀವ್ ನೀನು ಡೈರೆಕ್ಟ್ ಆಗಿ ಅರವಿಂದ್ ಜೊತೆ ಜಗಳ ಮಾಡು ಇದನ್ನು ಹೊರತು ಪಡಿಸಿ ಹುಡುಗಿಯರ ಹೆಸರನ್ನು ಹೇಳಿಕೊಂಡು ಜಗಳ ಮಾಡಬೇಡ ಎಂದರು. ಈ ವೇಳೆ ಮತ್ತೆ ಸಿಟ್ಟಿಗೆದ್ದ ದಿವ್ಯ ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಖಡಕ್ ಆಗಿ ಹೇಳಿದರು. ನಂತರ ಬಿಗ್ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮಧ್ಯಪ್ರವೇಶಿಸಿ ಎರಡು ತಂಡವನ್ನು ಸಮಾಧಾನ ಮಾಡಿ ಆಟ ಮುಂದುವರಿಯುವಂತೆ ನೋಡಿಕೊಂಡರು.
ಈ ಗಲಾಟೆಯ ನಂತರ ದಿವ್ಯ ಸುರೇಶ್ ದಿವ್ಯ ಉರುಡುಗ ಬಳಿ, ಪ್ರಶಾಂತ್ ಅವರು ಗರ್ಲ್ಫ್ರೆಂಡ್ ಎಂದು ಹೇಳಿದ್ದಾರೆ ಹೌದು. ಆದರೆ ದಿವ್ಯ ಎಂದು ಹೆಸರನ್ನು ಹೇಳಲಿಲ್ಲ. ಈ ಸಂದರ್ಭದಲ್ಲಿ ನಾನೂ ಸ್ಥಳದಲ್ಲಿ ಇದ್ದೆ. ಹೆಸರನ್ನು ಹೇಳಿ ಮಾತನಾಡಿದ್ದರೆ ನೀನು ಹೇಳಿದ ವಿಷಯ ಸರಿ ಎಂದು ಹೇಳಿ ಸಂಬರಗಿ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಗ್ ಮನೆಯ ತುಂಬಾ ಆಟ, ಕಿತ್ತಾಟ, ವಾರ್ನಿಂಗ್ ಎಲ್ಲವೂ ಸರ್ವೇಸಾಮಾನ್ಯವಾಗಿದ್ದು, ಮುಂದಿನಗಳಲ್ಲಿ ಇದು ಯಾವರೀತಿ ಮುಂದುವರಿಯುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.