ರಾಯಚೂರು: ರಾತ್ರಿ ವೇಳೆ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಅಂಬುಲೆನ್ಸ್ ಡಿಕ್ಕಿ ಹೊಡೆದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ಸರ್ಜಾಪುರ ಬಳಿ ನಡೆದಿದೆ.
ಸಂಗನಗೌಡ (32) ಮೃತ ಅಂಬುಲೆನ್ಸ್ ಅಟೆಂಡರ್. ಘಟನೆಯಿಂದ ಅಂಬ್ಯುಲೆನ್ಸ್ ಚಾಲಕ ಹನುಮೇಶ್ ಗೆ ಗಾಯಗಳಾಗಿದ್ದು, ಲಿಂಗಸುಗೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಇಂಡಿಕೇಟರ್ ಹಾಕದೇ ಕತ್ತಲಲ್ಲಿ ನಿಲ್ಲಿಸಿದ್ದ ಭತ್ತ ತುಂಬಿದ ಲಾರಿಗೆ ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಆಂಧ್ರ ಮೂಲದ ಲಾರಿ ಚಾಲಕ ಬೇಜವಾಬ್ದಾರಿಯಿಂದ ಲಾರಿಯನ್ನ ಇಂಡಿಕೇಟರ್ ಸಹ ಹಾಕದೇ ರಸ್ತೆಪಕ್ಕ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ.
ಲಿಂಗಸುಗೂರಿನಿಂದ ಪಾಮನಕಲ್ಲೂರಿಗೆ ರೋಗಿ ಕರೆತರಲು ಬರುವಾಗ ಘಟನೆ ನಡೆದಿದೆ. ಗರ್ಭಿಣಿಯನ್ನ ಕರೆತರುವ ಅವಸರದಲ್ಲಿ ಹೊರಟಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದ ಘಟನೆ ನಡೆದಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.