-ವಿಧೇಯಕದ ಪ್ರತಿ ಹರಿದು ಸಿದ್ದರಾಮಯ್ಯ ಆಕ್ರೋಶ
-ರಾಜ್ಯ ಸರ್ಕಾರಕ್ಕೆ ರೈತರಿಂದ ಹಿಡಿ ಶಾಪ
ಬೆಂಗಳೂರು: ವಾರದ ಹಿಂದೆ ಕೃಷಿ ಬಿಲ್ ಬಿಲ್ ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಮಸೂದೆ ಪ್ರತಿ ಹರಿದು ಆಕ್ರೋಶ ಹೊರ ಹಾಕಿದ್ದರು. ಇದೀಗ ವಿಧಾನಸಭೆಯಲ್ಲೂ ಇದೇ ರೀತಿಯ ಘಟನೆ ಮರುಕಳಿಸಿದೆ. ವಿಪಕ್ಷ ಸದಸ್ಯರು ಭೂ ಸೂಧಾರಣಾ ತಿದ್ದುಪಡಿ ವಿಧೇಯಕದ ಪ್ರತಿಗಳು ಹರಿದು ಹಾಕಿದರು. ವಿಪಕ್ಷಗಳ ಗದ್ದಲ ಗಲಾಟೆ, ರೈತರ ಪ್ರತಿಭಟನೆಗಳ ನಡುವೆ ಅಧಿವೇಶನದ ಕೊನೆಯ ದಿನವಾದ ಇಂದು ಭೂಸುಧಾರಣಾ ತಿದ್ದುಪಡಿ ವಿಧೇಯಕ ಮತ್ತು ಎಪಿಎಂಸಿ ಬಿಲ್ಗಳಿಗೆ ವಿಧಾನಸಭೆಯ ಒಪ್ಪಿಗೆಯನ್ನು ಸರ್ಕಾರ ಪಡೆದುಕೊಂಡಿದೆ.
ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಪೋರೇಟ್ ಕಂಪನಿಗಳ ಲಾಬಿಗೆ ಮಣಿದಿರೋ ಸರ್ಕಾರ ಇದನ್ನು ಜಾರಿಗೆ ತರಲು ಮುಂದಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಈ ಕಾಯ್ದೆಯನ್ನ ತಂದರೆ 1964ರ ಹಿಂದಕ್ಕೆ ಹೋಗ್ತೇವೆ. ಇಲ್ಲಿಯವರೆಗೆ ಉಳುವವನೇ ಭೂ ಒಡೆಯ ಅನ್ನುವಂತಿತ್ತು. ಆದರೆ ಈಗ ಅದು ಉಲ್ಟಾ ಆಗಲಿದೆ. ಎಪಿಎಂಸಿಗಳು ಮುಚ್ಚಬಹುದಾದ ಆತಂಕವಿದೆ ಅಂತಾ ಆಕ್ಷೇಪ ವ್ಯಕ್ತಪಡಿಸಿದರು.
ವಿಪಕ್ಷಗಳಿಗೆ ಸ್ಪಷ್ಟನೆ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ, ಸಣ್ಣ ಹಿಡುವಳಿದಾರರ ಹಿತ ಕಾಯಲು ಸರ್ಕಾರ ಬದ್ಧ. ಯಾವುದೇ ಆತಂಕ ನಿಮಗೆ ಬೇಡ ಎಂದರು. ಸಚಿವ ಅಶೋಕ್ ಮಾತನಾಡಿ, ಈ ತಿದ್ದುಪಡಿ ಕಾಯ್ದೆ ತಂದಿದ್ದು ನಾವಲ್ಲ. 2004ರಲ್ಲಿ ಕಂದಾಯ ಸಚಿವರಾಗಿದ್ದವರು ಅಂದ್ರು. ಇನ್ನು ರೈತರನ್ನು ಕೇಳಿ ಎಪಿಎಂಸಿ ಬಿಲ್ ತಂದ್ರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಕೌಂಟರ್ ಕೊಟ್ಟ ಸಚಿವ ಸಿಟಿ ರವಿ, ಲೋಕಸಭೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದನ್ನು ಎತ್ತಿ ತೋರಿಸಿದರಿ. ಈ ವೇಳೆ ಭಾರೀ ಗದ್ದಲ ನಡೀತು.
ಅನ್ನದಾತ ರೈತ ಸ್ವಾಭಿಮಾನದಿಂದ 'ನನ್ನ ಬೆಳೆ ನನ್ನ ಹಕ್ಕು' ಎಂದು ಘೋಷಿಸುವಂತಾಗಬೇಕು ಎನ್ನುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ನಮ್ಮ ರೈತ ಬಾಂಧವರು ಮಧ್ಯವರ್ತಿಗಳ ಶೋಷಣೆಯಿಂದ, ಒಂದೇ ಮಾರುಕಟ್ಟೆಯ ನಿರ್ಬಂಧದಿಂದ, ದಕ್ಕಿದ ಬೆಲೆಗೆ ಬೆಳೆ ಮಾರಾಟ ಮಾಡುವ ಹೇರಿಕೆ ನಿಯಮದಿಂದ ಸ್ವತಂತ್ರರಾಗಲಿದ್ದಾರೆ. (1/2)
— B.S.Yediyurappa (@BSYBJP) September 26, 2020
ಸಿದ್ದರಾಮಯ್ಯನವರು ಸೇರಿ ಹಲವರು ವಿಧೇಯಕ ಪ್ರತಿ ಹರಿದು ಹಾಕಿ, ಸಭಾತ್ಯಾಗ ಮಾಡಿದರು. ಇದರ ಮಧ್ಯೆಯೇ ಧ್ವನಿಮತದ ಮೂಲಕ ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯಿತು. ಪರಿಷತ್ನಲ್ಲಿಯೂ ಭೂಸುಧಾರಣೆ ಬಿಲ್ಗೆ ಸರ್ಕಾರ ಒಪ್ಪಿಗೆ ಪಡೆದಿದೆ. ಎಪಿಎಂಸಿ ಬಿಲ್ ಮೇಲೆ ಚರ್ಚೆ ನಡೆಯುತ್ತಿದೆ.
ಉತ್ತಮ ಬೆಲೆ ಸಿಕ್ಕರೆ ರೈತರು ಎಪಿಎಂಸಿಯಲ್ಲೇ ಬೆಳೆ ಮಾರಬಹುದು, ವ್ಯಾಪಾರಿಗಳಿಗೆ ಮಾರಬಹುದು, ಅಥವಾ ರಾಜ್ಯದ ಹೊರಗಿನ ಮಾರುಕಟ್ಟೆಯಲ್ಲೂ ಮಾರಾಟ ಮಾಡಬಹುದು,ಅದು ರೈತನ ಇಚ್ಛೆ. ಇದರಿಂದಾಗಿ ರೈತನೇ ತನ್ನ ಬೆಳೆಯ ಬೆಲೆ ನಿಯಂತ್ರಿಸುವ ರೂವಾರಿಯಾಗುತ್ತಾನೆ. ಒಂದೊಮ್ಮೆ ರೈತರಿಗೆ ವಂಚನೆಯಾದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುತ್ತದೆ. (2/2)
— B.S.Yediyurappa (@BSYBJP) September 26, 2020