ಗದಗ: ಕೋವಿಡ್ ಕೇರ್ ಕೇಂದ್ರದಲ್ಲಿನ ಅವ್ಯವಸ್ಥೆಯಿಂದ ಸೋಂಕಿತರು ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆ ನರಗುಂದ ತಾಲೂಕಿನ ಬೆನಕೊಪ್ಪ ಕೋವಿಡ್ ಕೇಂದ್ರದಲ್ಲಿ ಕಂಡುಬಂದಿದೆ.
ಜಿಲ್ಲೆಯ ಅನೇಕ ತಾಲೂಕು ಕೋವಿಡ್ ಕೇಂದ್ರಗಳು ಅವ್ಯವಸ್ಥೆ ಆಗರವಾಗಿದ್ದು, ಸೋಂಕಿತರನ್ನು ಸರ್ಕಾರ ಅಮಾನವೀಯವಾಗಿ ನೋಡಿಕೊಳ್ಳುತ್ತಿಯಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸರಿಯಾದ ಊಟ, ಉಪಹಾರ, ನೀರು, ಬೆಡ್ ವ್ಯವಸ್ಥೆ ಹಾಗೂ ಸ್ವಚ್ಛತೆ ಇಲ್ಲದ ಕಾರಣ ಸೋಂಕಿತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ನರಗುಂದ ತಹಶೀಲ್ದಾರ್ ಗಮನಕ್ಕೆ ತಂದ್ರೂ ಡೋಂಟ್ ಕೇರ್ ಅಂತಿದ್ದಾರೆ ಎಂಬ ಆರೋಪ ಸೋಂಕಿತರದ್ದಾಗಿದೆ. ಬಾತ್ ರೂಮ್, ಟಾಯ್ಲೆಟ್ ಗೆ ಬಾಗಿಲುಗಳೇ ಇಲ್ಲ. ಮಹಿಳೆಯರ ಪರಸ್ಥಿತಿಯಂತೂ ಇಲ್ಲಿ ಕೆಳತಿರದು. ಕೇರ್ ಇಲ್ಲದ ಕೇರ್ ಸೆಂಟರ್ ಗಳ ಅವ್ಯವಸ್ಥೆಯಿಂದ ಸೋಂಕಿತರು ಗುಣಮುಖ ಆಗೋದಾದ್ರೂ ಹೇಗೆ ಅಂತ ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು.
ನರಗುಂದ ತಾಲೂಕಿನ ಬೆನಕೊಪ್ಪ ಕೋವಿಡ್ ಕೇರ್ ಕೇಂದ್ರದ ಅವ್ಯವಸ್ಥೆ ವಿಡಿಯೋ ಮಾಡಿ ಸಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.