ನವದೆಹಲಿ: ಚೀನಾ ಪ್ರಚೋದನೆಯಿಂದ ನೇಪಾಳ ಗಡಿ ಪ್ರದೇಶದಲ್ಲಿ ಖ್ಯಾತೆ ತೆಗೆದಿದ್ದು, ಹೊಸ ಭೂಪಟದೊಂದಿಗೆ ಭಾರತ ಪ್ರದೇಶಗಳನ್ನು ತನ್ನದೆಂದು ವಾದ ಮಂಡಿಸಿದ್ದು ಎಲ್ಲರಿಗೂ ತಿಳಿದಿದೆ. ಸದ್ಯ ಭಾರತದ ವಿರುದ್ಧ ದ್ವೇಷ ಸಾಧಿಸುವ ಮತ್ತಷ್ಟು ಕ್ರಮಗಳಿಗೆ ಮುಂದಾದಂತೆ ಕಾಣುತ್ತಿರುವ ನೇಪಾಳ, ಗಡಿ ಪ್ರದೇಶದಲ್ಲಿ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆ (ಕಾಲುಸಂಕ)ಗಳನ್ನು ಹಲವು ಬಾರಿ ಬಂದ್ ಮಾಡಿರುವ ಕುರಿತು ವರದಿಯಾಗಿದೆ.
ನೇಪಾಳ ಕಾಲುಸಂಕಗಳನ್ನು ಬಂದ್ ಮಾಡುತ್ತಿರುವ ಪರಿಣಾಮ ಗಡಿ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಾಖಂಡ ಧಾರ್ಚುಲಾದ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಇದನ್ನು ಓದಿ: ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ
Recently, a number of times Nepal closed the footbridge connecting India-Nepal, disrupting the supply of essential commodities into their country. We’ll raise this issue in our next friendly meeting with Nepal: Anil Kumar Shukla, SDM Dharchula, Uttarakhand pic.twitter.com/rTEIkKYHaN
— ANI (@ANI) June 26, 2020
ಧಾರ್ಚುಲಾ ಸಮೀಪದ ಭಾರತ ಮತ್ತು ನೇಪಾಳ ಒಂದು ಮಾಡುವ ಸೇತುವೆಯನ್ನು ನೇಪಾಳ ಭಾಗದಲ್ಲಿ ಹಲವು ಬಾರಿ ಬಂದ್ ಮಾಡಲಾಗಿದೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ನೇಪಾಳ ಈ ರೀತಿ ಮಾಡುತ್ತಿದೆ ಎಂದು ಅವರು ತಿಳಿಸಿದ್ದು, ಈ ಕುರಿತು ಮುಂದಿನ ಸಭೆಗಳಲ್ಲಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಇದನ್ನು ಓದಿ: ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ
ಕಳೆದ ತಿಂಗಳು ಭಾರತ ವಿರುದ್ಧ ಗಂಭೀರ ಆರೋಪ ಮಾಡಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ, ನೇಪಾಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಲು ಭಾರತದ ವೈರಸ್ ಕಾರಣ ಎಂದಿದ್ದರು. ಅಲ್ಲದೇ ಚೀನಾ ಮತ್ತು ಇಟಲಿ ವೈರಸ್ಗಿಂತಲೂ ಭಾರತ ವೈರಸ್ ಪ್ರಮಾದಕರ ಎಂದು ಆರೋಪಿಸಿದ್ದರು.