ಬಿಗ್ಬಾಸ್ ನೀಡಿದ್ದ ಹೀಗೂ ಅಂಟೆ ಟಾಸ್ಕ್ ವೇಳೆ ದಿವ್ಯಾ ಉರುಡುಗ ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ. ಆದರೆ ದಿವ್ಯಾ ಅವರಿಗೆ ಸಮಾಧಾನ ಮಾಡುತ್ತಲೇ ಇರುವ ಅರವಿಂದ್ ದಿವ್ಯಾ ಅವರನ್ನು ಕೇರ್ ಮಾಡುತ್ತಿರುವುದು ಮಾತ್ರ ಸಖತ್ ಮುದ್ದಾಗಿದೆ.
ದಿವ್ಯಾ ಕೈಗೆ ಪೆಟ್ಟಾಗಿರುವುದರಿಂದ ಅವರಿಗೆ ಬೇಕಾಗಿರುವ ಸಹಾಯವನ್ನು ಅರವಿಂದ್ ಅವರು ಮಾಡುತ್ತಿದ್ದಾರೆ. ದಿವ್ಯಾ ಹಲ್ಲುಜ್ಜಲು ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಅರವಿಂದ್ ನಾನು ಉಜ್ಜುತ್ತೇನೆ ಎಂದು ದಿವ್ಯಾ ಕೈಯಲ್ಲಿರುವ ಬ್ರೆಷ್ ತೆಗೆದುಕೊಂಡು ದಿವ್ಯಾ ಅವರ ಹಲ್ಲನ್ನು ಉಜ್ಜಿದ್ದಾರೆ. ದಿವ್ಯಾ ನಗುತ್ತಾ ಬೇಡಾ ನಾನೇ ಉಜ್ಜಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈ ಕ್ಯೂಟ್ ಮೈಮೆಂಟ್ ನೋಡಿರುವ ಶುಭಾ ಅರವಿಂದ್ ದಿವ್ಯಾಳನ್ನು ಎಷ್ಟೊಂದು ಕೇರ್ ಮಾಡುತ್ತಾನೇ ಅಲ್ವಾ ಎಂದು ಮಂಜು ಬಳಿ ಹೇಳಿದ್ದಾರೆ.
ಇವತ್ತು ನೀನು ತಿಂಡಿ ತಿಂದು ಮಾತ್ರೆ ತೆಗೆದುಕೊಂಡ್ರೆ ನೋವು ಕಡಿಮೆಯಾಗುತ್ತದೆ. ಕೈ ಮೇಲೆ ಇಟ್ಟಕೊಂಡು ಓಡಾಡು ನೋವು ಕಡಿಮೆಯಾಗುತ್ತದೆ ಎಂದು ಹೇಳುತ್ತಾ ಸಮಾಧಾನ ಮಾಡಿದ್ದಾರೆ. ನೋವಲ್ಲಿ ಇರುವ ದಿವ್ಯಾ ಅವರಿಗೆ ಅರವಿಂದ್ ಸಖತ್ ಕ್ಯೂಟ್ ಆಗಿ ದೈರ್ಯವನ್ನು ಹೇಳುವ ಕೆಲಸ ಮಾಡಿದ್ದಾರೆ.
ನಿನ್ನೆ ದಿವ್ಯಾಗೆ ಗಾಯವಾದಾಗ ಅರವಿಂದ್ ತಬ್ಬಿಕೊಂಡು ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸಿದ್ದರು. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾ ಸಮಾಧಾನ ಮಾಡಿದ್ದರು. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾ ಇಬ್ಬರು ತಬ್ಬಿಕೊಂಡು ಸಮಾಧಾನದ ಮಾತುಗಳನ್ನಾಡಿದ್ದರು.
ಬಿಗ್ಬಾಸ್ ಮೊದಲ ಇನ್ನಿಂಗ್ಸ್ನಿಂದಲೂ ಚೆನ್ನಾಗಿರುವ ಈ ಜೋಡಿ ಗೇಮ್, ಮನರಂಜನೆಯಲ್ಲಿ ಬಿಗ್ಬಾಸ್ ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಈ ಮುದ್ದಾದ ಜೋಡಿ ಯಾವುದೇ ವಿಚಾರಕ್ಕೆ ಬೇಸರವಾದರೆ, ಗೇಮ್ ಸೋತರೆ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುವುದು ಸಖತ್ ಮುದ್ದಾಗಿರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು