-ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರೇಪ್
ತಿರುವನಂತಪುರ: ಅಂಬುಲೆನ್ಸ್ ಚಾಲಕನೋರ್ವ 19 ವರ್ಷದ ಕೊರೊನಾ ಸೋಂಕಿತೆ ಅತ್ಯಾಚಾರ ಎಸಗಿರುವ ಘಟನೆ ಕೇರಳದ ಪಟನಮಿಟ್ಟಾ ಜಿಲ್ಲೆಯ ಅರಮಮುಲಾ ಇಲಾಖೆಯಲ್ಲಿ ನಡೆದಿದೆ.
ಅಂಬುಲೆನ್ಸ್ ನಲ್ಲಿ ಇಬ್ಬರು ಕೊರೊನಾ ಸೋಂಕಿತರನ್ನ ಸಾಗಿಸಲಾಗುತ್ತಿತ್ತು. ಮೊದಲಿಗೆ ಒಬ್ಬ ರೋಗಿಯನ್ನ ಇಳಿಸಿದ್ದಾನೆ. ತದನಂತರ ಅಂಬುಲೆನ್ಸ್ ನಿರ್ಜನ ಪ್ರದೇಶಕ್ಕೆ ತೆಗದುಕೊಂಡು ಹೋಗಿ ಸೋಂಕಿತ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಸಂತ್ರಸ್ತೆಯನ್ನ ಕೋವಿಡ್ ಆರೈಕೆ ಕೇಂದ್ರಕ್ಕೆ ತಲುಪಿಸಿದ್ದಾನೆ. ಆರೋಪಿ ಚಾಲಕನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ 90,633 ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ 1,065 ಜನರನ್ನ ರಾಕ್ಷಸಿ ಕೊರೊನಾ ಬಲಿ ಪಡೆದುಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 41,13,812ಕ್ಕೆ ಏರಿಕೆಯಾಗಿದ್ದು, ಸದ್ಯ ದೇಶದಲ್ಲಿ 8,62,320 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 70,626 ಜನರನ್ನು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ಅಮರಿಕಾ ಮತ್ತು ಬ್ರೆಜಿಲ್ ಮೊದಲ, ಎರಡನೇ ಸ್ಥಾನದಲ್ಲಿವೆ.