ಕೊರೊನಾ ಸಮಯದಲ್ಲೇ ಸರ್ಕಾರಕ್ಕೆ ವೈದ್ಯರಿಂದ ಡೆಡ್‍ಲೈನ್!

Public TV
1 Min Read
MYS PROTEST

ಮೈಸೂರು: ರಾಜ್ಯದಲ್ಲಿ ಕೊರೊನಾ ರಣಕೇಕೆಯ ನಡುವೆ ವೈದ್ಯ ಸಿಬ್ಬಂದಿ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ.

ಹೌದು. ನಂಜನಗೂಡು ಟಿಹೆಚ್‍ಒ ಡಾ. ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವೈದ್ಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದು, ನಾಳೆವರೆಗೆ ನೋಡ್ತೀವಿ, ಇಲ್ಲಾಂದ್ರೆ ಸೋಮವಾರದಿಂದ ಎಲ್ಲವೂ ಬಂದ್ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

MYS 1 2 medium

ಈ ಸಂಬಂಧ ಸರ್ಕಾರಕ್ಕೆ ಆಗ್ರಹ ಮಾಡಿರುವ ವೈದ್ಯ ಸಿಬ್ಬಂದಿ, ಒಂದೋ ನಾವು, ಇಲ್ಲಾ ಅವರು. ನೀವೇ ಡಿಸೈಡ್ ಮಾಡಿ. ಟಿಎಚ್‍ಒ ಸಾವಿಗೆ ಕಾರಣರಾದವರನ್ನ ಸಸ್ಪೆಂಡ್ ಮಾಡ್ಲೇಬೇಕು. ವರ್ಗಾವಣೆ ಬೇಡ, ನಾಳೆಯೊಳಗೆ ಅಮಾನತು ಮಾಡಿದ್ರೆ ಸರಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿ ರೋಗಿಗಳ ಸಂಕಷ್ಟಕ್ಕೆ ನೆರವಾಗಿ- ವೈದ್ಯ ಸಿಬ್ಬಂದಿಯಲ್ಲಿ ಸುಧಾಕರ್ ಮನವಿ

MYS 2 1 medium

ಕೊರೊನಾ ರೋಗಿಗಳನ್ನ ನೋಡಲ್ಲ, ಟೆಸ್ಟಿಂಗ್ ಮಾಡಲ್ಲ. ಇಲ್ಲಾಂದ್ರೆ ಸೋಮವಾರದಿಂದ ರಾಜ್ಯಾದ್ಯಂತ ಕೋವಿಡ್ ಕೆಲಸ ಬಂದ್ ಮಾಡುತ್ತೇವೆ. ತುರ್ತು ಆರೋಗ್ಯ ಸೇವೆ ಅಷ್ಟೇ. ಉಳಿದ ಎಲ್ಲವೂ ಬಂದ್ ಮಾಡುತ್ತೇವೆ. ಸೋಮವಾರದಿಂದ ಹೆಲ್ತ್ ವಾರಿಯರ್ಸ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾದಿಕಾರಿಗಳ ಸಂಘ ವಾರ್ನಿಂಗ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *