Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಕೊರೊನಾ ವಿರುದ್ಧ ಯುದ್ಧ ಮಾಡಲು ವಿಎಚ್‍ಪಿ ಕಾರ್ಯಕರ್ತರು ಪೂರ್ಣವಾಗಿ ಸಜ್ಜಾಗಬೇಕು: ಮಿಲಿಂದ್ ಪರಾಂಡೆ

Public TV
Last updated: April 28, 2021 9:40 pm
Public TV
Share
3 Min Read
FotoJet 5 51
SHARE

ನವದೆಹಲಿ: ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ), ಶ್ರೀರಾಮ ದೇವರ ಸೇವೆ ಜೊತೆಯಲ್ಲಿ ರಾಷ್ಟ್ರ ಸೇವೆಯಲ್ಲೂ ತೊಡಗಿದೆ. ಕೋವಿಡ್-19ನ ಜಾಗತಿಕ ಸಾಂಕ್ರಾಮಿಕ ರೋಗದ ದಾಳಿಗೆ ಸಿಕ್ಕಿರುವ ಭಾರತೀಯರಿಗೆ ಸೇವೆ ಸಲ್ಲಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಹಲವು ಕಾರ್ಯಗಳನ್ನು ಈಗಾಗಲೇ ವಿಎಚ್‍ಪಿ ಕಾರ್ಯಕರ್ತರು ಆಯಾ ರಾಜ್ಯಗಳ ಪ್ರಾದೇಶಿಕ ಮಟ್ಟದಲ್ಲಿ ಪ್ರಾರಂಭಿಸಿದ್ದಾರೆ. ಆದರೆ ಅದನ್ನು ಪೂರ್ಣ ಭಾರತ ಮಟ್ಟದಲ್ಲಿ ವೇಗಗೊಳಿಸಲು, ವಿಎಚ್‍ಪಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಕೊರೊನಾ ವಿರುದ್ಧ ಯುದ್ಧ ಘೋಷಿಸಿ ಕರೆ ನೀಡಿದರು.

ಈ ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧ ಮಾಡಲು ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಬೇಕು ಮತ್ತು ಎಲ್ಲಾ ಮಠಗಳು ಮತ್ತು ದೇವಾಲಯಗಳು, ಗುರುದ್ವಾರಗಳು, ಸಂತರು, ಧರ್ಮಚಾರ್ಯರು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಸೇವೆಗೆ ಸಿದ್ಧಪಡಿಸಬೇಕು. ಅದೇನೇ ಇದ್ದರೂ, 2020ರಲ್ಲಿ ಕೊರೊನಾದ ಮೊದಲ ಅಲೆಯ ಸಮಯದಲ್ಲಿ ವಿಎಚ್‍ಪಿ ಕಾರ್ಯಕರ್ತರು ಇಡೀ ದೇಶದಲ್ಲಿ ಕೊರೊನಾ ಪೀಡಿತರಿಗೆ ಸೇವೆಯನ್ನು ಅರ್ಪಿಸಿದರು, ಆದರೆ ಈ ಬಾರಿ ಪರಿಸ್ಥಿತಿಯು ಹೆಚ್ಚು ಅಪಾಯಕಾರಿ ಪ್ರಮಾಣವನ್ನು ತಲುಪಿರುವುದನ್ನು ಗಮನದಲ್ಲಿಟ್ಟುಕೊಂಡು, ಅವರ ಸೇವಾ ಚಟುವಟಿಕೆಗಳನ್ನು ಏರಿಸಿದ್ದಾರೆ.

ವಿಎಚ್‍ಪಿ ತನ್ನ ಸೇವಾ ತಂತ್ರಗಳನ್ನು ನಾಲ್ಕು ಭಾಗಗಳಾಗಿ ಮಾಡಿದೆ. ಮೊದಲನೆಯದು ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ. ಎರಡನೇಯದು ಸೋಂಕಿತರಿಗೆ ಸೇವೆ ನೀಡುವುದು ಮತ್ತು ಅವರ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದು. ಮೂರನೇಯದು ಪೀಡಿತ ಕುಟುಂಬಗಳಿಗೆ ಬೆಂಬಲ ಮತ್ತು ನೆರವು ನೀಡುವುದು. ಮತ್ತು ನಾಲ್ಕನೆಯದು ಕೊರೊನಾ ಸಂತ್ರಸ್ತರ ಕೊನೆಯ ಪ್ರಯಾಣ ಮತ್ತು ಅವರ ವಿಮೋಚನೆಗಾಗಿ ಅಗತ್ಯ ಕ್ರಮಗಳನ್ನು ಏರ್ಪಡಿಸುವುದು. ಎಲ್ಲಾ ನಾಲ್ಕು ರಂಗಗಳನ್ನು ನಿಭಾಯಿಸುವ ಸಲುವಾಗಿ, ವಿಎಚ್‍ಪಿ ತನ್ನ ಕಾರ್ಯಕರ್ತರು ಮತ್ತು ಸಾಂಸ್ಥಿಕ ಬಲವನ್ನು ನಿಯೋಜಿಸಲು ಸಿದ್ಧಪಡಿಸಿದೆ.

ರೋಗ ತಡೆಗಟ್ಟುವ ಕ್ರಮಗಳ ಬ್ಯಾನರ್ ಅಡಿಯಲ್ಲಿ ವಿಎಚ್‍ಪಿ ಕಾರ್ಯಕರ್ತರು, ಎಲ್ಲಾ ಅರ್ಹ ಜನರು, ಸರ್ಕಾರದ ವ್ಯಾಕ್ಸಿನೇಷನ್ ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಕಾರ್ಯಕರ್ತರು, ಸಾಮಾಜಿಕ ಮಾಧ್ಯಮಗಳು, ಫೋನ್ ಕರೆಗಳು ಮತ್ತು ವೈಯಕ್ತಿಕ ಸಂಪರ್ಕಗಳ ಮೂಲಕ, ಲಸಿಕೆ ವಿರೋಧಿ ಪ್ರಚಾರ ಮತ್ತು ಗೊಂದಲಗಳನ್ನು ತೆಗೆದುಹಾಕಿ ಜನರನ್ನು ಪ್ರೇರೇಪಿಸುತ್ತಿದ್ದಾರೆ ಮತ್ತು ಅವರ ವ್ಯಾಕ್ಸಿನೇಷನ್‍ನನ್ನು ಸುಗಮಗೊಳಿಸುತ್ತಿದ್ದಾರೆ. 6 ಅಡಿ ವೈಯಕ್ತಿಕ ದೂರ, ಮುಖಗವಸು ಬಳಕೆ, ಕೈ ಮತ್ತು ಮುಖದ ನೈರ್ಮಲ್ಯೀಕರಣ ಮತ್ತು ನೈರ್ಮಲ್ಯದ ಇತರ ಪ್ರೋಟೋಕಾಲ್‍ಗಳ ಪ್ರಸ್ತುತ ಮಾನದಂಡಗಳ ಅನಿವಾರ್ಯತೆಯ ಬಗ್ಗೆ ಅವರು ಜನರನ್ನು ಸಂವೇದನಾಶೀಲಗೊಳಿಸುತ್ತಿದ್ದಾರೆ. ಅಲ್ಲದೇ ಅವರು ಆಯುರ್ವೇದ, ಹೋಮಿಯೋಪತಿ ಮತ್ತು ಅಗತ್ಯವಿರುವಂತ ಸಿದ್ಧ ಔಷಧಿಗಳನ್ನು ವಿತರಿಸುತ್ತಾ ಇದ್ದಾರೆ. ಸಾಮಾಜಿಕ ಶಿಸ್ತು, ತಾಳ್ಮೆ ಮತ್ತು ಸ್ಥೈರ್ಯವನ್ನು ಹೆಚ್ಚಿಸಲು ಯೋಗ ತರಗತಿಗಳನ್ನು ಆನ್‍ಲೈನ್ ಮೂಲಕ ನಡೆಸುತ್ತಿದ್ದಾರೆ ಮತ್ತು ಸಹಾಯವಾಣಿ ಸಂಖ್ಯೆಗಳ ಮೂಲಕ ಆಯಾ ಕ್ಷೇತ್ರಗಳ ತಜ್ಞರೊಂದಿಗೆ ಸಮಾಲೋಚನೆ ಮತ್ತು ಸಹಾಯವನ್ನು ಮಾಡುತ್ತಿದ್ದಾರೆ.

ಎರಡನೇ ಭಾಗಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ವೈದ್ಯಾಧಿಕಾರಿ ಮತ್ತು ವೈದ್ಯರೊಂದಿಗೆ ಸಮಾಲೋಚನೆ, ಆಂಬುಲೆನ್ಸ್‍ಗಳ ವ್ಯವಸ್ಥೆ, ಆಮ್ಲಜನಕ ಸಿಲಿಂಡರ್‍ಗಳು, ಪ್ಲಾಸ್ಮಾ, ರಕ್ತ, ಆಮ್ಲಜನಕ ಸಾಂದ್ರಕ ಘಟಕಗಳು, ಔಷಧಿಗಳು ಮತ್ತು ಆಕ್ಸಿಮೀಟರ್‍ಗಳು ಇತ್ಯಾದಿಗಳ ವ್ಯವಸ್ಥೆ ಸೇರಿವೆ. ಇದರಲ್ಲಿ ಪ್ರತ್ಯೇಕತೆ (ಐಸೋಲೇಷನ್) ಕ್ವಾರಂಟೈನ್ ಕೇಂದ್ರಗಳು, ರೋಗಿಗಳಿಗೆ ಊಟದ ವ್ಯವಸ್ಥೆ ಮತ್ತು ಅವರ ಕುಟುಂಬ ಸದಸ್ಯರಿಗೆ ವ್ಯವಸ್ಥೆ, ಮನೆಗಳು ಮತ್ತು ಆಸ್ಪತ್ರೆಗಳಲ್ಲಿ ಒಂಟಿ ಕುಟುಂಬ ಸದಸ್ಯರಿಗೆ ಸಹಾಯ ಮತ್ತು ವೈದ್ಯಕೀಯ ಸಿಬ್ಬಂದಿಗೆ ಬೆಂಬಲ ಮತ್ತು ಸಹಕಾರ ಇತ್ಯಾದಿ.

ಮೂರನೇ ಭಾಗಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ಆಹಾರ ಮತ್ತು ನೀರು, ಔಷಧಿಗಳು ಮತ್ತು ಪಡಿತರವನ್ನು ರೋಗ ಪೀಡಿತ ಕುಟುಂಬಗಳಿಗೆ ಮತ್ತು ಕಾರ್ಮಿಕರಿಗೆ, ಇತರ ಬಡ ಜನರಿಗೆ ವಿತರಿಸುವುದು. ಒಂಟಿ ಮನೆಯ ವೃದ್ಧರು, ವಿದ್ಯಾರ್ಥಿಗಳು ಮತ್ತು ಮಕ್ಕಳ ಆರೈಕೆ. ಹಸುವಿನ ಸಂತತಿ ಮತ್ತು ಇತರ ಪ್ರಾಣಿಗಳಿಗೆ ಮೇವು/ಆಹಾರ ಮತ್ತು ನೀರು, ಪ್ರಯಾಣಿಸುವ ಜನರಿಗೆ ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದೆ.

ನಾಲ್ಕನೇ ಭಾಗಕ್ಕೆ ಸಂಬಂಧಿಸಿದ ಸೇವೆ ಅತ್ಯಂತ ಕಷ್ಟಕರ ಮತ್ತು ಸವಾಲಿನದು. ಕೊರೊನಾದಿಂದ ಪ್ರಾಣ ಬಿಟ್ಟವರನ್ನು ಆಸ್ಪತ್ರೆಗಳು/ ಮನೆಗಳಿಂದ ವಿಮೋಚನೆಯ ಬಾಗಿಲುಗಳಿಗೆ ಸಾಗಿಸಲು ಮೋರ್ಚುರಿ ವ್ಯಾನ್‍ಗಳನ್ನು ವ್ಯವಸ್ಥೆ ಮಾಡುವುದು, ಅವರ ಅಂತ್ಯಕ್ರಿಯೆಯ ಸೇವೆಗಳು ಮತ್ತು ಶವಸಂಸ್ಕಾರದ ವ್ಯವಸ್ಥೆ, ಸಂಬಂಧಿತ ಸಾಮಾಗ್ರಿಗಳ ವ್ಯವಸ್ಥೆ ಮುಂತಾದ ಕಾರ್ಯಗಳನ್ನು ಮಾಡುವುದು ಮತ್ತು ಕೊರೊನಾ ಸಂತ್ರಸ್ತರ ಕುಟುಂಬ ಸದಸ್ಯರನ್ನು ಮನವೊಲಿಸುವುದು ಕಷ್ಟಕರವಾದ ಕೆಲಸ. ಯಾವಾಗಲೂ ಕೊರೊನಾ ಪೀಡಿತರ ಸೇವೆಗಳಲ್ಲಿ ತೊಡಗಿರುವ ಕಾರ್ಯಕರ್ತರ ಸ್ವರಕ್ಷಣೆ ಒಂದು ನಿರ್ಣಾಯಕ ಸವಾಲಾಗಿದೆ.

ವಿಎಚ್‍ಪಿಯ ಯುವ ವಿಭಾಗಗಳಾದ ಭಜರಂಗದಳ ಮತ್ತು ದುರ್ಗಾವಾಹಿನಿ – ಎಲ್ಲಾ ಅಪಾಯಗಳನ್ನು ತೆಗೆದುಕೊಳ್ಳುತ್ತಾ, ಈ ಸೇವಾ ಚಟುವಟಿಕೆಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಂಪನ್ಮೂಲವಾರು ಬುದ್ಧಿವಂತಿಕೆಯಿಂದ ತೊಡಗಿಸಿಕೊಂಡಿದ್ದಾರೆ. ಮಿಲಿಂದ್ ಪರಾಂಡೆ ಅವರು ಸೇವಾಕಾರ್ಯದಲ್ಲಿ ಸಂಪನ್ಮೂಲದೊಂದಿಗೆ ಭಾಗವಹಿಸಲು ಕಾರ್ಪೊರೇಟ್ ಜಗತ್ತಿಗೆ ಕರೆ ನೀಡಿದರು. ಸಮಾಜದ ಸ್ಥೈರ್ಯವನ್ನು ದುರ್ಬಲಗೊಳಿಸುವ ಮೂಲಕ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಮಾಧ್ಯಮಗಳ ಒಂದು ಭಾಗವು ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದರು. ವಿಎಚ್‍ಪಿ ಕಾರ್ಯಕರ್ತರು ತಮ್ಮನ್ನು ತಾವು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಕರಿಸುತ್ತಿದ್ದಾರೆ ಮತ್ತು ಉತ್ತಮ ಕಾರ್ಯಗಳು ಮತ್ತು ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

TAGGED:Milind ParandeNew DelhiPublic TVservicevhpಕೊರೊನಾನವದೆಹಲಿಪಬ್ಲಿಕ್ ಟಿವಿ Coronaಮಿಲಿಂದ್ ಪರಾಂಡೆವಿಎಚ್‍ಪಿಸೇವೆ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

darshan umashree
ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ
Cinema Latest Sandalwood Top Stories
daali dhananjaya
ಬೇಡರ ನಾಯಕನಾಗಿ ಡಾಲಿ ಧನಂಜಯ್: ಗ್ಲಿಂಪ್ಸ್ ರಿಲೀಸ್
Cinema Latest Sandalwood
DARSHAN 5
ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌
Bengaluru City Cinema Karnataka Latest Main Post Sandalwood
Actor Darshan
ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?
Bengaluru City Cinema Court Latest Main Post National Sandalwood
pavithra gowda
ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್
Bengaluru City Cinema Karnataka Latest Sandalwood Top Stories

You Might Also Like

Omni 1
Crime

ಕಾರಲ್ಲಿ ಇಬ್ರು ಬಾಲಕಿಯರಿದ್ರೂ.. ಕಣ್ಣೀರಿಡುತ್ತಾ ಓಡಿ ಬಂದ ವಿದ್ಯಾರ್ಥಿನಿ – ಕಿಡ್ನ್ಯಾಪ್‌ಗೆ ನಡೆಯಿತಾ ಯತ್ನ?

Public TV
By Public TV
26 minutes ago
DK Shivakumar 1 2
Bengaluru City

ಪೆರಿಫೆರಲ್ ರಿಂಗ್ ರಸ್ತೆಗೆ ಈಗ ಡಿ ನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗೋಕೆ ಸಿದ್ಧ ಇಲ್ಲ: ಡಿಕೆಶಿ

Public TV
By Public TV
39 minutes ago
Mudigere Chikkamagaluru Protest
Chikkamagaluru

ಅನ್ಯಕೋಮಿನ ಯುವಕನ ಜೊತೆ ವಿವಾಹಿತೆ ಪರಾರಿ – ಹಿಂದೂ ಮುಖಂಡರಿಂದ ಪ್ರತಿಭಟನೆ

Public TV
By Public TV
40 minutes ago
VIJAYENDRA 1
Dakshina Kannada

ಗುಂಡಿ ಅಗೆಯುವ ಹುಚ್ಚಾಟ ಬಂದ್‌ ಮಾಡಿ, ಅನಾಮಿಕನ ತನಿಖೆ ಮಾಡಿ: ವಿಜಯೇಂದ್ರ

Public TV
By Public TV
44 minutes ago
kea
Bengaluru City

ವೈದ್ಯಕೀಯ: ಛಾಯ್ಸ್‌-2 ಅಭ್ಯರ್ಥಿಗಳಿಗೆ ಮುಂಗಡ ಶುಲ್ಕ ಪಾವತಿಯಲ್ಲಿ ಬದಲಾವಣೆ: ಕೆಇಎ

Public TV
By Public TV
1 hour ago
Shourya Chakra Medal
Latest

ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?