Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊರೊನಾ ಲೆಕ್ಕಿಸಲಿಲ್ಲ, ಸಾಧ್ಯವಾದಷ್ಟು ಜೀವ ಉಳಿಸುವುದೊಂದೇ ನಮ್ಮ ತಲೆಯಲ್ಲಿತ್ತು- ಪ್ರತ್ಯಕ್ಷದರ್ಶಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕೊರೊನಾ ಲೆಕ್ಕಿಸಲಿಲ್ಲ, ಸಾಧ್ಯವಾದಷ್ಟು ಜೀವ ಉಳಿಸುವುದೊಂದೇ ನಮ್ಮ ತಲೆಯಲ್ಲಿತ್ತು- ಪ್ರತ್ಯಕ್ಷದರ್ಶಿ

Latest

ಕೊರೊನಾ ಲೆಕ್ಕಿಸಲಿಲ್ಲ, ಸಾಧ್ಯವಾದಷ್ಟು ಜೀವ ಉಳಿಸುವುದೊಂದೇ ನಮ್ಮ ತಲೆಯಲ್ಲಿತ್ತು- ಪ್ರತ್ಯಕ್ಷದರ್ಶಿ

Public TV
Last updated: August 8, 2020 4:12 pm
Public TV
Share
3 Min Read
FLIGHT
SHARE

– ಒಬ್ಬ ಪ್ರಯಾಣಿಕನನ್ನು ನನ್ನ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದೆ
– ಪತ್ನಿ, ಮಗುವಿಗಾಗಿ ಆತ ಅಳುತ್ತಿದ್ದ ದೃಶ್ಯ ಇನ್ನೂ ಕಣ್ಣಮುಂದಿದೆ

ತಿರುವನಂತಪುರಂ: ಕೇರಳದ ಕೋಯಿಕ್ಕೊಡ್ ವಿಮಾನ ನಿಲ್ದಾಣದ ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಘಟನೆ ನಡೆದ ನಂತರ ರಕ್ಷಣಾ ಕಾರ್ಯ ಸಹ ಅದೇ ರೀತಿ ಭರದಿಂದ ಸಾಗಿದೆ. ಹೀಗಾಗಿಯೇ ಹಲವರ ಜೀವ ಉಳಿದಿದೆ. ಆದರೆ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದಾಗಿದೆ. ವಿಮಾನ ವಿದೇಶದಿಂದ ಬಂದರೂ ಕೊರೊನಾ ಸೋಂಕು ತಗುಲುವ ಭಯವಿಲ್ಲದೆ ಹಲವರ ಜೀವವನ್ನು ರಕ್ಷಿಸಿದ್ದಾರೆ.

KERALA FLIGHT 4

ಟೇಬಲ್ ಟಾಪ್ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ವರ್ಷಗಟ್ಟಲೇ ಅನುಭವವಿರುತ್ತದೆ. ಆದರೆ ಸಾಮಾನ್ಯ ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆದರೂ ಸಹ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪೈಕಿ ಸ್ಥಳೀಯರಾದ ಫಝಲ್ ಪುಥಿಯಾಕಥ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

kerala flight

ಘಟನೆ ನಡೆಯುತ್ತಿದ್ದಂತೆಯೇ 32 ವರ್ಷದ ಬ್ಯುಸಿನೆಸ್ ಮ್ಯಾನ್ ಹಾಗೂ ಸ್ಥಳೀಯರು ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಅವಘಡ ಸಂಭವಿಸಿದ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಒಟ್ಟು 190 ಪ್ರಯಾಣಿಕರ ಪೈಕಿ ದುರ್ಘಟನೆಯಲ್ಲಿ 18 ಜನ ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ವಿಮಾನ ಅವಘಡ ಸಂಭವಿಸುತ್ತಿದ್ದಂತೆ ಬ್ಲಾಸ್ಟ್ ಆದ ರೀತಿ ದೊಡ್ಡ ಶಬ್ದ ಕೇಳಿಸಿದ್ದು, ತಕ್ಷಣವೇ ನಾನು ಹಾಗೂ ಇತರರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆವು. ಸ್ಥಳಕ್ಕೆ ಆಗಮಿಸಿದಾಗ ವಿಮಾನದಲ್ಲಿದ್ದವರೆಲ್ಲ ಕಿರುಚಾಡುತ್ತಿದ್ದರು. ಸಾಕಷ್ಟು ಜನ ರಕ್ತದ ಮಡುವಿನಲ್ಲಿದ್ದರು. ಹಲವರಿಗೆ ಗಂಭೀರ ಗಾಯಗಳಾಗಿದ್ದರೆ, ಇನ್ನೂ ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅಪಘಾತದ ಪರಿಣಾಮ ಎಷ್ಟಿತ್ತೆಂದರೆ ಬೋಯಿಂಗ್ 737 ಮುಂದಿನ ಭಾಗ ಸುಮಾರು 20 ಮೀಟರ್ ನಷ್ಟು ಹಿಂದೆ ಬಿದ್ದಿತ್ತು. ಅಷ್ಟರ ಮಟ್ಟಿಗೆ ವಿಮಾನ ಅಪ್ಪಳಿಸಿತ್ತು ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಪುಥಿಯಾಕಥ್ ಭೀಕರತೆಯನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

KERAL FLIGHT

ನಾವು ತೆರೆಳಿದಾಗ ಆಗಲೇ ಇಬ್ಬರು ಪೈಲೆಟ್‍ಗಳು ಸಾವನ್ನಪ್ಪಿದ್ದರು. ವಿಮಾನಕ್ಕೆ ಬೆಂಕಿ ತಗುಲಿದ್ದರೆ ಇನ್ನೂ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ವಿಮಾನ ದುರಂತ ಸಂಭವಿಸಿದಾಗ ರಕ್ಷಣಾ ಕಾರ್ಯವನ್ನು ಹೇಗೆ ನಡೆಸಬೇಕು ಎಂಬುದನ್ನು ನಾನು ಈ ಹಿಂದೆ ದೂರದಿಂದ ನೋಡಿದ್ದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಡಮ್ಮಿ ವಿಮಾನದಿಂದ ಇದನ್ನು ಮಾಡುತ್ತಾರೆ. ಆದರೆ ಈ ಪ್ರಯೋಗವೇ ಬೇರೆ ವಾಸ್ತವವೇ ಬೇರೆ ಎಂದು ಈ ಘಟನೆ ನೋಡಿದ ಬಳಿಕ ತಿಳಿಯಿತು. ನಾವು ಹೇಗೆ ಸಿದ್ಧರಿದ್ದೇವೆ ಎಂಬುದು ಮುಖ್ಯವಲ್ಲ, ಸ್ಥಳದಲ್ಲಿ ಸಾವು, ನೋವು ಸಂಭವಿಸಿದಾಗ ಪರಿಸ್ಥಿತಿ ಬೇರೆ ರೀತಿಯೇ ಆಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಉಳಿಸಬೇಕಾಗುತ್ತದೆ ಎಂದು ಪುಥಿಯಾಕಥ್ ತಿಳಿಸಿದ್ದಾರೆ.

KERAL FLIGHT 1

ಪ್ರಯಾಣಿಕರಲ್ಲಿ ಯಾರಿಗೆ ಕೊರೊನಾ ಸೋಂಕು ತಗುಲಿರುತ್ತದೆಯೋ ಎಂಬುದರ ಕುರಿತು ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಸಾಧ್ಯವಾದಷ್ಟು ಜನರನ್ನು ಉಳಿಸಬೇಕೆಂಬುದಷ್ಟೇ ನಮ್ಮ ತಲೆಯಲ್ಲಿತ್ತು ಎಂದು ಪುಥಿಯಾಕಥ್ ತಿಳಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿಯೂ ಒಬ್ಬ ಪ್ರಯಾಣಿನನ್ನು ನನ್ನ ಕಾರಿನಲ್ಲಿಯೇ ಆಸ್ಪತ್ರೆ ಸೇರಿಸಿದೆ. ಈ ವೇಳೆ ವ್ಯಕ್ತಿ ತನ್ನ ಪತ್ನಿ ಹಾಗೂ ಮಗುವಿಗಾಗಿ ಅಳುತ್ತಿದ್ದ. ಇದನ್ನು ನಾನು ಎಂದೂ ಮರೆಯುವುದಿಲ್ಲ. ನಾನು ಕಾರನ್ನು ಪರಿಶೀಲಿಸಿಲ್ಲ, ಖಂಡಿತವಾಗಿಯೂ ಹಿಂದಿನ ಸೀಟ್ ರಕ್ತವಾಗಿರುತ್ತದೆ. ನಾನೊಬ್ಬ ಮಾತ್ರವಲ್ಲ ನನ್ನಂತೆ ಹಲವರು ಚಿಕ್ಕ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಿಜಕ್ಕೂ ಈ ದೃಶ್ಯ ಆಘಾತಕಾರಿಯಾಗಿತ್ತು ಎಂದು ವಿವರಿಸಿದ್ದಾರೆ.

flight

ಕೊರೊನಾ ವೈರಸ್ ಹಿನ್ನೆಲೆ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಒಂದೇ ಭಾರತ್ ಮಿಷನ್ ಅಡಿ ಸರ್ಕಾರ ಏರ್ ಇಂಡಿಯಾ ವಿಮಾನಗಳ ಹಾರಾಟ ನಡೆಸುತ್ತಿದೆ. ಇದರ ಭಾಗವಾಗಿ ದುಬೈನಿಂದ ವಿಮಾನ ಕೇರಳದ ಕೋಯಿಕ್ಕೊಡ್‍ಗೆ ಆಗಮಿಸಿದೆ. ವಿಮಾನದಲ್ಲಿ ಒಟ್ಟು 190 ಜನ ಪ್ರಯಾಣಿಕರಿದ್ದರು. ಕೋಯಿಕ್ಕೊಡ್ ಟೇಬಲ್-ಟಾಪ್ ವಿಮಾನ ನಿಲ್ದಾಣವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

TAGGED:airportflightkeralaKozhikodeLocalsPublic TVrescue operationಕೇರಳಕೋಯಿಕ್ಕೊಡ್ಪಬ್ಲಿಕ್ ಟಿವಿರಕ್ಷಣಾ ಕಾರ್ಯವಿಮಾನವಿಮಾನ ನಿಲ್ದಾಣಸ್ಥಳೀಯರು
Share This Article
Facebook Whatsapp Whatsapp Telegram

Cinema news

Oscars 2026 Michael B Jordan Jessie Buckley
Oscars 2026: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ
Cinema Latest Top Stories World
Dhurandhar 2 Trailer
ರಿಲೀಸ್‌ಗೂ ಮುನ್ನವೇ 100 ಕೋಟಿ ಬಾಚಿದ ಧುರಂಧರ್‌-2
Bollywood Cinema Latest Top Stories
chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories

You Might Also Like

HD Revanna
Districts

ಹಾಸನ ಡಿಸಿ, ಹೊಳೆನರಸೀಪುರ ತಾ.ಪಂ. ಇಓ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಹೆಚ್.ಡಿ.ರೇವಣ್ಣ

Public TV
By Public TV
5 minutes ago
Vijayapura Police
Districts

22 ಕೇಸ್‌ನ 36 ಜನ ಅರೆಸ್ಟ್ – 1.27 ಕೋಟಿ ಮೌಲ್ಯದ ಚಿನ್ನಾಭರಣ, 2 ಕಾರು, 17 ಬೈಕ್ ಜಪ್ತಿ

Public TV
By Public TV
8 minutes ago
Rescue of a two year old child who fell into a well in Sirsi
Districts

ಆಟವಾಡುತ್ತಾ ಬಾವಿಗೆ ಬಿದ್ದ ಎರಡು ವರ್ಷದ ಮಗು – ಅದೃಷ್ಟವಶಾತ್‌ ಪಾರು

Public TV
By Public TV
26 minutes ago
Sandesh PG
Bengaluru City

ಗಂಡನನ್ನು ಅರೆಸ್ಟ್‌ ಮಾಡಿ ಹೆಂಡತಿನ ಮಂಚಕ್ಕೆ ಕರಿತಿದ್ದ ಇನ್ಸ್‌ಪೆಕ್ಟರ್‌ – ನೊಂದ ಮಹಿಳೆಯಿಂದ ಸಿಎಂಗೆ ದೂರು

Public TV
By Public TV
32 minutes ago
Jag Laadki
Latest

ನಾವು ಪ್ರತಿಯೊಂದು ಹಡಗಿನ ಜೊತೆ ಸಂಪರ್ಕದಲ್ಲಿದ್ದೇವೆ, ನಾಳೆ ಬರುತ್ತೆ 81 ಸಾವಿರ ಟನ್‌ ಕಚ್ಚಾ ತೈಲ: ಕೇಂದ್ರ

Public TV
By Public TV
44 minutes ago
MEA Aseem Mahajan
Latest

ಕೊಲ್ಲಿ ಯುದ್ಧದ ಬಳಿಕ 2.20 ಲಕ್ಷ ಮಂದಿ ಭಾರತಕ್ಕೆ ರಿಟರ್ನ್‌: ಕೇಂದ್ರ ಸರ್ಕಾರ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?