ಕೊರೊನಾ ಲಾಕ್‍ಡೌನ್- ಮನೆಮನೆಗೆ ತೆರಳಿ ಉಚಿತವಾಗಿ ಪುಸ್ತಕ ವಿತರಣೆ

Public TV
1 Min Read
NML

ಬೆಂಗಳೂರು: ಲಾಕ್‍ಡೌನ್‍ನಿಂದ ಮನೆಯಿಂದ ಹೊರಗೆ ಬರದೆ ಕಾಲ ಕಳೆಯುತ್ತಿರುವ ಜನರಿಗೆ ಬೇಸರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಾಸರಹಳ್ಳಿಯಲ್ಲಿ ಕನ್ನಡ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

NML 2

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಆರ್ ಸತೀಶ್ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ದಾಸರಹಳ್ಳಿಯ ಮನೆ ಮನೆಗೆ ಹಾಗೂ ಆಟೋ ಚಾಲಕರು, ಅಂಗಡಿ ಮಾಲೀಕರು ಬೀದಿ ಬದಿ ವ್ಯಾಪಾರಿಗಳಿಗೂ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪ್ರೊಫೆಸರ್ ಹಾಗೂ ಸಾಹಿತಿಗಳಾದ ಪ್ರಸನ್ನಕುಮಾರ್ ಬರೆದಿರುವಂತಹ ಮಾಸದ ನೆನಪು, ಪ್ರೇಮ ಜ್ಯೋತಿ, ನೆನಪುಗಳ ಮಾತು ಮಧುರ ಮಾತಿನಲ್ಲಿಹೇಳಲಾರೆನು, ಬಾಳೊಂದು ಹೂಬನ ಹಾಗೂ ವಿವೇಕಾನಂದರ ಪುಸ್ತಕಗಳು ಸೇರಿದಂತೆ ನಾನಾ ವಿಚಾರದ ವಿವಿಧ ಪುಸ್ತಕಗಳನ್ನ ವಿತರಿಸಲಾಯಿತು.

NML 3

ಈ ಕಾರ್ಯಕ್ರಮವನ್ನು ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಎಸ್.ಮುನಿರಾಜು ಉದ್ಘಾಟಿಸಿ ಮಾತನಾಡಿ, ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬಳಸಿಕೊಂಡು ಕನ್ನಡದ ಅಭಿಮಾನವನ್ನು ಹೆಚ್ಚು ಮಾಡಬೇಕು. ಕನ್ನಡ ಪುಸ್ತಕಗಳನ್ನು ನೀವೆಲ್ಲರೂ ಓದಿ ಇತರರಿಗೂ ಪುಸ್ತಕವನ್ನು ನೀಡಿ ಎಂದರು.

NML 1

ಇದೇ ವೇಳೆ ಸಾಹಿತಿಗಳಾದ ದ್ವಾರಾನುಕುಂಟೆ ಪಾತಣ್ಣ, ವೈ.ವಿ.ಹೆಚ್.ಜಯದೇವ್, ಪ್ರಸನ್ನ ಕುಮಾರ್, ನಾಗರಾಜ್ ಜಿ. ನಾಗಸಂದ್ರ, ಪಾಲಿಕೆ ಸದಸ್ಯ ಎನ್. ಲೋಕೇಶ್. ಟಿ.ಎಸ್.ಗಂಗರಾಜು, ಸಂದೀಪ್ ಸಿಂಗ್, ಬಿ.ಟಿ.ಶ್ರೀನಿವಾಸ್.ಪಿ.ಹೆಚ್.ರಾಜು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *