ಕೊಪ್ಪಳ: ಸಾಮಾನ್ಯವಾಗಿ ಅಡುಗೆ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ತೊಳೆದು, ತೊಳೆದ ಅಕ್ಕಿಯ ನೀರು ವೆಸ್ಟ್ ಎಂದು ಚೆಲ್ಲುವುದು ವಾಡಿಕೆ. ಆದರೆ ಈಗ ತೊಳೆದ ಅಕ್ಕಿ ನೀರನ್ನು ಯಾರು ಚೆಲ್ಲಬೇಡಿ ಬದಲಾಗಿ ಕುಡಿಯಿರಿ ಎಂದು ವೈದ್ಯರು ಹೇಳುತ್ತಿದ್ದಾರೆ.
ಭತ್ತದ ಕಣಜವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಈಗ ಹೊಸ ಟ್ರೆಂಡ್ ಆರಂಭವಾಗಿದೆ. ಮಹಿಳೆಯರು ಅಡುಗೆಯ ಮುನ್ನ ಅಕ್ಕಿಯನ್ನು ತೊಳೆದು ಅದೇ ನೀರನ್ನು ಕುಡಿಯುತ್ತಿದ್ದಾರೆ. ಈ ನೀರು ಕುಡಿಯುವುದರಿಂದ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಾಗುತ್ತೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಈ ನೀರು ಕುಡಿಯುವುದರಿಂದ ನೆಗಡಿ, ಕೆಮ್ಮು, ಜ್ವರ ಮತ್ತು ವೈರಲ್ ಸೋಂಕು ಬರುವುದಿಲ್ಲ. ಅಷ್ಟೇ ಅಲ್ಲದೇ ಕೊರೊನಾ ಬರದಂತೆ ಕೂಡ ಎಚ್ಚರವಹಿಸಬಹುದಾಗಿದೆ. ಇದೇ ನೀರನ್ನು ಮುಖಕ್ಕೆ ಹಾಕಿಕೊಂಡರೆ ಮುಖದಲ್ಲಿ ಕಾಂತಿ ಹೆಚ್ಚಿಸುತ್ತದೆ ಎಂದು ಗಂಗಾವತಿಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವಡಿ ಹೇಳುತ್ತಾರೆ.
ಅಕ್ಕಿಯ ಮೇಲ್ಪದರಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಮ್ ಅಧಿಕವಾಗಿರುತ್ತದೆ. ಅಕ್ಕಿ ತೊಳೆದಾಗ ಮೇಲ್ಪದರಿನಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ತೊಳೆದುಕೊಂಡು ವ್ಯರ್ಥವಾಗುತ್ತದೆ. ಅದಕ್ಕಾಗಿ ಅಡುಗೆ ಮಾಡುವ ಮಹಿಳೆಯರು ಅಕ್ಕಿ ತೊಳೆದ ನೀರನ್ನು ಚೆಲ್ಲದೆ ಕುಡಿಯಿರಿ. ದೇಹದಲ್ಲಿ ಇಮ್ಯುನಿಟಿ ಬೆಳೆಯುವುದರಿಂದ ದೇಹದಲ್ಲಿ ಕೊರೊನಾ ಸೋಂಕು ನಿಯಂತ್ರಸಿಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ :ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್