ಕೊರೊನಾ ಎರಡನೇ ಅಲೆ ನಮ್ಮ ಇಮ್ಯುನಿಟಿಯನ್ನು ಎದುರಿಸುವಷ್ಟು ಶಕ್ತಿ ಪಡೆದಿದೆ – ಬೊಮ್ಮಾಯಿ

Public TV
1 Min Read
BASAVARAJ BOMMAI 1

ಹಾವೇರಿ: ಕೊರೊನಾ ಎರಡನೇ ಅಲೆ ನಮ್ಮ ಇಮ್ಯುನಿಟಿಯನ್ನು ಎದುರಿಸುವಷ್ಟು ಶಕ್ತಿ ಪಡೆದಿದೆ. ಜನರು ಸಹ ಪ್ರಾರಂಭದಲ್ಲೇ ಇದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೋಂ ಐಸೋಲೇಶನ್ ನಲ್ಲಿದ್ದವರು ಏನಾದರೂ ತೊಂದರೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆಗೆ ಒಳಗಾಗಬೇಕು ಎಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

corona 2 1

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಕೊರೊನಾ ಎರಡನೇ ಅಲೆ ಬಗ್ಗೆ ಜನರು ಹೊರಗಡೆ ಓಡಾಡೋವಾಗ ಗಂಭೀರವಾಗಿ ವಿಚಾರ ಮಾಡಬೇಕು. ಬಲಪ್ರಯೋಗ ಇಲ್ಲದೆ ನಿಯಂತ್ರಣ ಮಾಡಬೇಕು ಎಂಬ ಆದೇಶವಿದೆ. ಪೊಲೀಸ್ ಇಲಾಖೆ ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ. ಮೊದಲನೇ ಅಲೆಯ ಸಮಯದಲ್ಲಿ ಉಪಚಾರದಿಂದ ಸಾವಿನ ದವಡೆಗೆ ಹೋಗದಂತೆ ತಡೆಗಟ್ಟಲು ಸಾಧ್ಯವಿತ್ತು. ಎರಡನೆ ಅಲೆ ವೇಗವಾಗಿ ಹರಡುತ್ತಿದೆ. ಇದು ನಮ್ಮ ಔಷಧಿಯನ್ನು ಮೀರಿಸುವಂತಿದೆ ಎಂದು ಅಭಿಪ್ರಾಯಪಟ್ಟರು.

LOCKDOWN 6

ಕೊರೊನಾದ ಮಧ್ಯೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಎಲ್ಲ ಸ್ಥಿತಿ ಎದುರಿಸೋ ತರಬೇತಿ ಇರುತ್ತೆ. ಲಾಕ್‍ಡೌನ್‍ಗೆ ಜನರು ಸ್ವಯಂಪ್ರೇರಿತವಾಗಿ ಸಹಕಾರ ಕೊಡಬೇಕು. ಜನರ ಸಹಕಾರದಿಂದ ಲಾಕ್‍ಡೌನ್ ಸಂಪೂರ್ಣ ಯಶಸ್ವಿ ಆಗುತ್ತದೆ. ಹಗಲು ರಾತ್ರಿ ಎನ್ನದೆ ಆಕ್ಸಿಜನ್ ಪೂರೈಕೆ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲೆಲ್ಲಿಂದ ಸಾಧ್ಯವೋ ಅಲ್ಲಿಂದ ಆಕ್ಸಿಜನ್ ತರಿಸೋ ವ್ಯವಸ್ಥೆ ಮಾಡುತ್ತಿದ್ದೇವೆ. ಲಾಕ್‍ಡೌನ್ ಆದ್ಮೇಲೆ ಸೋಂಕಿತರ ಸಂಖ್ಯೆ ಕನಿಷ್ಠ ಹೆಚ್ಚಾಗುತ್ತಿಲ್ಲ. ಹದಿನಾಲ್ಕು ದಿನಗಳ ನಂತರ ಇದರ ಫಲಿತಾಂಶ ಗೊತ್ತಾಗಲಿದೆ. ಕಡಿಮೆ ಆಗುತ್ತದೆ ಎಂಬ ವಿಶ್ವಾಸವಿದೆ, ತಜ್ಞರು ಕೂಡ ಅದನ್ನೆ ಹೇಳುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *