ಬೆಂಗಳೂರು: ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಕೊರೊನಾ ತನ್ನ ರೌದ್ರತೆಯನ್ನ ತೋರಿಸುತ್ತಿದೆ. ಕರ್ನಾಟಕದಲ್ಲಂತೂ ಕೊರೊನಾ ಸಮುದಾಯದ ಹಂತಕ್ಕೆ ತಲುಪಿ ಆತಂಕ ಸೃಷ್ಟಿಸಿದೆ. ದೊಡ್ಡ ದೊಡ್ಡ ವಿಜ್ಞಾನಿಗಳು ಲಸಿಕೆ ಕಂಡ ಹಿಡಿಯಲು ಹಗಲು- ರಾತ್ರಿ ಕೆಲ ಮಾಡ್ತಿದ್ದಾರೆ. ಆದರೆ ಇನ್ನೂ ಲಸಿಕೆ ಸಿಕ್ಕಿಲ್ಲ. ಆದ್ರೆ ಈ ಕೊರೊನಾಗೆ ಆಯುರ್ವೇದ ಔಷಧಿ ರಾಮಬಾಣವಾಗಿ ಕೆಲಸ ಮಾಡುತ್ತೆ ಅಂತ ಖ್ಯಾತ ಆಯುರ್ವೇದ ವೈದ್ಯ ಡಾ. ವಿನಯ್ ಎಸ್ ಸಿಂಗರಾಜಪುರ ಹೇಳುತ್ತಾರೆ.
ಕೊರೊನಾ ರೋಗದ ವಿರುದ್ಧ ಹೋರಾಟ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಕುರಿತು ವಿಶೇಷ ಉಪನ್ಯಾಸವನ್ನ ಸರ್ಕಾರದ ಸಚಿವಾಲಯ ನೌಕರರಿಗೆ ಹಮ್ಮಿಕೊಳ್ಳಲಾಗಿತ್ತು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಆರ್ಯುವೇದ ವೈದ್ಯ ಡಾ. ವಿನಯ್ ಎಸ್ ಸಿಂಗರಾಜಪುರ ಆಯುರ್ವೇದ ಶಕ್ತಿಯ ಬಗ್ಗೆ ಮಾಹಿತಿ ನೀಡಿದ್ರು. ಅಲ್ಲದೆ ಉಚಿತ ಆಯುರ್ವೇದ ಔಷಧಿಯನ್ನ ನೌಕರರಿಗೆ ವಿತರಣೆ ಮಾಡಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ವಿನಯ್ ಎಸ್ ಸಿಂಗರಾಜಪುರ, ಕೊರೊನಾ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಔಷಧಿ ಇದೆ. ಅಗತ್ಯ ಆಯುರ್ವೇದ ಔಷಧಿ ಬಳಿಕೆ ಮಾಡಿದ್ರೆ ಕೊರೊನಾದಿಂದ ದೂರ ಉಳಿಯಬಹುದು ಅಂತ ತಿಳಿಸಿದರು.
ಈಗಾಗಲೇ 10 ಸಾವಿರ ಕಿಟ್ ಗಳನ್ನು ನಾವು ಜನರಿಗೆ ನೀಡಿದ್ದೇವೆ. ಕಿಟ್ ಉಪಯೋಗಿಸಿದ ಎಲ್ಲರೂ ಆರೋಗ್ಯವಾಗಿ ಇದ್ದಾರೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ನಮ್ಮ ಆಯುರ್ವೇದ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಅಂತ ತಿಳಿಸಿದ್ರು.
ರೋಗ ನಿರೋಧಕ ಶಕ್ತಿ ವೃದ್ಧಿಸೋದು, ಉತ್ತಮ ಆರೋಗ್ಯ ಪದ್ದತಿಗೆ ಆಯುರ್ವೇದ ರಾಮಬಾಣವಾಗಿ ಕೆಲಸ ಮಾಡುತ್ತೆ. ವಿವಿಧ ಆಯುರ್ವೇದ ಔಷಧಿಗಳು ಕೊರೊನಾ ತಡೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಅಂತ ತಿಳಿಸಿದರು. ಜೀವನದಲ್ಲಿ ಆಯುರ್ವೇದ ಪದ್ದತಿ ಅಳವಡಿಕೆ ಮಾಡಿಕೊಂಡು ಎಚ್ಚರಿಕೆ ಜೀವನ ನಡೆಸಿದ್ರೆ ಕೊರೊನಾ ವಿರುದ್ದ ಗೆಲ್ಲೋಕೆ ಸಾಧ್ಯ ಅಂತ ತಿಳಿಸಿದರು.