ಮಡಿಕೇರಿ: ಕುಡಿಕೆಯೊಂದರಲ್ಲಿ ವಾಮಾಚಾರ ಮಾಡಿ ಗ್ರಾಮದಲ್ಲಿ ತಂದಿಟ್ಟಿರುವುದನ್ನು ಗಮನಿಸಿದ ಗ್ರಾಮಸ್ಥರು ಅತಂಕ ಒಳಗಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯಗ್ರಾಮದಲ್ಲಿ ನಡೆದಿದೆ.
ಗುಹ್ಯ ಗ್ರಾಮದಲ್ಲಿ ರಾತ್ರಿ ಗ್ರಾಮದ ಮೂರು ರಸ್ತೆಗಳು ಸೇರುವ ಜಾಗದಲ್ಲಿ ವಾಮಾಚಾರ ಮಾಡಿದ್ದಾರೆ. ರಸ್ತೆಯಲ್ಲಿ ಕುಡಿಕೆಗೆ ಕೆಂಪುಬಟ್ಟೆ ಕಟ್ಟಿ ಇಟ್ಟ ಕಿಡಿಗೇಡಿಗಳು ಅಲ್ಲಿಂದ ಹೋಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಇದೀಗ ಅತಂಕ ಒಳಗಾಗಿದ್ದಾರೆ.
ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವಾಮಾಚಾರ ಅಗಿದೆ. ಇದರಿಂದ ಗ್ರಾಮದ ಜನತೆ ಅತಂಕಗೊಂಡಿದ್ದಾರೆ. ಯಾರೋ ಈ ರೀತಿಯಲ್ಲಿ ಗ್ರಾಮದಲ್ಲಿ ರಸ್ತೆಯಲ್ಲಿ ಮಡಿಕೆ ಇಟ್ಟಿದ್ದಾರೆ. ಆದರೆ ಇದು ವಾಮಾಚಾರ ಮಾಡಿರುವುದಾ ಎಂಬುದು ಇನ್ನು ನಿಖರವಾಗಿಲ್ಲ. ಆದರೆ ಇದರಿಂದ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ.