ಭೋಪಾಲ್: ಸ್ಟ್ಯಾಂಡಪ್ ಕಾಮಿಡಿಯಲ್ಲಿ ದೇವರನ್ನೇ ಅಪಹಾಸ್ಯ ಮಾಡಿ ಅರೆಸ್ಟ್ ಆಗಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಮುನವಾರ್, ಎಡ್ವನ್ ಆ್ಯಂಟಿನಿ, ಪ್ರಕಾಸ್ ವ್ಯಾಸ್, ಪ್ರಿಯಂ ವ್ಯಾಸ್ ಮತ್ತು ನಳಿನ್ ಯಾದವ್ ಎಂದು ಗುರುತಿಸಲಾಗಿದೆ. ಇವರು ಸ್ಟ್ಯಾಂಡಪ್ ಕಾಮಿಡಿಯಲ್ಲಿ ದೇವರು ಮತ್ತು ಗೃಹ ಸಚಿವರ ಮೇಲೆ ಹಾಸ್ಯಮಾಡಿ ಅವಮಾನಿಸಿದ್ದಾರೆ ಎಂದು ಪೊಲೀಸರು ಬಂಧಿಸಿದ್ದಾರೆ.
ದೇವರು ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕಾಮಿಡಿ ಶೋ ಒಂದರಲ್ಲಿ ಅಪಹಾಸ್ಯ ಮಾಡಿದ್ದಾನೆ ಎಂದು ಬಿಜೆಪಿ ಶಾಸಕಿ ಮಾಲಿನಿ ಲಕ್ಷ್ಮಣ್ ಸಿಂಗ್ ಅವರ ಪುತ್ರ ಏಕಲವ್ಯ ಸಿಂಗ್ ಕೌರ್ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಮಿಡಿ ಶೋನಲ್ಲಿ ಮುನಾವರ್ ದೇವರನ್ನು ಹಾಗೂ ಅಮಿತ್ ಷಾ ಅವರ ಮೇಲೆ ಅಪಹಾಸ್ಯ ಮಾಡಿದ್ದಾನೆ ಎಂದು ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆದಾರದ ಮೇಲೆ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.