ಕಾಡಾನೆ ಕೋಪಕ್ಕೆ ಮನೆಯ ಮುಂದೆ ನಿಲ್ಲಿಸಿದ ಸ್ಕೂಟಿ ಜಖಂ!

Public TV
1 Min Read
MDK ELEPHANT 1

ಮಡಿಕೇರಿ: ಕಾಡಾನೆಯೊಂದು ಮನೆಯಂಗಳದಲ್ಲಿ ನಿಲ್ಲಿಸಿದ ವಾಹನ ಮೇಲೆ ದಾಳಿ ನಡೆಸಿದ ಘಟನೆ ಕೊಡುಗೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಘಟನೆ ವಾಲ್ಲೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸುಬ್ರಮಣಿ ಎಂಬವರ ಪುತ್ರಿಗೆ ಸೇರಿದ ದ್ವಿಚಕ್ರ ವಾಹನಕ್ಕೆ ದಾಳಿ ಮಾಡಿದ ಒಂಟಿ ಸಲಗ ಸ್ಕೂಟಿ ಮೇಲೆ ಮನಸೋ ಇಚ್ಚೆ ಹಾನಿ ಮಾಡಿದೆ. ಮನೆಯ ಮುಂದಿನ ಹೂಕುಂಡ, ಮತ್ತು ಇತರೆ ವಸ್ತುಗಳನ್ನು ನಾಶ ಮಾಡುತ್ತಿರುವ ಸಂದರ್ಭ ತಡರಾತ್ರಿ ಟಾರ್ಚ್ ಹಿಡಿದು ಹೊರ ಬಂದು ಸುಬ್ರಮಣಿಯವರ ಪುತ್ರಿ ಮೇಲೂ ಸಲಗ ದಾಳಿಗೆ ಮುಂದಾಗಿದೆ.

MDK ELEPHANT 2 medium

ಇದೇ ರೀತಿ ಪಕ್ಕದ ತೋಟದಲ್ಲೂ ಬೈಕೊಂದರ ಮೇಲೆ ದಾಳಿ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿನ ನಿತ್ಯ ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಉಪಟಳ ಹೆಚ್ಚಾಗಿರುವುದರಿಂದ ಗ್ರಾಮದ ಜನರು ರಾತ್ರಿವೇಳೆ ಮನೆಯಿಂದ ಹೋರಗೆ ಬರದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳಿಂದ ತಮ್ಮಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *