– ಸ್ಥಳೀಯರಲ್ಲಿ ಮತ್ತಷ್ಟು ಆತಂಕ
ಬಳ್ಳಾರಿ: ಕಳೆದ ವಾರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಎದುರುಗಡೆ ಮನೆಯ ಮತ್ತೊಬ್ಬ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ನಗರದ ಗಣೇಶ ಕಾಲೋನಿಯ ಕಂಟೈನ್ಮೆಂಟ್ ಝೋನ್ ನಲ್ಲಿ ಇಂದು ಮತ್ತೊಬ್ಬ ವೃದ್ಧ ಸಾವಿಗೀಡಾಗಿದ್ದಾನೆ. ಕಳೆದ ವಾರ ಗಣೇಶ ಕಾಲೋನಿಯಲ್ಲೇ 61 ವರ್ಷದ ವೃದ್ಧ ಕೊರೊನಾದಿಂದ ಸಾವಿಗೀಡಾಗಿದ್ದ. ಇದೀಗ ವೃದ್ದನ ಎದರು ಮನೆಯ ಮತ್ತೊಬ್ಬ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ಇಂದು ಸಾವಿಗೀಡಾದ ವ್ಯೆಕ್ತಿ ಪರ್ಶ್ವವಾಯುವಿನಿಂದ ಬಳತ್ತಿದ್ದ. ಆದರೆ ಸಾಯುವ ಮೊದಲು, ಉಸಿರಾಟದ ಸಮಸ್ಯೆ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಹೀಗಾಗಿ ವೃದ್ಧನ ಸಾವಿನ ಬಳಿಕ ಆತನ ಗಂಟಲು ದ್ರವವನ್ನು ವೈದ್ಯರು ಪರೀಕ್ಷೆಗೆ ಕಳುಹಿಸಿದ್ದಾರೆ. ಲ್ಯಾಬ್ ವರದಿ ಬರುವ ವರೆಗೆ ಶವ ಹಸ್ತಾಂತರ ಮಾಡದಿರುವ ಬಗ್ಗೆ ಆರೋಗ್ಯ ಇಲಾಖೆ ಚರ್ಚೆ ನಡೆಸಿದೆ. ವೃದ್ಧನ ಸಾವು ಜನರಲ್ಲಿ ಭಾರೀ ಆತಂಕವನ್ನುಂಟು ಮಾಡಿದೆ.