ಕರುವನ್ನು ದಾನ ನೀಡಿ ಜನ್ಮ ದಿನಾಚರಣೆ ಆಚರಿಸಿದ ಅಮೂಲ್ಯ ದಂಪತಿ

Public TV
1 Min Read
amulya

ಬೆಂಗಳೂರು: ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ, ಪತಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿರುವ ಕೆಲವು ಫೋಟೋಗಳನ್ನು ಅಮೂಲ್ಯ ಜಗದೀಶ್ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

amulya 2

ಅಮೂಲ್ಯ ಪತಿ ಜಗದೀಶ್ ಅವರು ಇತ್ತೀಚಿಗಷ್ಟೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಗದೀಶ್ ಹಟ್ಟುಹಬ್ಬವನ್ನು ಆರ್ ಆರ್ ನಗರದ ಕೊರೊನಾ ವಾರಿಯರ್ ತಂಡದ ಸ್ನೇಹಿತರು ಆಚರಣೆ ಮಾಡಿದ್ದಾರೆ. ರೈತರೊಬ್ಬರಿಂದ ಕರುವನ್ನು ಕೊಂಡು ಅದಕ್ಕೆ ‘ರಾಮ’ ಎಂದು ನಾಮಕರಣ ಮಾಡಿದ್ದಾರೆ. ನಂತರ ಗೋಶಾಲೆಗೆ ದಾನ ನೀಡುವ ಮೂಲಕ ಜನ್ಮದಿನದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಈ ಫೋಟೋ ಅಮುಲ್ಯಾ ಜಗದೀಶ್ ಫೇಸ್‍ಬುಕ್ ಖಾತೆಯಲ್ಲಿವೆ ಶೇರ್ ಆಗಿವೆ. ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿದ ದಂಪತಿಯ ಕಾರ್ಯಕ್ಕೆ ಮೆಚ್ಚಿದ ನೆಟ್ಟಿಗರು ಕಾಮೆಂಟ್‍ಗಳ ಸುರಿಮಳೆಗೈದಿದ್ದಾರೆ.

amulya3

ರೈತರೊಬ್ಬರಿಂದ ಕರುವನ್ನು ಕೊಂಡು ‘ರಾಮ’ ಎಂದು ನಾಮಕರಣ ಮಾಡಿ, ರಾಷ್ಟ್ರೋತ್ಥಾನ ಗೋಶಾಲೆಗೆ ದಾನವಾಗಿ ನೀಡುವ ಮೂಲಕವಾಗಿ ನನ್ನ ಜನ್ಮದಿನವನ್ನು ಆಚರಿಸಿದ್ದೇವೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಜಗದೀಶ್ ಅವರು ಸೋಷಿಲ್‍ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಜನ್ಮದಿನಕ್ಕೆ ರಾಜರಾಜೇಶ್ವರಿ ನಗರದ ಕೊರೋನಾ ವಾರಿಯರ್ಸ್ ತಂಡದ ನನ್ನ ಸ್ನೇಹಿತರು ರೈತರೊಬ್ಬರಿಂದ ಕರುವನ್ನು ಕೊಂಡು “ರಾಮ” ಎಂದು ನಾಮಕರಣ…

Posted by Amulya & Jagdish on Saturday, 6 February 2021

 

ಇತ್ತೀಚೆಗಷ್ಟೆ ಅಮೂಲ್ಯ ದಂಪತಿ ರಾಮಮಂದಿರ ನಿರ್ಮಾಣಕ್ಕೆ ಬರೋಬ್ಬರಿ 1.50 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಈ ಕುರಿತಾಗಿ ಅಮೂಲ್ಯ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಪತಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *