ಲಕ್ನೋ: ಒಳ ಉಡುಪನ್ನು ಕದ್ದು ಧರಿಸಿದಕ್ಕೆ ವ್ಯಕ್ತಿಯನ್ನು ಆತನ ಸಹೋದ್ಯೋಗಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತನಿಖೆ ವೇಳೆ ಆರೋಪಿ ಬಾಂಡಾ ಜಿಲ್ಲೆಯ ಅಜಯ್ ಕುಮಾರ್ ಹಾಗೂ ಮೃತಪಟ್ಟ ವ್ಯಕ್ತಿಯನ್ನು ಬ್ರಹೇಚ್ನ ವಿವೇಕ್ ಶುಕ್ಲಾ ಎಂದು ಗುರುತಿಸಲಾಗಿದೆ. ಇಬ್ಬರು ಕಾನ್ಪುರ ದೇಹತ್ ಜಿಲ್ಲೆ ಫ್ಯಾಕ್ಟರಿವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ ಫ್ಯಾಕ್ಟರಿ ನೀಡಿದ್ದ ಒಂದೇ ಕೊಠಡಿಯಲ್ಲಿ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು.
ಒಮ್ಮೆ ಕುಚೇಷ್ಟೆ ಮಾಡಲೆಂದು ಅಜಯ್ ಕುಮಾರ್, ವಿವೇಕ್ ಶುಕ್ಲಾ ಒಳ ಉಡುಪನ್ನು ಕದ್ದು ಧರಿಸಿದ್ದಾನೆ. ವಿಷಯ ತಿಳಿದು ಕೋಪಗೊಂಡ ಆರೋಪಿ ವಿವೇಕ್ ಶುಕ್ಲಾ, ಅಜಯ್ ಕುಮಾರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೋಪ ವಿಕೋಪಕ್ಕೆ ತಿರುಗಿ ಆರೋಪಿ ಶುಕ್ಲಾ ತರಕಾರಿ ಕತ್ತರಿಸು ಚಾಕುವಿನಿಂದ ಅಜಯ್ ಕುಮಾರ್ಗೆ ಸತತವಾಗಿ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಅಜಯ್ ಕುಮಾರ್ ಸ್ಥಳದಿಂದ ಓಡಲು ಆರಂಭಿಸಿದ್ದಾನೆ. ಬಳಿಕ ಮತ್ತೊಬ್ಬ ಸಹೋದ್ಯೋಗಿ ಅಸ್ವಸ್ಥಗೊಂಡ ಅಜಯ್ ಕುಮಾರ್ರನ್ನು ಕೂಡಲೇ ಕಾನ್ಪುರದ ಲಾಲ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೋತ್ತಿಗಾಗಲೇ ಅಜಯ್ ಕುಮಾರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಪೊಲೀಸರು ಐಪಿಸಿ ಸೆಕ್ಷನ್ಗಳ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಕುರಿತಂತೆ ಕಾರ್ಖಾನೆಯ ಮಾಲೀಕರು, ಸಹೋದ್ಯೋಗಿಗಳ ವಿಚಾರಣೆ ನಡೆಸುತ್ತಿದ್ದಾರೆ.