– ಶವವನ್ನು ಕಾಲುವೆಯಲ್ಲಿ ಎಸೆದು ಹೋದ್ರು
ಪಾಟ್ನಾ: 13 ವರ್ಷದ ಬಾಲಕನ ಕಣ್ಣು ಕಿತ್ತು, ಕುತ್ತಿಗೆ ಮತ್ತು ತಲೆಗೆ ಹೊಡೆದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಕಾಲುವೆಗೆ ಎಸೆದು ಹೋಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಹತ್ಯೆಯಾದ ಬಾಲಕನನ್ನು ಸೌರಭ್ ಕುಮಾರ್(13) ಎಂದು ಗುರುತಿಸಲಾಗಿದೆ. ಕಾಶಾ ವಾರ್ಡ್ 3ರ ನಿವಾಸಿಯಾಗಿದ್ದಾನೆ. ಬಾಲಕನ ಶವವನ್ನು ವಾರ್ಡ್ 5ರ ಮುಟ್ಕರಿಯಾ ಕಾಲುವೆಯ ದಂಡೆಯಿಂದ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಸೌರಭ್ ನಿನ್ನೆ ಸಂಜೆ ವಾರ್ಡ್ 4ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಊಟ ಮಡುತ್ತಿದ್ದನು. ಈ ವೇಳೆ ದುಷ್ಕರ್ಮಿಗಳು ಅಲ್ಲಿಂದ ಬಾಲಕನನ್ನು ಅಪಹರಿಸಿದ್ದಾರೆ. ಬಾಲಕನ ಕುತ್ತಿಗೆ ಮತ್ತು ತಲೆಗೆ ಇರಿದು ನಂತರ ಕಣ್ಣು ಕಿತ್ತು ಅತ್ಯಂತ ಕ್ರೂರವಾಗಿ ಬಾಲಕನನ್ನು ಕೊಂದು ಮುಟ್ಕರಿಯಾ ಕಾಲುವೆ ಬಳಿ ಎಸೆದಿದ್ದಾರೆ.
ಬಾಲಕ ಕಾಣದೇ ಇರುವುದನ್ನು ಗಮನಿಸಿದ ಪೋಷಕರು ಎಲ್ಲೆಡೆ ಹುಡುಕಲು ಪ್ರಾರಂಭಿಸಿದ್ದಾರೆ. ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಬಾಲಕ ನಿನ್ನೆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಅಲ್ಲಿ ಊಟ ಮಾಡಲು ಹೋದವ ನಂತರ ಕಾಣೆಯಾಗಿದ್ದಾನೆ ಎಂದು ಪೋಷಕರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಳಗ್ಗೆ ದಾರಿಹೋಕರೊಬ್ಬರು ಕಾಲುವೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನ ದೇಹವನ್ನು ನೋಡಿ ಕುಟುಂಬದವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಬಾಲಕನ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಪ್ರಕರಣ ಬಿಹಾರ್ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.