ಭುವನೇಶ್ವರ: ಇತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಮದುವೆಗಳು ಮರಿಯುತ್ತಿದೆ. ಅಂತೆಯೇ ಇದೀಗ ಒಡಿಶಾದಲ್ಲಿ ಕೂಡ ಇಂತದ್ದೇ ಇಂದು ವಿಚಿತ್ರ ಘಟನೆ ನಡೆದಿದೆ.
ಔತಣ ಕೂಟದಲ್ಲಿ ಮಟನ್ ಊಟ ಹಾಕಿಸಿಲ್ಲವೆಂದು ಸಿಟ್ಟಿಗೆದ್ದ ವರ, ವಧುವಿನ ಬದಲು ಬೇರೊಬ್ಬಳಿಗೆ ತಾಳಿ ಕಟ್ಟುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ. ಇದನ್ನೂ ಓದಿ: ಬೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು!
ಈ ಘಟನೆ ಮನತಿರಾ ಎಂಬ ಗ್ರಾಮದಲ್ಲಿ ನಡೆದಿದೆ. ರಮಾಕಾಂತ್ ಪತ್ರಾ ಎಂಬ ವರ ಸಿಟ್ಟಿನಿಂದ ಬೇರೊಬ್ಬಳಿಗೆ ತಾಳಿ ಕಟ್ಟುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಮದುವೆ ಶಾಸ್ತ್ರಕ್ಕೂ ಮುನ್ನ ಔತಣ ಕೂಡ ಏರ್ಪಡಿಸಲಾಗಿತ್ತು. ವರನ ಕಡೆಯವರು ಈ ಔತಣ ಕೂಟದಲ್ಲಿ ಮಟನ್ ಊಟ ತಯಾರು ಮಾಡುವಂತೆ ವಧುವಿನ ಕಡೆಯವರಿಗೆ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಅವರು ಮಟನ್ ಊಟ ರೆಡಿ ಮಾಡಿರಲಿಲ್ಲ. ಹೀಗಾಗಿ ವರ ಅಲ್ಲಿಯೇ ಮದುವೆ ಕ್ಯಾನ್ಸಲ್ ಮಾಡಿದ್ದಾನೆ. ಇದನ್ನೂ ಓದಿ: ಪತ್ರಿಕೆ ಓದಲು ತಡವರಿಸಿದ ವರ – ಮದುವೆ ಮುರಿದುಕೊಂಡ ವಧು
ಇತ್ತ ವರನ ವಥ್ನೆ ನೋಡಿದ ವಧುವಿನ ಕಡೆಯವರು ಪರಿ ಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ ವರ ಮಾತ್ರ ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪದೆ ಅಲ್ಲಿಂದ ಹೊರಟಿದ್ದಾನೆ. ಅಲ್ಲದೆ ಅದೇ ಗ್ರಾಮದ ಯುವತಿಯೊಬ್ಬಳ ಜೊತೆ ಮದುವೆಯಾಗಿದ್ದಾನೆ. ಆದರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.