Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಒಲುಮೆಯ ಕವಿ ದೊಡ್ಡರಂಗೇಗೌಡ್ರಿಗೆ ಹಾವೇರಿ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ

Public TV
Last updated: January 23, 2021 10:39 am
Public TV
Share
4 Min Read
HVR
SHARE

ಹಾವೇರಿ: ನಗರದಲ್ಲಿ ಇದೇ ಫೆಬ್ರುವರಿ 26, 27 ಹಾಗೂ 28 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದೊಡ್ಡರಂಗೇಗೌಡರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.

ಕವಿ, ಪ್ರಾಧ್ಯಾಪಕ, ವಿದ್ವಾಂಸ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಹೀಗೆ ಹಲವು ರೀತಿಯಲ್ಲಿ ಶೋಭಾಯಮಾನರಾಗಿ ಕನ್ನಡ ನಾಡಿನಲ್ಲಿ ಪ್ರಕಾಶಮಾನರಾಗಿದ್ದು, ಇವೆಲ್ಲ ಗುಣಗಳನ್ನೂ ಸವಿಪಾಕವಾಗಿ ಎಂಬಂತೆ ಸರಳ ಸಜ್ಜನಿಕೆಯಲ್ಲಿ ಬೆಸೆದಂತಿರುವ ನಮ್ರತೆಯ ಹಿರಿಯ ಚೇತನರು ದೊಡ್ಡರಂಗೇಗೌಡರು.

ಶ್ರೀಯುತ ರಂಗೇಗೌಡರು ಮತ್ತು ಅಕ್ಕಮ್ಮನವರ ಮಗನಾಗಿ 1946ರ ಫೆಬ್ರವರಿ 7ರಂದು ಜನಿಸಿದ ದೊಡ್ಡರಂಗೇಗೌಡರು ಕುರುಬರ ಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಪದವಿ, 1972 ರಲ್ಲಿ ಎಂ.ಎ. ಪದವಿ ಪಡೆದರು. ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಜಾನಪದದ ಕುರಿತು ಅವರು ವಿಶೇಷ ಅಧ್ಯಯನ ಕೈಗೊಂಡರು. 2004 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ‘ನವೋದಯ ಕಾವ್ಯ: ಒಂದು ಪುನರ್ ಮೌಲ್ಯಮಾಪನ ಎಂಬ ಮಹಾಪ್ರಬಂಧಕ್ಕಾಗಿ ಅವರು ಡಾಕ್ಟರೇಟ್ ಪದವಿ ಲಭಿಸಿದೆ.

1972ರಿಂದ ಬೆಂಗಳೂರು ನಗರದ ಕೃಷ್ಣರಾಜಮಾರುಕಟ್ಟೆ ಬಳಿಯಲ್ಲಿನ ‘ಎಸ್.ಎಲ್.ಎನ್. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ದೊಡ್ಡರಂಗೇಗೌಡರು 2002ರಲ್ಲಿ ನಿವೃತ್ತರಾಗಿದ್ದಾರೆ. ಅವರು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿ ಸಹ ಕೆಲಸ ಮಾಡಿದ್ದಾರೆ. ಕನ್ನಡ ನಾಡು ಅವರನ್ನು ವಿಧಾನ ಪರಿಷತ್ತಿಗೂ ಬರಮಾಡಿಕೊಂಡಿದೆ. ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಲ್ಲೂ ಅವರ ಸೇವೆ ಸಂದಿದೆ.

ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ಡಾ. ದೊಡ್ಡರಂಗೇಗೌಡರು ನೂರಾರು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟರಾಗಿ ಕಂಗೊಳಿಸಿದ್ದಾರೆ. 1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌಡರ ಕವನ ಸಂಕಲನ ‘ಕಣ್ಣು ನಾಲಗೆ ಕಡಲು ಕಾವ್ಯ ಕೃತಿಗೆ ಬಹುಮಾನ ಬಂದಿದೆ. 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇವರ ‘ಪ್ರೀತಿ ಪ್ರಗಾಥ ಕೃತಿಯು ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು. ರತ್ನಾಕರವರ್ಣಿ ಮುದ್ದಣ ಕಾವ್ಯ ಪ್ರಶಸ್ತಿ ಗೌರವ ಲಭಿಸಿದೆ.

2694bb55 830c 4451 89ac bea4d024005b

ದೊಡ್ಡರಂಗೇಗೌಡರು ನವ್ಯ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ವಿಶೇಷ ಛಾಪು ಮೂಡಿಸಿದ್ದು ಅವರ ಕಾವ್ಯ ಸಂಕಲನಗಳಾದ ‘ಜಗಲಿ ಹತ್ತಿ ಇಳಿದು, ‘ಕಣ್ಣು ನಾಲಿಗೆ ಕಡಲು, ‘ನಾಡಾಡಿ’, ‘ಮೌನ ಸ್ಪಂದನ, ‘ಏಳು ಬೀಳಿನ ಹಾದಿ, ‘ಕುದಿಯುವ ಕುಲುಮೆ, ‘ಚದುರಂಗದ ಕುದುರೆಗಳು, ‘ಯುಗವಾಣಿ, ‘ಅವತಾರ ಐಸಿರಿ’, ‘ಬದುಕು ತೋರಿದ ಬೆಳಕು, ‘ಹೊಸ ಹೊನಲು, ‘ಲೋಕಾಯಣ’, ‘ನಿಕ್ಷೇಪ, ‘ಗೆಯ್ಮೆ’ ಮುಂತಾದವು ಕನ್ನಡ ಕಾವ್ಯ ರಸಿಕರ ಮತ್ತು ವಿಮರ್ಶಕರ ನಲ್ಮೆ ಸಂಪಾದಿಸಿವೆ. ಅವರ ‘ಪ್ರೀತಿ ಪ್ರಗಾಥ ಮತ್ತು ‘ಹಳ್ಳಿ ಹುಡುಗಿ ಹಾಡು-ಪಾಡು ಪ್ರಗಾಥಗಳ ಸಾಲಿಗೆ ಸೇರಿವೆ. ಮುಕ್ತಕಗಳಲ್ಲಿ ‘ಮಣ್ಣಿನ ಮಾತುಗಳು, ‘ಮಿಂಚಿನ ಗೊಂಚಲು ಪ್ರಧಾನವಾಗಿವೆ. ದೊಡ್ಡರಂಗೇಗೌಡರು ಗದ್ಯಕೃತಿಗಳಲ್ಲೂ ಸಮಾನ ಕೃಷಿ ನಡೆಸಿದ್ದು ‘ವರ್ತಮಾನದ ವ್ಯಂಗ್ಯದಲ್ಲಿ, ‘ವಿಚಾರ ವಾಹಿನಿ, ‘ವಿಶ್ವಮುಖಿ’, ‘ದಾರಿ ದೀಪಗಳು ಮುಂತಾದ ಕೃತಿಗಳನ್ನು ನೀಡಿದ್ದಾರೆ. ‘ಅನನ್ಯನಾಡು ಅಮೆರಿಕ ಮತ್ತು ‘ಪಿರಮಿಡ್ಡುಗಳ ಪರಿಸರದಲ್ಲಿ ದೊಡ್ಡರಂಗೇಗೌಡರ ಪ್ರವಾಸ ಕಥನಗಳು. ದೊಡ್ಡರಂಗೇಗೌಡರು ಅನೇಕ ಭಕ್ತಿಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಶ್ರೀಸಿದ್ದೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ, ನೂರೆಂಟು ನಮನ, ಶ್ರೀ ಗುರುಚರಣದಲ್ಲಿ, ವಚನವಾರಿದಿ ಇವುಗಳಲ್ಲಿ ಪ್ರಮುಖವಾಗಿವೆ.

ಕನ್ನಡ ಚಲನಚಿತ್ರಗೀತೆಗಳಲ್ಲಿ ಜಾನಪದ, ನವ್ಯ ಸಾಹಿತ್ಯಗಳ ಸೊಬಗನ್ನು ತುಂಬಿದ ಕೀರ್ತಿವಂತರಲ್ಲಿ ದೊಡ್ಡರಂಗೇಗೌಡರು ಪ್ರಮುಖರಾಗಿ ಕಾಣುತ್ತಾರೆ. ಭಾರತೀಯ ಸಾಮಾನ್ಯನ ಆಪ್ತ ಮಾಧ್ಯಮಗಳಾದ ಸಿನಿಮಾ, ದೂರದರ್ಶನ, ರೇಡಿಯೋ ಹಾಗೂ ಶ್ರವ್ಯಮಾಧ್ಯಮಗಳಲ್ಲಿ ದೊಡ್ಡರಂಗೇಗೌಡರು ಅಪಾರ ಸಾಧನೆ ಮಾಡಿರುವುದನ್ನು ನೆನೆದಾಗ ಅವರನ್ನು ಅರಿಯದ ಕನ್ನಡಿಗನೇ ಇಲ್ಲ ಎಂಬುದು ಮನವರಿಕೆಯಾಗುತ್ತದೆ.

ಎಪ್ಪತ್ತರ ದಶಕದಲ್ಲಿ ಮೂಡಿಬಂದ ‘ಮಾಗಿಯ ಕನಸು ಚಿತ್ರದ ‘ಬಂದಿದೆ ಬದುಕಿನ ಬಂಗಾರದಾ ದಿನ ಗೀತೆಯೊಂದಿಗೆ ಚಿತ್ರರಂಗಕ್ಕೆ ಬಂದ ದೊಡ್ಡರಂಗೇಗೌಡರು ಕನ್ನಡ ಚಿತ್ರರಂಗಕ್ಕೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಬಂಗಾರದಂತಹ ಗೀತೆಗಳನ್ನು ನೀಡುತ್ತಾ ಬಂದಿದ್ದಾರೆ. ‘ಬಂಗಾರದ ಜಿಂಕೆಯ ‘ಒಲುಮೆ ಸಿರಿಯಾ ಕಂಡು, ‘ಪರಸಂಗದ ಗೆಂಡೆತಿಮ್ಮನ ‘ತೇರ ಏರಿ ಅಂಬರದಾಗೆ, ‘ನೋಟದಾಗೆ ನಗೆಯಾ ಮೀಟಿ’ ಮತ್ತು ‘ನಿನ್ನ ರೂಪು ಎದೆಯ ಕಲಕಿ’, ‘ಕಿಲಾಡಿ ಜೋಡಿ’ಯ ‘ಆಡಬೇಕು ಕರಾಟೆ ಆಡಬೇಕು; ‘ಭೂಲೋಕದಲ್ಲಿ ಯಮರಾಜನ’ ‘ಎಂದೂ ಕಾಣದ ಬೆಳಕು ಕಂಡೆ, ‘ಪಡುವಾರಳ್ಳಿ ಪಾಂಡವರ, ‘ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ಮರೆಯಲಿ, ‘ಸುವರ್ಣ ಸೇತುವೆಯ ‘ಮಲೆನಾಡಿನ್ ಮೂಲೆನ್ಯಾಗೆ ಇತ್ತೊಂದು ಸಣ್ಣ ಹಳ್ಳಿ, ‘ಅರುಣ ರಾಗದ ನಾನೊಂದು ತೀರ ನೀನೊಂದು ತೀರ, ‘ಹುಲಿ ಹೆಜ್ಜೆಯ ‘ಕಂಡದ್ದು ಕಂಡ್ಹಾಂಗೆ, ‘ಬೆಳ್ಳಿ ಕಾಲುಂಗುರದ ‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ’, ‘ಮತ್ಸರದ ಹೊತ್ತಾರೆ ಸೂರ್ಯನಂಗೆ, ‘ಶರವೇಗದ ಸರದಾರನ ‘ಕನ್ನಡನಾಡಿನ ರನ್ನದ ರತುನ, ಆಲೆಮನೆಯ ‘ನಮ್ಮೂರ ಮಂದಾರ ಹೂವೆ, ‘ಎಲ್ಲ ಮೇಲು ಕೀಳು ಸುಳ್ಳು ಭೇದಭಾವ ಬಗೆದ ಮನುಜ ಕಣೋ; ‘ಪ್ರಾಯ ಪ್ರಾಯ ಪ್ರಾಯದ ‘ಭೂಮೀ ತಾಯಾಣೆ ನೀ ಇಷ್ಟ ಕಣೆ, ‘ಟೋನಿಯ ‘ಆನಂದವೇ ಮೈತುಂಬಿದೆ ಮತ್ತು ‘ನೀಲಿಯ ಬಾನಿಂದ; ‘ಹೃದಯಗೀತೆಯ ‘ಹೃದಯ ಗೀತೆ ಹಾಡುತಿರೆ, ‘ಜನುಮದ ಜೋಡಿ’ಯ ‘ಕೋಲು ಮಂಡೆ ಜಂಗಮ ದೇವರು, ‘ಅಶ್ವಮೇಧದ ಹೃದಯ ಸಮುದ್ರ ಕಲಕಿ’, ‘ದೊಡ್ಡಮನೆ ಎಸ್ಟೇಟಿ’ನ ‘ಮನಸಿನಾಗೆ ಕೂಗಿದೆ ಇತ್ಯಾದಿ ಇತ್ಯಾದಿಯಾಗಿ ದೊಡ್ಡರಂಗೇಗೌಡರ ರಂಗುರಂಗಿನ ಪ್ರಸಿದ್ಧ ಹಾಡುಗಳನ್ನೇ ಪುಟಗಟ್ಟಲೆ ಪಟ್ಟಿ ಮಾಡಬಹುದು. ಅವರು ರಚಿಸಿದ ಚಿತ್ರಗೀತೆಗಳ ಸಂಖ್ಯೆಯೇ ಆರು ಶತಕಗಳನ್ನು ದಾಟಿವೆ. ‘ಮಾವು ಬೇವು, ‘ಗೀತವೈಭವ, ‘ಕಾವ್ಯ-ಕಾವೇರಿ’, ‘ತಂಗಾಳಿ, `ಪ್ರೀತಿ ಭಾವನೆ, `ಪ್ರೇಮಪಯಣ’, `ಹೃದಯದಹಕ್ಕಿ, `ಹೋಳಿಹುಣ್ಣಿಮೆ, ‘ಯುಗಾದಿಚೈತ್ರೋತ್ಸವ, `ಮಾವು ಮಲ್ಲಿಗೆ, `ಭೂಮಿ ಬಾನು, `ಸಿರಿ ಸಂವರ್ಧನ, ‘ನಲ್ಮೆ ನೇಸರ, ‘ರಾಗರಂಗು, ‘ಅಂತರಂಗದಹೂಬನ ಮುಂತಾದವು ದೊಡ್ಡರಂಗೇಗೌಡರ ಕ್ಯಾಸೆಟ್-ಸಿಡಿ ಲೋಕದ ಸುಂದರ ಕೊಡುಗೆಗಳು. ಭಕ್ತಿಗೀತೆಗಳಲ್ಲೂ ಅವರ ಕ್ಯಾಸೆಟ್-ಸಿಡಿಗಳು ಸಾಕಷ್ಟು ಧ್ವನಿಮಾಡಿವೆ.

ಸಾಹಿತ್ಯ ಮತ್ತು ಸಿನಿಮಾಲೋಕಗಳೆರಡರಲ್ಲೂ ದೊಡ್ಡರಂಗೇಗೌಡರು ಕನ್ನಡ ನಾಡಿನ ಹಲವಾರು ವಿಶಿಷ್ಟ ಗೌರವಗಳಿಗೆ ಪಾತ್ರರಾಗಿದ್ದಾರೆ. ಇದೀಗ ಹಾವೇರಿಯಲ್ಲಿ ಜರುಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

TAGGED:Doddarange GowdahaveriKannada Sahitya SammelanPublic TVಕನ್ನಡ ಸಾಹಿತ್ಯ ಸಮ್ಮೇಳನದೊಡ್ಡ ರಂಗೇ ಗೌಡಪಬ್ಲಿಕ್ ಟಿವಿಹಾವೇರಿ
Share This Article
Facebook Whatsapp Whatsapp Telegram

You Might Also Like

soliga girl
Chamarajanagar

ಬರ್ತ್ ಸರ್ಟಿಫಿಕೇಟ್ ಇಲ್ಲದೇ ಸಿಗದ ಆಧಾರ್ ಕಾರ್ಡ್ – ನಿತ್ಯ 30 ರೂ. ಬಸ್ ಚಾರ್ಜ್ ಕೊಟ್ಟು ಸೋಲಿಗ ಬಾಲಕಿ ಶಾಲೆಗೆ ಓಡಾಟ

Public TV
By Public TV
2 hours ago
Rafale
Latest

ಆಪರೇಷನ್‌ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್‌ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್‌ ಏವಿಯೇಷನ್‌ ಸ್ಪಷ್ಟನೆ

Public TV
By Public TV
2 hours ago
DK Shivakumar Bhupendar Yadav
Karnataka

ಎತ್ತಿನಹೊಳೆ ಯೋಜನೆಗೆ ಅಡ್ಡಿ ಎದುರಾಗುತ್ತಾ? – ಕೇಂದ್ರ ನಾಯಕರ ಸಹಕಾರ ಕೇಳಿದ ಡಿಕೆಶಿ

Public TV
By Public TV
2 hours ago
Mallikarjun Kharge and draupadi murmu
Latest

ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು `ಮುರ್ಮಾಜೀ’ ಎಂದು ಉಚ್ಛರಿಸಿ ಅಪಮಾನ ಮಾಡಿದ ಖರ್ಗೆ

Public TV
By Public TV
2 hours ago
Nimisha Priya
Latest

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು

Public TV
By Public TV
2 hours ago
Aravind Limbavali GM Siddeshwar
Davanagere

ದಾವಣಗೆರೆಯಲ್ಲಿ ಅತೃಪ್ತರ ಬಲ ಪ್ರದರ್ಶನ – ಬಿಎಸ್‌ವೈ ವಿರುದ್ಧ ಸಿದ್ದೇಶ್ವರ್, ಲಿಂಬಾವಳಿ ಗುಡುಗು

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?