ನವದೆಹಲಿ: ವಿದೇಶಗಳಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆ ಸ್ವದೇಶಕ್ಕೆ ಭಾರತೀಯರನ್ನು ಕರೆ ತರಲು ಆರಂಭಿಸಿದ ಒಂದೇ ಭಾರತ್ ಮಿಷನ್ ಕಾರ್ಯಚರಣೆ ಮೂಲಕ ಐದು ಲಕ್ಷ ಮಂದಿ ಭಾರತಕ್ಕೆ ವಾಪಸ್ ಆಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
860 ಏರ್ ಇಂಡಿಯಾ ವಿಮಾನಗಳು, 1,256 ಚಾರ್ಟರ್ಡ್ ವಿಮಾನಗಳು ಮತ್ತು ಎಂಟು ನೌಕಾ ಹಡಗುಗಳು ಮೂಲಕ 137 ದೇಶಗಳಿಂದ 5.03 ಲಕ್ಷ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಈ ಕಾರ್ಯಾಚರಣೆಯಲ್ಲಿ ವೃದ್ದರು, ಆರೋಗ್ಯ ಸಂಬಂಧಿ ತೊಂದರೆಗೆ ಒಳಗಾದವರು, ಮಹಿಳೆಯರು ಮಕ್ಕಳು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ವೀಸಾ ಅವಧಿ ಮುಗಿದ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗಿದೆ.
ಮೇ 7ರಿಂದ 15ರವರೆಗೆ ಮೊದಲ ಹಂತ, ಮೇ 17ರಿಂದ 22ರವರೆಗೆ ಎರಡನೇ ಹಂತದಲ್ಲಿ ಕಾರ್ಯಚರಣೆ ಮಾಡಲಾಗಿತ್ತು ಬಳಿಕ ಎರಡನೇ ಹಂತವನ್ನು ಜೂನ್ 10 ರವರೆಗೆ ವಿಸ್ತರಿಸಿತಲಾಗಿತ್ತು. ವಿದೇಶಗಳಲ್ಲಿನ ಭಾರತೀಯ ಬೇಡಿಕೆ ಹಿನ್ನೆಲೆ ಜೂನ್ 11ರಿಂದ ಜುಲೈ 2ರವರೆಗೆ ಮೂರನೇ ಹಂತದಲ್ಲಿ ಭಾರತೀಯರನ್ನು ವಾಪಸ್ ಕರೆತರಲಾಗಿದೆ.
ಕೇರಳಕ್ಕೆ ಅತಿ ಹೆಚ್ಚು ಮಂದಿ ವಿದೇಶದಿಂದ ವಾಪಸ್ ಆಗಲಿದ್ದಾರೆ. ಇದನ್ನು ಬಿಟ್ಟರೆ ಉತ್ತರ ಪ್ರದೇಶ, ಬಿಹಾರ್, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶದಕ್ಕೆ ಹೆಚ್ಚು ಮಂದಿ ವಾಪಸ್ ಆಗಲಿದ್ದಾರೆ.