ನವದೆಹಲಿ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ವೈರಲ್ ಆಗಿದ್ದು, ಇದನ್ನು ನೋಡಿದ ಬಹುತೇಕರು ಆಘಾತಕ್ಕೊಳಗಾಗಿದ್ದಾರೆ. ಆದರೆ ಈ ಬಗ್ಗೆ ಕೊನೆಗೆ ಸಿಂಧು ಸ್ಪಷ್ಟಪಡಿಸಿದ್ದಾರೆ.
ನಿವೃತ್ತಿಯ ಪೋಸ್ಟ್ ಬಗ್ಗೆ ಟ್ವೀಟ್ ಮಾಡಿರುವ ಪಿ.ವಿ.ಸಿಂಧು, ಐ ರಿಟೈರ್ ಎಂದು ದೊಡ್ಡ ಅಕ್ಷರದಲ್ಲಿ ಬರೆದಿದ್ದಾರೆ. ಇದಕ್ಕೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಆರಂಭದಲ್ಲಿ ಈ ಪೋಸ್ಟ್ ನೋಡಿದವರಿಗೆ ಶಾಕ್ ಆಗಿದೆ.
ಡೆನ್ಮಾರ್ಕ್ ಓಪನ್ ವಾಸ್ ಫೈನಲ್ ಸ್ಟ್ರಾ, ಐ ರಿಟೈರ್ ಎಂದು ಮೊದಲ ಪುಟದಲ್ಲಿ ಬರೆದಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದ್ದಾರೆ. ಆರಂಭದಲ್ಲಿ ಕುತೂಹಲ ಕೆರಳಿಸುವಂತೆ ಪತ್ರ ಬರೆಯಲಾಗಿದ್ದು, ಅವರ ಅಭಿಮಾನಿಗಳು ಸಹ ಅಷ್ಟೇ ಕುತೂಹಲವಾಗಿ ಒದಿದ್ದಾರೆ. ಆರಂಭದಲ್ಲಿ ಹಾಗೇ ಅನಿಸಿದರೂ, ಪಿವಿ ಸಿಂಧು ಪತ್ರದ ಕೊನೆಗೆ ಯಾವುದಕ್ಕೆ ವಿದಾಯ ಹೇಳಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಭಾವನೆಗಳನ್ನು ಸ್ವಚ್ಛಗೊಳಿಸಿ ಆಗಮಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಇದರೊಂದಿಗೆ ನಾನು ಹೋರಾಟ ನಡೆಸುತ್ತಿದ್ದೇನೆ. ಇದು ನನಗೆ ತಪ್ಪು ಅನ್ನಿಸುತ್ತಿದೆ. ನಿಮಗೆ ಗೊತ್ತಾ, ಹೀಗಾಗಿಯೇ ನಾನು ಇಂದು ಈ ಬರವಣಿಗೆ ಮೂಲಕ ನಿಮಗೆ ತಿಳಿಸುತ್ತಿದ್ದೇನೆ. ಇದರಿಂದ ಆಘಾತವಾಗಿದೆ, ವಿಚಲಿತರಾಗಿದ್ದೀರಿ ಎಂಬುದು ತಿಳಿದಿದೆ. ಆದರೆ ನೀವು ಓದುವುದನ್ನು ಮುಗಿಸುವಷ್ಟರಲ್ಲಿ ನನ್ನ ಅನಿಸಿಕೆ ಏನು ಎಂಬುದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಇದಕ್ಕೆ ನೀವೂ ಬೆಂಬಲ ಸೂಚಿಸುತ್ತೀರಿ ಎಂಬ ಭರವಸೆ ನನಗಿದೆ ಎಂದು 25 ವರ್ಷದ ಆಟಗಾರ್ತಿ ಪತ್ರದಲ್ಲಿ ತಿಳಿಸಿದ್ದಾರೆ.
???? pic.twitter.com/W7uw2IvF4S
— Pvsindhu (@Pvsindhu1) November 2, 2020
ಕೊರೊನಾ ಮಹಾಮಾರಿ ನನ್ನ ಕಣ್ಣು ತೆರೆಸಿದೆ. ನನ್ನ ವಿರುದ್ಧದ ಕಠಿಣ ಸ್ಪರ್ಧಾಳುಗಳ ವಿರುದ್ಧ ಹೋರಾಡುವುದಕ್ಕೆ ನಾನು ತಯಾರಾಗಿದ್ದೇನೆ. ಹಲ್ಲು ಹಾಗೂ ಉಗುರಿನಿಂದ ಹಿಡಿದು ಆಟದ ಕೊನೆಯ ಶಾಟ್ ಎದುರಿಸುವ ಬಗೆಯನ್ನು ಅರಿತಿದಿದ್ದೇನೆ. ಈ ಹಿಂದೆಯೂ ನಾನು ಇದನ್ನು ಮಾಡಿದ್ದೇನೆ, ಮತ್ತೆ ಮಾಡುತ್ತೇನೆ. ಆದರೆ ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೇಗೆ ಹೋರಾಡುವುದು? ಇಡೀ ಜಗತ್ತು ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ವೈರಸ್ನಿಂದಾಗಿ ತಿಂಗಳುಗಟ್ಟಲೇ ಮನೆಯಲ್ಲೇ ಇರಬೇಕಾಯಿತು. ಈಗಲೂ ನಾವು ಹೊರಗೆ ಕಾಲಿಡಬೇಕೆಂದರೆ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಮನಕಲಕುವ ಹಲವು ಕಥೆಗಳನ್ನು ಕೇಳಿದಾಗ, ನೋಡಿದಾಗ ನನಗೆ ನಾನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಈ ಜಗತ್ತಿನಲ್ಲಾ ನಾವಿರುವುದು ಎಂಬ ಪ್ರಶ್ನೆ ಕಾಡುತ್ತಿದೆ. ನಾನು ಪ್ರತಿನಿಧಿಸುತ್ತಿರುವ ಡೆನ್ಮಾರ್ಕ್ ಓಪನ್ ಕೊನೆಯ ಪಂದ್ಯ ಅಲ್ಲ. ಇಂದು ನಾನು ಋಣಾತ್ಮಕತೆ, ಹೆದರಿಕೆ, ಅನಿಶ್ಚಿತತೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಾವು ಕುಗ್ಗಬೇಕಾಗಿಲ್ಲ, ಇದಕ್ಕೆ ನಾವು ಹೆಚ್ಚಿನ ರೀತಿ ಸಿದ್ಧರಾಗಬೇಕಿದೆ. ಎಲ್ಲರೂ ಸೇರಿ ಈ ವೈರಸ್ನ್ನು ಸೋಲಿಸಬೇಕಿದೆ. ಇಂದು ನಾವು ಮಾಡುವ ಆಯ್ಕೆಗಳು ನಮ್ಮು ಭವಿಷ್ಯ ಹಾಗೂ ಮುಂದಿನ ಪೀಳಿಗೆಯನ್ನು ನಿರ್ಧರಿಸುತ್ತವೆ. ಇದನ್ನು ವುಗಳನ್ನು ನಿಭಾಯಿಸುವುದರಿಂದ ನಾವು ಹಿಂದೆ ಸರಿಯಬಾರದು ಎಂದು ಕರೆ ನೀಡಿದ್ದಾರೆ.
ಈ ಪೋಸ್ಟ್ ಓದಿ ನಿಮಗೆ ಶಾಕ್ ಆಗಬಹುದು. ಇದು ನಿಮಗೆ ತಿಳಿಯಬೇಕೆಂದು ಈ ರೀತಿ ಮಾಡಿದೆ. ಸುರಂಗ ದಾಟಿದ ಬಳಿಕ ಬೆಳಕು ಹೊಳೆಯುತ್ತದೆ ಎಂಬ ಭರವಸೆಯನ್ನು ನಾವು ಹೊಂದಬೇಕು. ಹೌದು ಡೆನ್ಮಾರ್ಕ್ ಓಪನ್ ನಡೆಯಲಿಲ್ಲ. ಆದರೆ ನಾನು ತಯಾರಿ ನಡೆಸುವುದನ್ನು ಬಿಡಲಿಲ್ಲ. ಜೀವನ ನಿಮ್ಮ ಬಳಿ ಬರುವಾಗ ತುಂಬಾ ಕಠಿಣವಾಗಿರುತ್ತದೆ. ಹೀಗಾಗಿ ನಾನು ಈಗ ಏಷ್ಯಾ ಓಪನ್ಗೆ ತಯಾರಾಗುತ್ತಿದ್ದೇನೆ. ನಾವು ಸುರಕ್ಷಿತ ಜಗತ್ತಿಗೆ ತಲುಪುವವರೆಗೆ ನಮ್ಮ ಕೆಲಸವನ್ನು ಮಾಡಲೇಬೇಕು ಎಂದು ಕೊರೊನಾ ಸಂದರ್ಭದ ಕಷ್ಟಗಳ ಬಗ್ಗೆ ಬರೆದಿದ್ದಾರೆ.