ಐಪಿಎಲ್‍ನಲ್ಲಿ ದೇಶೀಯ ಆಟಗಾರರ ಕಮಾಲ್ – ಯಾರು ಈ ಶಿವಂ ಮಾವಿ, ನಾಗರಕೋಟಿ

Public TV
2 Min Read
Kamlesh Nagarkoti Shivam Mavi

– ನಾಗರಕೋಟಿ ಬಗ್ಗೆ ದ್ರಾವಿಡ್ ಹೇಳಿದ್ದೇನು?

ನವದೆಹಲಿ: ಐಪಿಎಲ್‍ನಲ್ಲಿ ಈ ಬಾರಿ ಭಾರತದ ಸ್ಥಳೀಯ ಆಟಗಾರರೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಭಾರತದ ಯುವ ಆಟಗಾರರು ಐಪಿಎಲ್ ವೇದಿಕೆಯನ್ನು ಚೆನ್ನಾಗಿ ಬಳಿಸಿಕೊಳ್ಳುತ್ತಿದ್ದು, ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ.

ಈಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಲ್ಲಿ ಇಬ್ಬರು ದೇಶೀಯ ಬೌಲರ್ ಗಳು ಕಮಾಲ್ ಮಾಡುತ್ತಿದ್ದಾರೆ. ನಿನ್ನೆ ನಡೆದ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಶಿವಂ ಮಾವಿ ನಾಲ್ಕು ಓವರ್ ಬೌಲ್ ಮಾಡಿ ಪ್ರಮುಖ ಎರಡು ವಿಕೆಟ್ ಕಿತ್ತು ಕೇವಲ 20 ರನ್ ನೀಡಿದ್ದಾರೆ. ಈ ವೇಳೆ ಕೇವಲ 2 ಓವರ್ ಬೌಲ್ ಮಾಡಿದ ಕಮಲೇಶ್ ನಾಗರಕೋಟಿ ಎರಡು ವಿಕೆಟ್ ಕಿತ್ತು ಕೇವಲ 13 ರನ್ ನೀಡಿ ಕೋಲ್ಕತ್ತಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Kamlesh Nagarkoti

ಶಿವಂ ಮಾವಿ
ಶಿವಂ ಮಾವಿ ಉತ್ತರ ಪ್ರದೇಶ ರಾಜ್ಯ ತಂಡದ ಪ್ರಮುಖ ಆಲ್‍ರೌಂಡರ್ ಆಗಿದ್ದಾರೆ. ಜೊತೆಗೆ ಇವರು 2018ರಲ್ಲಿ ನಡೆದ ಅಂಡರ್-19 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಲ್ಲಿ ಉತ್ತಮವಾಗಿ ಆಡಿದ ನಂತರ, 2018ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ತಂಡ ಮೂರು ಕೋಟಿ ನೀಡಿ ಖರೀದಿ ಮಾಡಿತ್ತು. ರಾಜ್ಯ ತಂಡದಲ್ಲಿ ಉತ್ತಮ ಆಲ್‍ರೌಂಡರ್ ಆಗಿರುವ ಮಾವಿ ಸದ್ಯ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ವೇಗಿಯಾಗಿದ್ದಾರೆ.

Kamlesh Nagarkoti Shivam Mavi 2

2018ರ ಅಂಡರ್-19 ವಿಶ್ವಕಪ್‍ನಲ್ಲಿ ಭರ್ಜರಿಯಾಗಿ ಬೌಲ್ ಮಾಡಿದ್ದ ಶಿವಂ ಮಾವಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 3 ವಿಕೆಟ್ 45 ರನ್, ಪಪುವಾ ನ್ಯೂಗಿನಿ ವಿರುದ್ಧ 2 ವಿಕೆಟ್ 16 ರನ್ ಮತ್ತು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ 2 ವಿಕೆಟ್ 27 ರನ್ ನೀಡಿ ಸ್ಥಿರತೆಯನ್ನು ಪ್ರದರ್ಶನ ಮಾಡಿದ್ದರು. ಆದರೆ 2019ರಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಮಾವಿ ಐಪಿಎಲ್ ಆಡಿರಲಿಲ್ಲ. ಆದರೆ ಐಪಿಎಲ್-2020ಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ.

Kamlesh Nagarkoti Shivam Mavi Kolkata Knight Riders

ಕಮಲೇಶ್ ನಾಗರಕೋಟಿ
ಕಮಲೇಶ್ ನಾಗರಕೋಟಿ ಅವರು 2017ರ ಫೆಬ್ರವರಿ 26ರಂದು ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ಥಾನದ ಪರವಾಗಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯದ ಎರಡು ದಿನಗಳ ನಂತರ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದರು. ಈ ಮೂಲಕ ಲಿಸ್ಟ್-ಎ ಪಂದ್ಯಗಳಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ಮಾಡಿದರು. ನಂತರ ಅವರು 2018ರಲ್ಲಿ ನಡೆದ ಅಂಡರ್-19 ವಿಶ್ವಕಪ್‍ಗೆ ಆಯ್ಕೆಯಾಗಿದ್ದರು.

Kamlesh Nagarkoti 3

2018ರ ವಿಶ್ವಕಪ್‍ನಲ್ಲಿ ನಾಗರಕೋಟಿ ಅವರು ಗಂಟೆಗೆ 140 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದರು. ತಾನು ಆಡಿದ ನಾಲ್ಕೇ ಪಂದ್ಯದಲ್ಲಿ 7 ವಿಕೆಟ್ ಕಿತ್ತು ಎಲ್ಲರ ಗಮನ ಸೆಳೆದಿದ್ದರು. ಅಂದು ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಈತ ಮುಂದೊಂದು ದಿನ ಭಾರತಕ್ಕೆ ಉತ್ತಮ ಬೌಲರ್ ಮತ್ತು ಫೀಲ್ಡರ್ ಆಗುತ್ತಾನೆ. ಜೊತೆಗೆ ರವೀಂದ್ರ ಜಡೇಜಾ ಅವರಿಗೆ ಸ್ಫರ್ಧೆ ನೀಡುತ್ತಾನೆ ಎಂದು ಹೇಳಿದ್ದರು. ಕೋಲ್ಕತ್ತಾ ಈತನನ್ನು 2018 ಹಾರಾಜಿನಲ್ಲಿ ಬರೋಬ್ಬರಿ 3.2 ಕೋಟಿ ನೀಡಿ ಖರೀದಿ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *