ಐದು ವರ್ಷದ ಸಮಸ್ಯೆಗೆ ಒಂದೇ ಗಂಟೆಯಲ್ಲಿ ಉತ್ತರ ನೀಡಿದ ಬಸವ

Public TV
1 Min Read
MND Basava 2

– ಬಸಪ್ಪನ ಪವಾಡಕ್ಕೆ ಭಕ್ತರ ಉಘೇ ಉಘೇ

ಮಂಡ್ಯ: ಮಂಡ್ಯದ ಚೀರನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳಿಂದ ದೇವಸ್ಥಾನದ ಅರ್ಚಕನನ್ನು ನೇಮಕ ಮಾಡಲು ಜನರಲ್ಲಿ ಎದ್ದಿದ್ದ ಗೊಂದಲಗೆ ಬಸಪ್ಪ ಒಂದೇ ಗಂಟೆಯಲ್ಲಿ ಉತ್ತರ ನೀಡಿದ್ದಾನೆ.

MND Basava 3

ಚೀರನಹಳ್ಳಿ ಗ್ರಾಮದಲ್ಲಿ ಇರುವ ಉರುಗಮ್ಮದೇವಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಮಸಣಯ್ಯ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾರನ್ನು ಅರ್ಚಕರನ್ನಾಗಿ ನೇಮಕ ಮಾಡುವುದು ಎಂದು ಗ್ರಾಮದ ಜನರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಈ ಗೊಂದಲ ಬಗೆಹರಿಸಿಕೊಳ್ಳಲು ಇಂದು ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಗಿತ್ತು. ಗ್ರಾಮಕ್ಕೆ ಬಂದ ಬಸಪ್ಪನಿಗೆ ಗ್ರಾಮಸ್ಥರು ಪೂಜೆ ಮಾಡಿ ಬರ ಮಾಡಿಕೊಂಡರು. ನಂತರ ಊರಿನ ಹೊರಭಾಗದಲ್ಲಿ ಇರುವ ಕಲ್ಯಾಣಿಯ ಬಳಿ ಅರ್ಚಕ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಯಿತು. ಈ ವೇಳೆ ಚೀರನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಸೇರಿದ್ದರು.

MND Basava 1

ಈ ಸಂದರ್ಭದಲ್ಲಿ ಅಷ್ಟೊಂದು ಜನರ ಮಧ್ಯ ಇದ್ದ ಅದೇ ಗ್ರಾಮದ ಶಿವಣ್ಣ ಅವರನ್ನು ಬಸಪ್ಪ ಕೊಂಬಿನಿಂದ ತಿವಿದು ಆಯ್ಕೆಯ ಸೂಚನೆ ನೀಡಿತು. ಬಳಿಕ ಶಿವಣ್ಣ ಅವರನ್ನು ನೂಕಿಕೊಂಡು ಬಂದು ಕಲ್ಯಾಣಿಯ ಒಳಗೆ ತಳಿತು. ಈ ಮೂಲಕ ಗ್ರಾಮದಲ್ಲಿದ್ದ ಐದು ವರ್ಷದ ಸಮಸ್ಯೆಯಾದ ಅರ್ಚಕ ನೇಮಕಾತಿಯನ್ನು ಬಸಪ್ಪ ಒಂದೇ ಗಂಟೆಯಲ್ಲಿ ಬಗೆಹರಿಸಿತು. ಈ ಪವಾಡವನ್ನು ಕಂಡ ಜನರು ಉಘೇ ಉಘೇ ಎಂದು ಕೂಗಿದರು.

Share This Article
Leave a Comment

Leave a Reply

Your email address will not be published. Required fields are marked *